<p><strong>ವಿಜಯಪುರ:</strong> ‘ನಡೆದಾಡುವ ದೇವರು’ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾಗಿ ಮೂರು ದಿನಗಳಾದರೂ ಭಕ್ತರ ಮನದಲ್ಲಿ ಅಗಲಿಕೆ ನೋವು ಇನ್ನೂ ಮಡುಗಟ್ಟಿದೆ.</p>.<p>ಮನಸ್ಸಿಗೆ ಎಷ್ಟೇ ಸಮಾಧಾನ ತಂದುಕೊಳ್ಳಲು ಯತ್ನಿಸಿದರೂ ಶ್ರೀಗಳನ್ನು ಮರೆಯಲಾಗದೇ ಭಕ್ತರು ಚಡಪಡಿಸುತ್ತಿರುವುದು ಬುಧವಾರ ಆಶ್ರಮದ ಆವರಣದಲ್ಲಿ ಕಂಡುಬಂದಿತು.</p>.<p>ಮೂರ್ನಾಲ್ಕು ದಶಕಗಳಿಂದ ಶ್ರೀಗಳ ಪ್ರವಚನ ಆಲಿಸಿದ್ದ ಭಕ್ತರಿಗೆ ಈಗಲೂ ಶ್ರೀಗಳ ಅಗಲಿಕೆಯ ನೋವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. </p>.<p>ಶ್ರೀಗಳ ಪಾರ್ಥಿವ ಶರೀರದ ದರ್ಶನ ಮಾಡಿದ್ದರೂ ಸಹ ಮನಸ್ಸಿಗೆ ಸಮಾಧಾನವಾಗದೇ ಕೊನೆಯದಾಗಿ ಅವರ ಚಿತಾಭಸ್ಮಕ್ಕೆ ನಮಿಸಬೇಕೆಂದು ಬುಧವಾರ ದಿನವಿಡೀ ಸಹಸ್ರಾರು ಭಕ್ತರು ಆಶ್ರಮದತ್ತ ಬಂದು ಹೋಗುತ್ತಿರುವುದು ಭಕ್ತರ ಮತ್ತು ಶ್ರೀಗಳ ಅವಿನಾಭಾವ ಸಂಬಂಧವನ್ನು ಸಾಬೀತು ಪಡಿಸುತ್ತಿತ್ತು.</p>.<p>ಚಿತಾಭಸ್ಮಕ್ಕೆ ನಮಿಸಿ, ಆಶ್ರಮದ ಗಿಡಮರಗಳ ನೆರಳಲ್ಲಿ ಕುಳಿತು ಅವರ ನೆನಪುಗಳನ್ನು, ಪ್ರವಚನದ ಸಾರವನ್ನು ಮೆಲುಕು ಹಾಕಿ ನಿಟ್ಟುಸಿರು ಬಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.</p>.<p>ಆಶ್ರಮದ ಜ್ಞಾನ ಭಂಡಾರಕ್ಕೆ ಭೇಟಿ ನೀಡಿ ಶ್ರೀಗಳ ಅಮೂಲ್ಯ ಗ್ರಂಥಗಳನ್ನು, ಫೋಟೊಗಳನ್ನು ಖರೀದಿಸಿ ಅನೇಕರು ಮನೆಗೆ ತೆಗೆದುಕೊಂಡು ಹೋದರು.</p>.<p>ಶಾಸಕ ಎಂ.ಬಿ.ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ್ ಮತ್ತಿತರರು ಆಶ್ರಮಕ್ಕೆ ಭೇಟಿ ನೀಡಿ, ಬಸವಲಿಂಗ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶ್ರೀಗಳ ಚಿತಾಭಸ್ಮ ವಿಸರ್ಜನೆ ಹಾಗೂ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಿದರು.</p>.<p>ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಶ್ರೀಗಳ ಅಂತಿಮ ವಿಧಿವಿಧಾನಗಳು ಅವರ ಆಶಯದಂತೆ ಗೌರವಪೂರ್ವಕವಾಗಿ ನೆರವೇರಿದೆ. ಸರ್ಕಾರ, ಜನಪ್ರತಿನಿಧಿಗಳು, ಮಠಾಧೀಶರು, ಸಾರ್ವಜನಿಕರು, ಸಂಘ, ಸಂಸ್ಥೆಗಳು ಅಂತಿಮ ಯಾತ್ರೆಯನ್ನು ಶಾಂತ, ಶಿಸ್ತುಬದ್ಧವಾಗಿ ನೆರವೇರುವಂತೆ ಮಾಡಿದ್ದಾರೆ ಎಂದರು.