<p>ವಿಜಯಪುರ: ನಾವೆಲ್ಲರೂ ನಿರಂತರವಾಗಿ ಗಿಡಗಳನ್ನು ಕಡಿಯುತ್ತಿದ್ದು, ಭೂಮಿಯನ್ನು ಬೆತ್ತಲು ಮಾಡಿದ್ದೇವೆ. ಭೂಮಿಯಲ್ಲಿ ರಾಸಾಯನಿಕ ಬೆರೆಸಿ ವಿಷಯುಕ್ತ ಮಾಡುತ್ತಿದ್ದೇವೆ. ಇದಕ್ಕೆ ಇನ್ನು ಮುಂದಾದರೂ ನಿರಂತರವಾಗಿ ಗಿಡಗಳನ್ನು ನೆಡುತ್ತ ಹೋಗುವುದೇ ಪರಿಹಾರ ಎಂದು ಕೃಷಿ ಅರಣ್ಯ ವಿಜ್ಞಾನಿ ಚಂದ್ರಶೇಖರ ಬಿರಾದಾರ ಹೇಳಿದರು.</p>.<p>ನಗರದ ಹೊರವಲಯದ ಭೂತನಾಳ ಕೆರೆಯಂಗಳದಲ್ಲಿ ವೃಕ್ಷೊತ್ಥಾನ ಸಂಸ್ಥೆ, ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ಯಾಂಪಿಂಗ್ ಕಲ್ಚರ್ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.</p>.<p>ನಿರಂತರ ಮಳೆಯಾಗುವ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಅರಣ್ಯೀಕರಣ ಮಾಡುವುದು ಸುಲಭದ ಕೆಲಸ. ಸಂಪೂರ್ಣ ಕಲ್ಲಿನಿಂದ ಕೂಡಿದ್ದ 540 ಎಕರೆ ಕರಾಡದೊಡ್ಡಿಯಲ್ಲಿ ಗಿಡಗಳನ್ನು ನೆಟ್ಟು, ನೀರುಣಿಸಿ ಕೃತಕವಾಗಿ ಅರಣ್ಯ ಸೃಷ್ಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುವುದು ಸಾಹಸದ ಹಾಗೂ ಸವಾಲಿನ ಕೆಲಸ ಎಂದರು.</p>.<p>ವಿಜಯಪುರ ಜಿಲ್ಲೆಯಾದ್ಯಂತ ಶಾಲೆ, ಕಾಲೇಜು, ಉದ್ಯಾನವನ, ಸ್ಮಶಾನ ಭೂಮಿ, ಖಾಸಗಿ ಜಮೀನು ಹೀಗೆ ಎಲ್ಲೆಂದರಲ್ಲಿ ಗಿಡಗಳನ್ನು ನೆಡುವ ಅವಕಾಶ ಇರುವಲ್ಲಿ ಗಿಡಗಳನ್ನು ನೆಟ್ಟು ಹಸಿರು ಹೊದಿಕೆ ಹೆಚ್ಚಿಸುವ ಕೆಲಸ ನಿರಂತರ ನಡೆಯಬೇಕು ಎಂದು ಹೇಳಿದರು.</p>.<p>ಶಿಬಿರಕ್ಕೆ ಭೇಟಿ ನೀಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ, ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.</p>.<p>ಈಗಾಗಲೇ ಬರದ ನಾಡು ವಿಜಯಪುರಕ್ಕೆ ನೀರು ತರುವ ಮೂಲಕ ‘ಭಗೀರಥ’ ಎನಿಸಿಕೊಂಡಿರುವ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲರು ಅರಣ್ಯ ಬೆಳೆಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಹಾಗೂ ಶ್ಲಾಘನೀಯ ಕೆಲಸ, ‘ಹೀಂಗ್ ಗಿಡಗಳನ್ನು ಹಚಗೋಂತ ಹೋಗ್ರೀ’ ಎಂದು ಆಶೀರ್ವದಿಸಿದರು.</p>.