<p><strong>ಆಲಮಟ್ಟಿ</strong>: ಸಸ್ಯಗಳ ಕಾಶಿ ಎಂದೇ ಖ್ಯಾತವಾಗಿರುವ ಆಲಮಟ್ಟಿ ಡ್ಯಾಂಸೈಟ್ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿರುವ ಬೇವಿನ ಮರಗಳು ಒಣಗುತ್ತಿದ್ದು, ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿವೆ.</p><p>ರೋಗ ನಿರೋಧಕ ಶಕ್ತಿ ಹೊಂದಿರುವ ಅನೇಕ ರೋಗಗಳಿಗೆ ಔಷಧಿಯಾಗಿ ಬಳಕೆಯಾಗುವ ಬೇವಿಗೆ ಇಂಥ ಕುತ್ತು ಬಂದಿದೆ. ಸಹಸ್ರಾರು ಬೇರೆ ಬೇರೆ ಜಾತಿಯ ಗಿಡಗಳಿದ್ದರೂ ಕೇವಲ ಬೇವಿನ ಮರಗಳಿಗೆ ಮಾತ್ರ ಈ ರೀತಿಯ ರೋಗ ಕಂಡು ಬಂದಿದ್ದು, ಎಲೆಗಳೆಲ್ಲಾ ಒಣಗಿ ನಿಂತಿವೆ.</p><p>ಸದ್ಯ ಆಲಮಟ್ಟಿ ರೇಲ್ವೆ ಸ್ಟೇಷನ್ನಿಂದ ಜವಾಹರ ನವೋದಯ ಶಾಲೆಯ ಮಾರ್ಗದ ಉದ್ದಕ್ಕೂ ಎರಡೂ ಬದಿ ಹತ್ತಾರು ಬೇವಿನ ಮರಗಳು ಸಂಪೂರ್ಣ ಒಣಗಿವೆ. ಆಲಮಟ್ಟಿಯಿಂದ ಸೀತಿಮನಿ ಮಾರ್ಗದುದ್ದಕ್ಕೂ (ರೈಲು ಮಾರ್ಗ) ಅಕ್ಕ ಪಕ್ಕ ಹಚ್ಚಿರುವ ಬೇವಿನ ಗಿಡಗಳೆಲ್ಲವೂ ಒಣಗಿವೆ.</p><p>ಸಾಲಾಗಿರುವ ಈ ಬೇವಿನ ಮರಗಳು ಒಣಗಿದ್ದು, ಈ ರೋಗ ಇನ್ನೀತರ ಅಕ್ಕ ಪಕ್ಕದ ಬೇವಿನ ಮರಗಳಿಗೆ ಕ್ರಮೇಣ ವಿಸ್ತಾರಗೊಳ್ಳುತ್ತಿದೆ. ಚಿಕ್ಕ, ಚಿಕ್ಕ ಬೇವಿನ ಗಿಡಗಳು ಸೇರಿ, 20 ವರ್ಷ ಹಳೆಯದಾದ ದೊಡ್ಡ ದೊಡ್ಡ ಮರಗಳಿಗೂ ಈ ರೋಗದ ಬಾಧೆ ತಗುಲಿದೆ.</p><p>ಆಲಮಟ್ಟಿಯಲ್ಲಿ 100ಕ್ಕೂ ಹೆಚ್ಚು ಮರಗಳಿಗೆ ಈ ರೀತಿಯ ರೋಗ ತಗುಲಿದ್ದು, ಇನ್ನುಳಿದ ಬೇವಿನ ಮರಗಳು ಹಚ್ಚು ಹಸರಾಗಿವೆ. ಅವಕ್ಕೂ ಈ ರೋಗ ತಗಲುವ ಸಾಧ್ಯತೆಯಿದೆ.