</p>.<p>ಶ್ರೀಗಳ ಆಶಯಕ್ಕೆ ತಕ್ಕಂತೆ ಮುಂದಿನ ಕಾರ್ಯಗಳು ನಡೆಯಬೇಕಿದೆ. ನಿರಂತರವಾಗಿ ಆಧ್ಯಾತ್ಮಿಕ ಕಾರ್ಯ, ಪ್ರವಚನ, ದಾಸೋಹ ಕಾರ್ಯ ಆಶ್ರಮದಲ್ಲಿ ಮುಂದುವರಿಯಬೇಕಿದೆ. ಈ ಬಗ್ಗೆ ಸುತ್ತೂರು ಶ್ರೀ, ಕನ್ಹೇರಿ ಮಠದ ಶ್ರೀಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದರು.</p>.<p>***</p>.<p class="Briefhead">ಜನತೆಗೆ ಜಿಲ್ಲಾಧಿಕಾರಿ ಕೃತಜ್ಞತೆ</p>.<p>ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ, ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆ ಶಾಂತರೀತಿಯಲ್ಲಿ, ಭಕ್ತಿಮಯವಾಗಿ, ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ಕೃತಜ್ಞತೆ ಅರ್ಪಿಸಿದ್ದಾರೆ.</p>.<p>ಶ್ರೀಗಳ ಅಂತಿಮ ದರ್ಶನ, ಯಾತ್ರೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಂಡಿದ್ದರೂ ಸಹ ಶ್ರೀಗಳ ಮೇಲೆ ಇಟ್ಟಿರುವ ಅಪಾರ ಭಕ್ತಿಯಿಂದ 25 ಲಕ್ಷಕ್ಕಿಂತ ಹೆಚ್ಚಿನ ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಅತ್ಯಂತ ಸೌಜನ್ಯದಿಂದ ತಾಳ್ಮೆಯಿಂದ ವರ್ತಿಸಿ ಸಹಕರಿಸಿರುವುದು ಶ್ಲಾಘನೀಯ ಎಂದರು.</p>.<p>ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಹೊರಗಿನಿಂದ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ, ಶ್ರೀಗಳ ಅಂತಿಮಯಾತ್ರೆ ಸಾಗಿ ಹೋಗುವ ವಿವಿಧ ರಸ್ತೆಗಳಲ್ಲಿ ರಂಗೋಲಿ, ಆರತಿ ಬೆಳಗುವಿಕೆ ಮೂಲಕ ಸಹಕರಿಸಿದ ರೀತಿ ಅಭಿನಂದನಾರ್ಹವಾಗಿದೆ ಎಂದಿದ್ದಾರೆ.</p>.<p>ಜಿಲ್ಲಾಡಳಿತದೊಂದಿಗೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಶ್ರೀಗಳ ಆಶಯದಂತೆ ಅತ್ಯಂತ ಶಾಂತಿಯುತವಾಗಿ ನೆರವೇರಿಸಲು ಸಾಧ್ಯವಾಗಿರುವುದರಿಂದ ಎಲ್ಲ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.</p>.<p>***</p>.<p>25 ವರ್ಷದಿಂದ ಆಶ್ರಮದ ಭಕ್ತರು. ಅವರ ಆಸರೆಯಲ್ಲಿ ಬೆಳೆದವರು. ಅಪ್ಪೋರು ಬಯಲಲ್ಲಿ ಬಯಲಾದರು. ಆದರೆ, ನಾವು ಕಳೆದುಕೊಂಡ ದುಃಖ ಕಡಿಮೆಯಾಗುತ್ತಿಲ್ಲ.</p>.