<p><strong>ವಿಜಯಪುರ:</strong> ಸಮಾಜವಾದ ತತ್ವದಡಿ ಆಧುನಿಕ ಭಾರತ ಮತ್ತು ರಾಜಕೀಯ ಸಂಸ್ಕೃತಿಯನ್ನು ರೂಪಿಸುವಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಧ್ಯಕ್ಷ ಶರಣು ಮಸಳಿ ಹೇಳಿದರು.</p>.<p>ನಾಗಠಾಣದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಶಿಕ್ಷಕ ಸಂತೋಷ ಬಂಡೆ, ಭಾರತಕ್ಕೆ ಸಹಬಾಳ್ವೆಯ ಪರಂಪರೆಯನ್ನು ನೀಡಿ, ದೂರದೃಷ್ಟಿಯ ವಿಚಾರಗಳಿಂದ ನವ ಭಾರತದ ಸೃಷ್ಟಿಯಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದ್ದರು ಎಂದರು.</p>.<p>ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ, ಸಿಆರ್ಪಿ ಈರಣ್ಣ ಬಂಡೆ, ಈರಣ್ಣ ಹುಣಶ್ಯಾಳ, ಪ್ರಭು ಹಂಡಿ, ಅನಿಲ ಅಂಕದ, ಉಪನ್ಯಾಸಕ ಶ್ರೀಧರ ಬಂಡೆ ಇದ್ದರು.</p>.<p><strong>ಎಸಿಟಿ-ಶಾರದಾ ಪಬ್ಲಿಕ್ ಶಾಲೆ: </strong>‘ಮಕ್ಕಳು ರಾಷ್ಟ್ರದ ಬೆನ್ನೆಲುಬು; ಮಕ್ಕಳ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿದೆ. ಮಕ್ಕಳು ಸಚ್ಚಾರಿತ್ರ್ಯದ ಆದರ್ಶ ಗುಣಗಳನ್ನು ರೂಢಿಸಿಕೊಂಡು ದೇಶಕ್ಕೆ ಕೀರ್ತಿ ತರುವಂಥ ಸಾಧಕರಾಗಬೇಕು’ ಎಂದುಎಸಿಟಿ-ಶಾರದಾ ಪಬ್ಲಿಕ್ ಶಾಲೆ ಉಪಪ್ರಾಚಾರ್ಯ ಮಹೇಂದ್ರ ಎಂ.ಎನ್. ಹೇಳಿದರು.</p>.<p>ಎಸಿಟಿ-ಶಾರದಾ ಪಬ್ಲಿಕ್ ಶಾಲೆಯಲ್ಲಿ ಪಂಡಿತ್ ಜವಾಹರಲಾಲ ನೆಹರು ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಲೆಯ ಪ್ರಾಚಾರ್ಯ ಜಿಮೇಶ್ ಪೌಲ್, ಮಕ್ಕಳಲ್ಲಿ ಬಾಲ್ಯದಲ್ಲಿಯೇ ಶ್ರೇಷ್ಠ ಗುರಿಗಳನ್ನು ಹೊಂದುವ ಮತ್ತು ಸುಭದ್ರ ಜೀವನ ನೆಲೆಯನ್ನು ಕಂಡುಕೊಳ್ಳುವ ಆದರ್ಶ ತತ್ವಗಳನ್ನು ಶಿಕ್ಷಣವು ಕಲಿಸಿಕೊಡುತ್ತದೆ ಎಂದರು.</p>.<p>ಶಿಕ್ಷಕ ಮುತ್ತುರಾಜ ಸಂಕಣ್ಣವರ ನೇತೃತ್ವದಲ್ಲಿ ಶಾಲೆಯ ಶಿಕ್ಷಕರು ರೂಪಕ, ನೃತ್ಯ, ಗಾಯನ, ಭಾಷಣ ಕಾರ್ಯಕ್ರಮ ನಡೆಯಿತು. ಆಶಾರಾಣಿ ಪಾಟೀಲ ಇದ್ದರು.</p>.<p><strong>ಅನೌಪಚಾರಿಕ ಶಿಕ್ಷಣ ಸಂಸ್ಥೆ: </strong>ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ನಗರ ಬಾಲಕಿರಣ ಮಕ್ಕಳ ಸಂಘಗಳ ಒಕ್ಕೂಟದಿಂದ ನಗರದ ವಿವಿಧ ಕೊಳೆಗೇರಿಗಳಲ್ಲಿಮಕ್ಕಳ ದಿನ ಆಚರಿಸಲಾಯಿತು.</p>.<p>ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಆಶುಭಾಷಣ, ರಸಪ್ರಸ್ನೆ ಸ್ಪರ್ಧೆ, ವಿವಿಧ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸ್ಥಳೀಯ ಮಹಿಳಾ ಸ್ವ-ಸಹಾಯ ಸಂಘದ ವತಿಯಿಂದ ಬಹುಮಾನಗಳನ್ನು ವಿತರಣೆ ಮಾಡಲಾಯಿತು.</p>.