<p>ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಬಬಲೇಶ್ವರ ಮತಕ್ಷೇತ್ರದಲ್ಲಿ 169 ಹಳ್ಳಗಳಿಗೆ ಕಾಲುವೆ ಮುಖಾಂತರ ನೀರು ಹರಿಸಲಾಗುವುದು. ತೇವಾಂಶ ಹೆಚ್ಚಿ ಹಳ್ಳಗಳ ದಂಡೆಗಳ ಎರಡೂ ಬದಿಗಳಲ್ಲಿ ಐದು ಕೋಟಿ ಗಿಡಗಳನ್ನು ಬೆಳೆಸುವ ಯೋಜನೆ ಹಾಕಲಾಗಿದೆ ಎಂದರು.</p>.<p>ಕೆಬಿಜೆಎನ್ಎಲ್ ಉಪಸಂರಕ್ಷಣಾಧಿಕಾರಿ ಪಿ.ಕೆ.ಪೈ ಮಾತನಾಡಿ, ಕರಾಡದೊಡ್ಡಿಯಲ್ಲಿ ಈಗಾಗಲೇ 66000 ಗಿಡಗಳನ್ನು ನೆಡಲಾಗಿದೆ. ಇದೇ ಪ್ರದೇಶದಲ್ಲಿ 270 ಕ್ಕೂ ಹೆಚ್ಚು ಪ್ರಬೇಧದ ಗಿಡಗಳನ್ನು ಬೆಳೆಸುವ ಮೂಲಕ ಬೆಂಗಳೂರಿನ ಕಬ್ಬನ್ ಪಾರ್ಕಿಗಿಂತಲೂ ದೊಡ್ಡದಾದ ಟ್ರೀ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.</p>.<p>ಕ್ಯಾಂಪಿಂಗ್ ಕಲ್ಚರ್ ಶಿಬಿರದಲ್ಲಿ 30 ಹೆಚ್ಚು ಟೆಂಟ್ಗಳಲ್ಲಿ ವಿಜಯಪುರ ನಗರವಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಪರಿಸರ ಸಂರಕ್ಷಣೆಯ ಸ್ವಯಂ ಸೇವಾ ಸಂಸ್ಥೆಗಳ 60ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಡಾ.ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರು ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ನಾವೆಲ್ಲರೂ ನಿರಂತರವಾಗಿ ಗಿಡಗಳನ್ನು ಕಡಿಯುತ್ತಿದ್ದು, ಭೂಮಿಯನ್ನು ಬೆತ್ತಲು ಮಾಡಿದ್ದೇವೆ. ಭೂಮಿಯಲ್ಲಿ ರಾಸಾಯನಿಕ ಬೆರೆಸಿ ವಿಷಯುಕ್ತ ಮಾಡುತ್ತಿದ್ದೇವೆ. ಇದಕ್ಕೆ ಇನ್ನು ಮುಂದಾದರೂ ನಿರಂತರವಾಗಿ ಗಿಡಗಳನ್ನು ನೆಡುತ್ತ ಹೋಗುವುದೇ ಪರಿಹಾರ ಎಂದು ಕೃಷಿ ಅರಣ್ಯ ವಿಜ್ಞಾನಿ ಚಂದ್ರಶೇಖರ ಬಿರಾದಾರ ಹೇಳಿದರು.</p>.<p>ನಗರದ ಹೊರವಲಯದ ಭೂತನಾಳ ಕೆರೆಯಂಗಳದಲ್ಲಿ ವೃಕ್ಷೊತ್ಥಾನ ಸಂಸ್ಥೆ, ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ಯಾಂಪಿಂಗ್ ಕಲ್ಚರ್ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.</p>.<p>ನಿರಂತರ ಮಳೆಯಾಗುವ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಅರಣ್ಯೀಕರಣ ಮಾಡುವುದು ಸುಲಭದ ಕೆಲಸ. ಸಂಪೂರ್ಣ ಕಲ್ಲಿನಿಂದ ಕೂಡಿದ್ದ 540 ಎಕರೆ ಕರಾಡದೊಡ್ಡಿಯಲ್ಲಿ ಗಿಡಗಳನ್ನು ನೆಟ್ಟು, ನೀರುಣಿಸಿ ಕೃತಕವಾಗಿ ಅರಣ್ಯ ಸೃಷ್ಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುವುದು ಸಾಹಸದ ಹಾಗೂ ಸವಾಲಿನ ಕೆಲಸ ಎಂದರು.