<p>ಸುಮಂಗಲಾ ಬಿರಾದಾರ, ಆದರ್ಶನಗರ, ವಿಜಯಪುರ</p>.<p>***</p>.<p>ಅಪ್ಪೋರದು ಏನು ವಾಣಿ, ಏನ್ ಮಾತ್ರೀ. ಅವರ ನೋಡಿದ್ರೆ ಮನಸ್ಸಿಗೆ ಸಮಾಧಾನ ಆಗುತ್ತಿತ್ತು. ಅವರಿಲ್ಲದೇ ಮನಸ್ಸಿಗೆ ಕೆಟ್ಟ ಅನಿಸಿದೆ. ಮನೆಯಲ್ಲಿ ಕೂರಲು ಆಗ್ತಿಲ್ಲ. </p>.<p>ಸಿದ್ದಮ್ಮ ದಳವಾಯಿ, ಗುಮಸ್ತ ಕಾಲೊನಿ, ವಿಜಯಪುರ</p>.<p>***</p>.<p>ಶ್ರೀಗಳ ಚಿತಾಭಸ್ಮಾವನ್ನು ಹಣೆಗೆ ಹಂಚಿಕೊಂಡು ಪಾವನ ಆಗಬೇಕು, ದುಃಖ ಕಡಿಮೆ ಮಾಡಿಕೊಳ್ಳಬೇಕು ಎಂದು ಬಂದಿದ್ದೇನೆ. ಅವರ ದರ್ಶನ, ಪ್ರವಚನವಿಲ್ಲದೇ ಬೇಸರವಾಗಿದೆ</p>.<p>–ಬೋರಮ್ಮ ಹಂಚಿನಾಳ, ಗುಮಾಸ್ತ ಕಾಲೊನಿ, ವಿಜಯಪುರ</p>.<p>***</p>.<p>ಶ್ರೀಗಳು ಅದೃಶ್ಯರಾದರೂ ಮರೆಯಲು ಸಾಧ್ಯವಾಗುತ್ತಿಲ್ಲ. ಸಹಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪೋರ ಚಿತಾಭಸ್ಮವನ್ನು ನೋಡಿ ಆಶೀರ್ವಾದ ಪಡೆದುಕೊಂಡು ಹೋಗಬೇಕೆಂದು ಬಂದಿದ್ದೇನೆ </p>.<p>–ಗೀತಾ ಅಂಗಡಿ, ಅಕ್ಕಿ ಕಾಲೊನಿ, ವಿಜಯಪುರ</p>.<p>***</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ನಡೆದಾಡುವ ದೇವರು’ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾಗಿ ಮೂರು ದಿನಗಳಾದರೂ ಭಕ್ತರ ಮನದಲ್ಲಿ ಅಗಲಿಕೆ ನೋವು ಇನ್ನೂ ಮಡುಗಟ್ಟಿದೆ.</p>.<p>ಮನಸ್ಸಿಗೆ ಎಷ್ಟೇ ಸಮಾಧಾನ ತಂದುಕೊಳ್ಳಲು ಯತ್ನಿಸಿದರೂ ಶ್ರೀಗಳನ್ನು ಮರೆಯಲಾಗದೇ ಭಕ್ತರು ಚಡಪಡಿಸುತ್ತಿರುವುದು ಬುಧವಾರ ಆಶ್ರಮದ ಆವರಣದಲ್ಲಿ ಕಂಡುಬಂದಿತು.</p>.<p>ಮೂರ್ನಾಲ್ಕು ದಶಕಗಳಿಂದ ಶ್ರೀಗಳ ಪ್ರವಚನ ಆಲಿಸಿದ್ದ ಭಕ್ತರಿಗೆ ಈಗಲೂ ಶ್ರೀಗಳ ಅಗಲಿಕೆಯ ನೋವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. </p>.<p>ಶ್ರೀಗಳ ಪಾರ್ಥಿವ ಶರೀರದ ದರ್ಶನ ಮಾಡಿದ್ದರೂ ಸಹ ಮನಸ್ಸಿಗೆ ಸಮಾಧಾನವಾಗದೇ ಕೊನೆಯದಾಗಿ ಅವರ ಚಿತಾಭಸ್ಮಕ್ಕೆ ನಮಿಸಬೇಕೆಂದು ಬುಧವಾರ ದಿನವಿಡೀ ಸಹಸ್ರಾರು ಭಕ್ತರು ಆಶ್ರಮದತ್ತ ಬಂದು ಹೋಗುತ್ತಿರುವುದು ಭಕ್ತರ ಮತ್ತು ಶ್ರೀಗಳ ಅವಿನಾಭಾವ ಸಂಬಂಧವನ್ನು ಸಾಬೀತು ಪಡಿಸುತ್ತಿತ್ತು.</p>.