<p>ಜವಾಹರಲಾಲ ನೆಹರು ಅವರ ತತ್ವಸಿದ್ದಾಂತಗಳನ್ನು ಮಕ್ಕಳಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಲಾಯಿತು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೆಹರು ನೀಡಿರುವ ಕೊಡುಗೆ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು.</p>.<p><strong>ಶಾಂತಿನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್: </strong>ದೇಶದ ಮೊದಲ ಪ್ರಧಾನಿಪಂಡಿತ್ ಜವಾಹರಲಾಲ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ ಎಂದು ಶಾಂತಿನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಚಂದನಗೌಡ ಮಾಲಿಪಾಟೀಲ ಹೇಳಿದರು.</p>.<p>ಶಾಂತಿನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಮಕ್ಕಳ ದಿನಚರಣೆಯ ಅಂಗವಾಗಿ ಮಕ್ಕಳಿಗೆ ಶುಭಾಷಯ ಪತ್ರ ರಚನೆ ಮಾಡುವ ಸ್ಪರ್ಧೆ, ಚಿತ್ರಕಲೆ, ಶುದ್ಧ ಬರಹ, ಕವನ ವಾಚನ, ಕಥೆ ಹೇಳುವ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p>.<p>ಭರತ ಬಿರಾದಾರ ಹಾಗೂ ಶಾಲೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. </p>.<p><strong>ಶಾಂತಿನಿಕೇತನ ಶಿಕ್ಷಣ ಸಂಸ್ಥೆ: </strong>ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಜವಾಹರಲಾಲ ನೆಹರು ಅವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನ ಆಚರಿಸಲಾಯಿತು.</p>.<p>ಶಿಕ್ಷಕರಾದ ಎ.ಎಚ್.ಸಗರ, ಪ್ರವೀಣಕುಮಾರ ಗೆಣ್ಣೂರ, ಶ್ರೀದೇವಿ ಜೋಳದ, ಸರೋಜಾ ಕರಕಳ್ಳಿ, ಸೀಮಾ ಸದಲಗಾ, ಶೋಭಾ ಕೂಡಗಿ ಇದ್ದರು.</p>.<p><strong>ಕಾಂಗ್ರೆಸ್ ಕಾರ್ಯಾಲಯ: ನೆಹರು ಸ್ಮರಣೆ</strong><br /><strong>ವಿಜಯಪುರ:</strong>ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರು ಅವರ ಜನ್ಮ ದಿನವನ್ನುಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾಯಿತು.</p>.<p>ಕಾಂಗ್ರೆಸ್ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ರಾಜು ಆಲಗೂರ, ದೇಶದ ಅಖಂಡತೆ, ಸಾರ್ವಭೌಮತ್ವವನ್ನು ರಕ್ಷಿಸುವ ಮೂಲಕ ಪ್ರಜಾಪ್ರಭುತ್ವದ ಬೃಹತ್ ರಾಷ್ಟ್ರವನ್ನು ಮನ್ನೆಡೆಸಿದ ಕೀರ್ತಿ ನೆಹರೂಗೆ ಸಲ್ಲುತ್ತದೆ ಎಂದರು.</p>.<p>ಮುಖಂಡರಾ ಅಬ್ದುಲ್ ಹಮೀದ್ ಮುಶ್ರೀಫ್, ಎಸ್.ಎಂ.ಪಾಟೀಲ ಗಣಿಹಾರ, ಜಮೀರ್ ಬಕ್ಷಿ, ಆರತಿ ಶಹಾಪೂರ, ಸಾಹೇಬಗೌಡ ಬಿರಾದಾರ, ಅಬ್ದುಲ್ ಖಾದರ್ ಖಾದೀಮ, ಎಸ್.ಎಂ.ದುಂಡಸಿ, ಡಿ.ಎಚ್.