</p><p><strong>ಮರಗಳ ರಕ್ಷಣೆಗೆ ಆಗ್ರಹ:</strong> ‘ರೋಗದ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಿ, ಅದಕ್ಕೆ ಕಾರಣ ಏನು? ಎಂಬುದನ್ನು ತಿಳಿದು, ಈಗ ರೋಗ ತಗುಲಿರುವ ಗಿಡಗಳಿಗೆ ಸೂಕ್ತ ರಾಸಾಯನಿಕ ಸಿಂಪಡಣೆ ಮಾಡಿ, ಗಿಡ ರಕ್ಷಿಸಬೇಕು. ಜತೆಗೆ ಇನ್ನುಳಿದ ಗಿಡಗಳಿಗೂ ಈ ರೋಗ ತಗುಲದಂತೆ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳಬೇಕು‘ ಎಂದು ಕರವೇ ಆಲಮಟ್ಟಿ ಘಟಕದ ಅಧ್ಯಕ್ಷ ಫತ್ತೇಸಾಬ್ ಚಾಂದ್, ಉಪಾಧ್ಯಕ್ಷ ಚಂದ್ರಶೇಖರ ಹೆರಕಲ್ಲ ಮತ್ತೀತರರು ಆಗ್ರಹಿಸಿದ್ದಾರೆ.</p><p><strong>ಟೀ ಮಾಸ್ಕ್ಯುಟೋ ಬಗ್ ಕಾಯಿಲೆ:</strong> ‘ಆಲಮಟ್ಟಿ ಹಾಗೂ ಸುತ್ತಮುತ್ತ ಬೇವಿನ ಗಿಡಗಳು ಒಣಗುತ್ತಿರುವುದಕ್ಕೆ ’ಟೀ ಮಾಸ್ಕ್ಯುಟೋ ಬಗ್' ಎಂಬ ಕಾಯಿಲೆ ಕಾರಣ. ಈ ಕೀಟಗಳು ಕೇವಲ ಬೇವಿನ ಗಿಡಗಳನ್ನು ಗುರಿಯನ್ನಾಗಿಸಿ, ಆ ಗಿಡಗಳ ಟೊಂಗೆ, ಕಾಂಡಗಳಲ್ಲಿನ ರಸವನ್ನು ಹೀರುತ್ತವೆ. ಕೀಟಗಳು ಸಸ್ಯ ಅಂಗಾಂಶಗಳನ್ನು ಕೊಲ್ಲುವ ಕಿಣ್ವಗಳನ್ನು ಚುಚ್ಚುತ್ತವೆ, ಇದರಿಂದಾಗಿ ಅವು ಕಂದು ಬಣ್ಣಕ್ಕೆ ತಿರುಗಿ ಸುಟ್ಟು ಹೋದಂತೆ ಕಾಣುತ್ತವೆ’ ಎಂದು ಆಲಮಟ್ಟಿ ಅರಣ್ಯ ಇಲಾಖೆಯ ಆರ್.ಎಫ್.ಓ. ಮಹೇಶ ಪಾಟೀಲ ಹೇಳಿದರು.</p><p>’ರೋಗ ತಗುಲಿದ ಮರಗಳನ್ನು ಪರಿಶೀಲಿಸಲಾಗಿದೆ. ಬೇರುಗಳಿಗೆ ಯಾವುದೇ ಹಾನಿಯಾಗಿಲ್ಲ, ಟೊಂಗೆ ಹಾಗೂ ಎಲೆಗಳಿಗೆ ಹಾನಿಯಾಗಿದೆ. ಈಗಾಗಲೇ ತಜ್ಞರನ್ನು ಸಂಪರ್ಕಿಸಲಾಗಿದ್ದು, ಅವರು ಶಿಫಾರಸು ಮಾಡುವ ರಾಸಾಯನಿಕವನ್ನು ಸಿಂಪಡಿಸಲಾಗುವುದು’ ಎಂದು ಅವರು ತಿಳಿಸಿದರು. ರೋಗ ಬಾಧೆಯುಳ್ಳ ಎಲ್ಲಾ ಮರಗಳನ್ನು ರಕ್ಷಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ</strong>: ಸಸ್ಯಗಳ ಕಾಶಿ ಎಂದೇ ಖ್ಯಾತವಾಗಿರುವ ಆಲಮಟ್ಟಿ ಡ್ಯಾಂಸೈಟ್ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿರುವ ಬೇವಿನ ಮರಗಳು ಒಣಗುತ್ತಿದ್ದು, ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿವೆ.</p><p>ರೋಗ ನಿರೋಧಕ ಶಕ್ತಿ ಹೊಂದಿರುವ ಅನೇಕ ರೋಗಗಳಿಗೆ ಔಷಧಿಯಾಗಿ ಬಳಕೆಯಾಗುವ ಬೇವಿಗೆ ಇಂಥ ಕುತ್ತು ಬಂದಿದೆ. ಸಹಸ್ರಾರು ಬೇರೆ ಬೇರೆ ಜಾತಿಯ ಗಿಡಗಳಿದ್ದರೂ ಕೇವಲ ಬೇವಿನ ಮರಗಳಿಗೆ ಮಾತ್ರ ಈ ರೀತಿಯ ರೋಗ ಕಂಡು ಬಂದಿದ್ದು, ಎಲೆಗಳೆಲ್ಲಾ ಒಣಗಿ ನಿಂತಿವೆ.</p><p>ಸದ್ಯ ಆಲಮಟ್ಟಿ ರೇಲ್ವೆ ಸ್ಟೇಷನ್ನಿಂದ ಜವಾಹರ ನವೋದಯ ಶಾಲೆಯ ಮಾರ್ಗದ ಉದ್ದಕ್ಕೂ ಎರಡೂ ಬದಿ ಹತ್ತಾರು ಬೇವಿನ ಮರಗಳು ಸಂಪೂರ್ಣ ಒಣಗಿವೆ. ಆಲಮಟ್ಟಿಯಿಂದ ಸೀತಿಮನಿ ಮಾರ್ಗದುದ್ದಕ್ಕೂ (ರೈಲು ಮಾರ್ಗ) ಅಕ್ಕ ಪಕ್ಕ ಹಚ್ಚಿರುವ ಬೇವಿನ ಗಿಡಗಳೆಲ್ಲವೂ ಒಣಗಿವೆ.</p><p>ಸಾಲಾಗಿರುವ ಈ ಬೇವಿನ ಮರಗಳು ಒಣಗಿದ್ದು, ಈ ರೋಗ ಇನ್ನೀತರ ಅಕ್ಕ ಪಕ್ಕದ ಬೇವಿನ ಮರಗಳಿಗೆ ಕ್ರಮೇಣ ವಿಸ್ತಾರಗೊಳ್ಳುತ್ತಿದೆ. ಚಿಕ್ಕ, ಚಿಕ್ಕ ಬೇವಿನ ಗಿಡಗಳು ಸೇರಿ, 20 ವರ್ಷ ಹಳೆಯದಾದ ದೊಡ್ಡ ದೊಡ್ಡ ಮರಗಳಿಗೂ ಈ ರೋಗದ ಬಾಧೆ ತಗುಲಿದೆ.</p><p>ಆಲಮಟ್ಟಿಯಲ್ಲಿ 100ಕ್ಕೂ ಹೆಚ್ಚು ಮರಗಳಿಗೆ ಈ ರೀತಿಯ ರೋಗ ತಗುಲಿದ್ದು, ಇನ್ನುಳಿದ ಬೇವಿನ ಮರಗಳು ಹಚ್ಚು ಹಸರಾಗಿವೆ. ಅವಕ್ಕೂ ಈ ರೋಗ ತಗಲುವ ಸಾಧ್ಯತೆಯಿದೆ.