<p>ಚಿತಾಭಸ್ಮಕ್ಕೆ ನಮಿಸಿ, ಆಶ್ರಮದ ಗಿಡಮರಗಳ ನೆರಳಲ್ಲಿ ಕುಳಿತು ಅವರ ನೆನಪುಗಳನ್ನು, ಪ್ರವಚನದ ಸಾರವನ್ನು ಮೆಲುಕು ಹಾಕಿ ನಿಟ್ಟುಸಿರು ಬಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.</p>.<p>ಆಶ್ರಮದ ಜ್ಞಾನ ಭಂಡಾರಕ್ಕೆ ಭೇಟಿ ನೀಡಿ ಶ್ರೀಗಳ ಅಮೂಲ್ಯ ಗ್ರಂಥಗಳನ್ನು, ಫೋಟೊಗಳನ್ನು ಖರೀದಿಸಿ ಅನೇಕರು ಮನೆಗೆ ತೆಗೆದುಕೊಂಡು ಹೋದರು.</p>.<p>ಶಾಸಕ ಎಂ.ಬಿ.ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ್ ಮತ್ತಿತರರು ಆಶ್ರಮಕ್ಕೆ ಭೇಟಿ ನೀಡಿ, ಬಸವಲಿಂಗ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶ್ರೀಗಳ ಚಿತಾಭಸ್ಮ ವಿಸರ್ಜನೆ ಹಾಗೂ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಿದರು.</p>.<p>ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಶ್ರೀಗಳ ಅಂತಿಮ ವಿಧಿವಿಧಾನಗಳು ಅವರ ಆಶಯದಂತೆ ಗೌರವಪೂರ್ವಕವಾಗಿ ನೆರವೇರಿದೆ. ಸರ್ಕಾರ, ಜನಪ್ರತಿನಿಧಿಗಳು, ಮಠಾಧೀಶರು, ಸಾರ್ವಜನಿಕರು, ಸಂಘ, ಸಂಸ್ಥೆಗಳು ಅಂತಿಮ ಯಾತ್ರೆಯನ್ನು ಶಾಂತ, ಶಿಸ್ತುಬದ್ಧವಾಗಿ ನೆರವೇರುವಂತೆ ಮಾಡಿದ್ದಾರೆ ಎಂದರು.</p>.<p>ಶ್ರೀಗಳ ಆಶಯಕ್ಕೆ ತಕ್ಕಂತೆ ಮುಂದಿನ ಕಾರ್ಯಗಳು ನಡೆಯಬೇಕಿದೆ. ನಿರಂತರವಾಗಿ ಆಧ್ಯಾತ್ಮಿಕ ಕಾರ್ಯ, ಪ್ರವಚನ, ದಾಸೋಹ ಕಾರ್ಯ ಆಶ್ರಮದಲ್ಲಿ ಮುಂದುವರಿಯಬೇಕಿದೆ. ಈ ಬಗ್ಗೆ ಸುತ್ತೂರು ಶ್ರೀ, ಕನ್ಹೇರಿ ಮಠದ ಶ್ರೀಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದರು.</p>.<p>***</p>.<p class="Briefhead">ಜನತೆಗೆ ಜಿಲ್ಲಾಧಿಕಾರಿ ಕೃತಜ್ಞತೆ</p>.<p>ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ, ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆ ಶಾಂತರೀತಿಯಲ್ಲಿ, ಭಕ್ತಿಮಯವಾಗಿ, ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ಕೃತಜ್ಞತೆ ಅರ್ಪಿಸಿದ್ದಾರೆ.</p>.<p>ಶ್ರೀಗಳ ಅಂತಿಮ ದರ್ಶನ, ಯಾತ್ರೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಂಡಿದ್ದರೂ ಸಹ ಶ್ರೀಗಳ ಮೇಲೆ ಇಟ್ಟಿರುವ ಅಪಾರ ಭಕ್ತಿಯಿಂದ 25 ಲಕ್ಷಕ್ಕಿಂತ ಹೆಚ್ಚಿನ ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಅತ್ಯಂತ ಸೌಜನ್ಯದಿಂದ ತಾಳ್ಮೆಯಿಂದ ವರ್ತಿಸಿ ಸಹಕರಿಸಿರುವುದು ಶ್ಲಾಘನೀಯ ಎಂದರು.