ಕಲಾಲ, ವಸಂತ ಹೊನಮೊಡೆ, ಪ್ರಕಾಶ ಕಟ್ಟಿಮನಿ, ತಾಜುದ್ದೀನ್ ಖಲೀಪ, ಆಶೀಮಾ ಕಾಲೇಬಾಗ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಸಮಾಜವಾದ ತತ್ವದಡಿ ಆಧುನಿಕ ಭಾರತ ಮತ್ತು ರಾಜಕೀಯ ಸಂಸ್ಕೃತಿಯನ್ನು ರೂಪಿಸುವಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಧ್ಯಕ್ಷ ಶರಣು ಮಸಳಿ ಹೇಳಿದರು.</p>.<p>ನಾಗಠಾಣದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಶಿಕ್ಷಕ ಸಂತೋಷ ಬಂಡೆ, ಭಾರತಕ್ಕೆ ಸಹಬಾಳ್ವೆಯ ಪರಂಪರೆಯನ್ನು ನೀಡಿ, ದೂರದೃಷ್ಟಿಯ ವಿಚಾರಗಳಿಂದ ನವ ಭಾರತದ ಸೃಷ್ಟಿಯಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದ್ದರು ಎಂದರು.</p>.<p>ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ, ಸಿಆರ್ಪಿ ಈರಣ್ಣ ಬಂಡೆ, ಈರಣ್ಣ ಹುಣಶ್ಯಾಳ, ಪ್ರಭು ಹಂಡಿ, ಅನಿಲ ಅಂಕದ, ಉಪನ್ಯಾಸಕ ಶ್ರೀಧರ ಬಂಡೆ ಇದ್ದರು.</p>.<p><strong>ಎಸಿಟಿ-ಶಾರದಾ ಪಬ್ಲಿಕ್ ಶಾಲೆ: </strong>‘ಮಕ್ಕಳು ರಾಷ್ಟ್ರದ ಬೆನ್ನೆಲುಬು; ಮಕ್ಕಳ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿದೆ. ಮಕ್ಕಳು ಸಚ್ಚಾರಿತ್ರ್ಯದ ಆದರ್ಶ ಗುಣಗಳನ್ನು ರೂಢಿಸಿಕೊಂಡು ದೇಶಕ್ಕೆ ಕೀರ್ತಿ ತರುವಂಥ ಸಾಧಕರಾಗಬೇಕು’ ಎಂದುಎಸಿಟಿ-ಶಾರದಾ ಪಬ್ಲಿಕ್ ಶಾಲೆ ಉಪಪ್ರಾಚಾರ್ಯ ಮಹೇಂದ್ರ ಎಂ.ಎನ್. ಹೇಳಿದರು.</p>.<p>ಎಸಿಟಿ-ಶಾರದಾ ಪಬ್ಲಿಕ್ ಶಾಲೆಯಲ್ಲಿ ಪಂಡಿತ್ ಜವಾಹರಲಾಲ ನೆಹರು ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಲೆಯ ಪ್ರಾಚಾರ್ಯ ಜಿಮೇಶ್ ಪೌಲ್, ಮಕ್ಕಳಲ್ಲಿ ಬಾಲ್ಯದಲ್ಲಿಯೇ ಶ್ರೇಷ್ಠ ಗುರಿಗಳನ್ನು ಹೊಂದುವ ಮತ್ತು ಸುಭದ್ರ ಜೀವನ ನೆಲೆಯನ್ನು ಕಂಡುಕೊಳ್ಳುವ ಆದರ್ಶ ತತ್ವಗಳನ್ನು ಶಿಕ್ಷಣವು ಕಲಿಸಿಕೊಡುತ್ತದೆ ಎಂದರು.</p>.<p>ಶಿಕ್ಷಕ ಮುತ್ತುರಾಜ ಸಂಕಣ್ಣವರ ನೇತೃತ್ವದಲ್ಲಿ ಶಾಲೆಯ ಶಿಕ್ಷಕರು ರೂಪಕ, ನೃತ್ಯ, ಗಾಯನ, ಭಾಷಣ ಕಾರ್ಯಕ್ರಮ ನಡೆಯಿತು. ಆಶಾರಾಣಿ ಪಾಟೀಲ ಇದ್ದರು.</p>.<p><strong>ಅನೌಪಚಾರಿಕ ಶಿಕ್ಷಣ ಸಂಸ್ಥೆ: </strong>ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ನಗರ ಬಾಲಕಿರಣ ಮಕ್ಕಳ ಸಂಘಗಳ ಒಕ್ಕೂಟದಿಂದ ನಗರದ ವಿವಿಧ ಕೊಳೆಗೇರಿಗಳಲ್ಲಿಮಕ್ಕಳ ದಿನ ಆಚರಿಸಲಾಯಿತು.</p>.<p>ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಆಶುಭಾಷಣ, ರಸಪ್ರಸ್ನೆ ಸ್ಪರ್ಧೆ, ವಿವಿಧ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸ್ಥಳೀಯ ಮಹಿಳಾ ಸ್ವ-ಸಹಾಯ ಸಂಘದ ವತಿಯಿಂದ ಬಹುಮಾನಗಳನ್ನು ವಿತರಣೆ ಮಾಡಲಾಯಿತು.</p>.