</p>.<p>ವಿಜಯಪುರ ಜಿಲ್ಲೆಯಾದ್ಯಂತ ಶಾಲೆ, ಕಾಲೇಜು, ಉದ್ಯಾನವನ, ಸ್ಮಶಾನ ಭೂಮಿ, ಖಾಸಗಿ ಜಮೀನು ಹೀಗೆ ಎಲ್ಲೆಂದರಲ್ಲಿ ಗಿಡಗಳನ್ನು ನೆಡುವ ಅವಕಾಶ ಇರುವಲ್ಲಿ ಗಿಡಗಳನ್ನು ನೆಟ್ಟು ಹಸಿರು ಹೊದಿಕೆ ಹೆಚ್ಚಿಸುವ ಕೆಲಸ ನಿರಂತರ ನಡೆಯಬೇಕು ಎಂದು ಹೇಳಿದರು.</p>.<p>ಶಿಬಿರಕ್ಕೆ ಭೇಟಿ ನೀಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ, ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.</p>.<p>ಈಗಾಗಲೇ ಬರದ ನಾಡು ವಿಜಯಪುರಕ್ಕೆ ನೀರು ತರುವ ಮೂಲಕ ‘ಭಗೀರಥ’ ಎನಿಸಿಕೊಂಡಿರುವ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲರು ಅರಣ್ಯ ಬೆಳೆಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಹಾಗೂ ಶ್ಲಾಘನೀಯ ಕೆಲಸ, ‘ಹೀಂಗ್ ಗಿಡಗಳನ್ನು ಹಚಗೋಂತ ಹೋಗ್ರೀ’ ಎಂದು ಆಶೀರ್ವದಿಸಿದರು.</p>.<p>ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಬಬಲೇಶ್ವರ ಮತಕ್ಷೇತ್ರದಲ್ಲಿ 169 ಹಳ್ಳಗಳಿಗೆ ಕಾಲುವೆ ಮುಖಾಂತರ ನೀರು ಹರಿಸಲಾಗುವುದು. ತೇವಾಂಶ ಹೆಚ್ಚಿ ಹಳ್ಳಗಳ ದಂಡೆಗಳ ಎರಡೂ ಬದಿಗಳಲ್ಲಿ ಐದು ಕೋಟಿ ಗಿಡಗಳನ್ನು ಬೆಳೆಸುವ ಯೋಜನೆ ಹಾಕಲಾಗಿದೆ ಎಂದರು.</p>.<p>ಕೆಬಿಜೆಎನ್ಎಲ್ ಉಪಸಂರಕ್ಷಣಾಧಿಕಾರಿ ಪಿ.ಕೆ.ಪೈ ಮಾತನಾಡಿ, ಕರಾಡದೊಡ್ಡಿಯಲ್ಲಿ ಈಗಾಗಲೇ 66000 ಗಿಡಗಳನ್ನು ನೆಡಲಾಗಿದೆ. ಇದೇ ಪ್ರದೇಶದಲ್ಲಿ 270 ಕ್ಕೂ ಹೆಚ್ಚು ಪ್ರಬೇಧದ ಗಿಡಗಳನ್ನು ಬೆಳೆಸುವ ಮೂಲಕ ಬೆಂಗಳೂರಿನ ಕಬ್ಬನ್ ಪಾರ್ಕಿಗಿಂತಲೂ ದೊಡ್ಡದಾದ ಟ್ರೀ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.</p>.<p>ಕ್ಯಾಂಪಿಂಗ್ ಕಲ್ಚರ್ ಶಿಬಿರದಲ್ಲಿ 30 ಹೆಚ್ಚು ಟೆಂಟ್ಗಳಲ್ಲಿ ವಿಜಯಪುರ ನಗರವಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಪರಿಸರ ಸಂರಕ್ಷಣೆಯ ಸ್ವಯಂ ಸೇವಾ ಸಂಸ್ಥೆಗಳ 60ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಡಾ.ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರು ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>