</p>.<p>ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಹೊರಗಿನಿಂದ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ, ಶ್ರೀಗಳ ಅಂತಿಮಯಾತ್ರೆ ಸಾಗಿ ಹೋಗುವ ವಿವಿಧ ರಸ್ತೆಗಳಲ್ಲಿ ರಂಗೋಲಿ, ಆರತಿ ಬೆಳಗುವಿಕೆ ಮೂಲಕ ಸಹಕರಿಸಿದ ರೀತಿ ಅಭಿನಂದನಾರ್ಹವಾಗಿದೆ ಎಂದಿದ್ದಾರೆ.</p>.<p>ಜಿಲ್ಲಾಡಳಿತದೊಂದಿಗೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಶ್ರೀಗಳ ಆಶಯದಂತೆ ಅತ್ಯಂತ ಶಾಂತಿಯುತವಾಗಿ ನೆರವೇರಿಸಲು ಸಾಧ್ಯವಾಗಿರುವುದರಿಂದ ಎಲ್ಲ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.</p>.<p>***</p>.<p>25 ವರ್ಷದಿಂದ ಆಶ್ರಮದ ಭಕ್ತರು. ಅವರ ಆಸರೆಯಲ್ಲಿ ಬೆಳೆದವರು. ಅಪ್ಪೋರು ಬಯಲಲ್ಲಿ ಬಯಲಾದರು. ಆದರೆ, ನಾವು ಕಳೆದುಕೊಂಡ ದುಃಖ ಕಡಿಮೆಯಾಗುತ್ತಿಲ್ಲ.</p>.<p>ಸುಮಂಗಲಾ ಬಿರಾದಾರ, ಆದರ್ಶನಗರ, ವಿಜಯಪುರ</p>.<p>***</p>.<p>ಅಪ್ಪೋರದು ಏನು ವಾಣಿ, ಏನ್ ಮಾತ್ರೀ. ಅವರ ನೋಡಿದ್ರೆ ಮನಸ್ಸಿಗೆ ಸಮಾಧಾನ ಆಗುತ್ತಿತ್ತು. ಅವರಿಲ್ಲದೇ ಮನಸ್ಸಿಗೆ ಕೆಟ್ಟ ಅನಿಸಿದೆ. ಮನೆಯಲ್ಲಿ ಕೂರಲು ಆಗ್ತಿಲ್ಲ. </p>.<p>ಸಿದ್ದಮ್ಮ ದಳವಾಯಿ, ಗುಮಸ್ತ ಕಾಲೊನಿ, ವಿಜಯಪುರ</p>.<p>***</p>.<p>ಶ್ರೀಗಳ ಚಿತಾಭಸ್ಮಾವನ್ನು ಹಣೆಗೆ ಹಂಚಿಕೊಂಡು ಪಾವನ ಆಗಬೇಕು, ದುಃಖ ಕಡಿಮೆ ಮಾಡಿಕೊಳ್ಳಬೇಕು ಎಂದು ಬಂದಿದ್ದೇನೆ. ಅವರ ದರ್ಶನ, ಪ್ರವಚನವಿಲ್ಲದೇ ಬೇಸರವಾಗಿದೆ</p>.<p>–ಬೋರಮ್ಮ ಹಂಚಿನಾಳ, ಗುಮಾಸ್ತ ಕಾಲೊನಿ, ವಿಜಯಪುರ</p>.<p>***</p>.<p>ಶ್ರೀಗಳು ಅದೃಶ್ಯರಾದರೂ ಮರೆಯಲು ಸಾಧ್ಯವಾಗುತ್ತಿಲ್ಲ. ಸಹಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪೋರ ಚಿತಾಭಸ್ಮವನ್ನು ನೋಡಿ ಆಶೀರ್ವಾದ ಪಡೆದುಕೊಂಡು ಹೋಗಬೇಕೆಂದು ಬಂದಿದ್ದೇನೆ </p>.<p>–ಗೀತಾ ಅಂಗಡಿ, ಅಕ್ಕಿ ಕಾಲೊನಿ, ವಿಜಯಪುರ</p>.<p>***</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>