<p>ಜವಾಹರಲಾಲ ನೆಹರು ಅವರ ತತ್ವಸಿದ್ದಾಂತಗಳನ್ನು ಮಕ್ಕಳಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಲಾಯಿತು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೆಹರು ನೀಡಿರುವ ಕೊಡುಗೆ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು.</p>.<p><strong>ಶಾಂತಿನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್: </strong>ದೇಶದ ಮೊದಲ ಪ್ರಧಾನಿಪಂಡಿತ್ ಜವಾಹರಲಾಲ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ ಎಂದು ಶಾಂತಿನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಚಂದನಗೌಡ ಮಾಲಿಪಾಟೀಲ ಹೇಳಿದರು.</p>.<p>ಶಾಂತಿನಿಕೇತನ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಮಕ್ಕಳ ದಿನಚರಣೆಯ ಅಂಗವಾಗಿ ಮಕ್ಕಳಿಗೆ ಶುಭಾಷಯ ಪತ್ರ ರಚನೆ ಮಾಡುವ ಸ್ಪರ್ಧೆ, ಚಿತ್ರಕಲೆ, ಶುದ್ಧ ಬರಹ, ಕವನ ವಾಚನ, ಕಥೆ ಹೇಳುವ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p>.<p>ಭರತ ಬಿರಾದಾರ ಹಾಗೂ ಶಾಲೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. </p>.<p><strong>ಶಾಂತಿನಿಕೇತನ ಶಿಕ್ಷಣ ಸಂಸ್ಥೆ: </strong>ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಜವಾಹರಲಾಲ ನೆಹರು ಅವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನ ಆಚರಿಸಲಾಯಿತು.</p>.<p>ಶಿಕ್ಷಕರಾದ ಎ.ಎಚ್.ಸಗರ, ಪ್ರವೀಣಕುಮಾರ ಗೆಣ್ಣೂರ, ಶ್ರೀದೇವಿ ಜೋಳದ, ಸರೋಜಾ ಕರಕಳ್ಳಿ, ಸೀಮಾ ಸದಲಗಾ, ಶೋಭಾ ಕೂಡಗಿ ಇದ್ದರು.</p>.<p><strong>ಕಾಂಗ್ರೆಸ್ ಕಾರ್ಯಾಲಯ: ನೆಹರು ಸ್ಮರಣೆ</strong><br /><strong>ವಿಜಯಪುರ:</strong>ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರು ಅವರ ಜನ್ಮ ದಿನವನ್ನುಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾಯಿತು.</p>.<p>ಕಾಂಗ್ರೆಸ್ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ರಾಜು ಆಲಗೂರ, ದೇಶದ ಅಖಂಡತೆ, ಸಾರ್ವಭೌಮತ್ವವನ್ನು ರಕ್ಷಿಸುವ ಮೂಲಕ ಪ್ರಜಾಪ್ರಭುತ್ವದ ಬೃಹತ್ ರಾಷ್ಟ್ರವನ್ನು ಮನ್ನೆಡೆಸಿದ ಕೀರ್ತಿ ನೆಹರೂಗೆ ಸಲ್ಲುತ್ತದೆ ಎಂದರು.</p>.<p>ಮುಖಂಡರಾ ಅಬ್ದುಲ್ ಹಮೀದ್ ಮುಶ್ರೀಫ್, ಎಸ್.ಎಂ.ಪಾಟೀಲ ಗಣಿಹಾರ, ಜಮೀರ್ ಬಕ್ಷಿ, ಆರತಿ ಶಹಾಪೂರ, ಸಾಹೇಬಗೌಡ ಬಿರಾದಾರ, ಅಬ್ದುಲ್ ಖಾದರ್ ಖಾದೀಮ, ಎಸ್.ಎಂ.ದುಂಡಸಿ, ಡಿ.ಎಚ್.ಕಲಾಲ, ವಸಂತ ಹೊನಮೊಡೆ, ಪ್ರಕಾಶ ಕಟ್ಟಿಮನಿ, ತಾಜುದ್ದೀನ್ ಖಲೀಪ, ಆಶೀಮಾ ಕಾಲೇಬಾಗ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>