</p><p><strong>ಮರಗಳ ರಕ್ಷಣೆಗೆ ಆಗ್ರಹ:</strong> ‘ರೋಗದ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಿ, ಅದಕ್ಕೆ ಕಾರಣ ಏನು? ಎಂಬುದನ್ನು ತಿಳಿದು, ಈಗ ರೋಗ ತಗುಲಿರುವ ಗಿಡಗಳಿಗೆ ಸೂಕ್ತ ರಾಸಾಯನಿಕ ಸಿಂಪಡಣೆ ಮಾಡಿ, ಗಿಡ ರಕ್ಷಿಸಬೇಕು. ಜತೆಗೆ ಇನ್ನುಳಿದ ಗಿಡಗಳಿಗೂ ಈ ರೋಗ ತಗುಲದಂತೆ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳಬೇಕು‘ ಎಂದು ಕರವೇ ಆಲಮಟ್ಟಿ ಘಟಕದ ಅಧ್ಯಕ್ಷ ಫತ್ತೇಸಾಬ್ ಚಾಂದ್, ಉಪಾಧ್ಯಕ್ಷ ಚಂದ್ರಶೇಖರ ಹೆರಕಲ್ಲ ಮತ್ತೀತರರು ಆಗ್ರಹಿಸಿದ್ದಾರೆ.</p><p><strong>ಟೀ ಮಾಸ್ಕ್ಯುಟೋ ಬಗ್ ಕಾಯಿಲೆ:</strong> ‘ಆಲಮಟ್ಟಿ ಹಾಗೂ ಸುತ್ತಮುತ್ತ ಬೇವಿನ ಗಿಡಗಳು ಒಣಗುತ್ತಿರುವುದಕ್ಕೆ ’ಟೀ ಮಾಸ್ಕ್ಯುಟೋ ಬಗ್' ಎಂಬ ಕಾಯಿಲೆ ಕಾರಣ. ಈ ಕೀಟಗಳು ಕೇವಲ ಬೇವಿನ ಗಿಡಗಳನ್ನು ಗುರಿಯನ್ನಾಗಿಸಿ, ಆ ಗಿಡಗಳ ಟೊಂಗೆ, ಕಾಂಡಗಳಲ್ಲಿನ ರಸವನ್ನು ಹೀರುತ್ತವೆ. ಕೀಟಗಳು ಸಸ್ಯ ಅಂಗಾಂಶಗಳನ್ನು ಕೊಲ್ಲುವ ಕಿಣ್ವಗಳನ್ನು ಚುಚ್ಚುತ್ತವೆ, ಇದರಿಂದಾಗಿ ಅವು ಕಂದು ಬಣ್ಣಕ್ಕೆ ತಿರುಗಿ ಸುಟ್ಟು ಹೋದಂತೆ ಕಾಣುತ್ತವೆ’ ಎಂದು ಆಲಮಟ್ಟಿ ಅರಣ್ಯ ಇಲಾಖೆಯ ಆರ್.ಎಫ್.ಓ. ಮಹೇಶ ಪಾಟೀಲ ಹೇಳಿದರು.</p><p>’ರೋಗ ತಗುಲಿದ ಮರಗಳನ್ನು ಪರಿಶೀಲಿಸಲಾಗಿದೆ. ಬೇರುಗಳಿಗೆ ಯಾವುದೇ ಹಾನಿಯಾಗಿಲ್ಲ, ಟೊಂಗೆ ಹಾಗೂ ಎಲೆಗಳಿಗೆ ಹಾನಿಯಾಗಿದೆ. ಈಗಾಗಲೇ ತಜ್ಞರನ್ನು ಸಂಪರ್ಕಿಸಲಾಗಿದ್ದು, ಅವರು ಶಿಫಾರಸು ಮಾಡುವ ರಾಸಾಯನಿಕವನ್ನು ಸಿಂಪಡಿಸಲಾಗುವುದು’ ಎಂದು ಅವರು ತಿಳಿಸಿದರು. ರೋಗ ಬಾಧೆಯುಳ್ಳ ಎಲ್ಲಾ ಮರಗಳನ್ನು ರಕ್ಷಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>