ಮಹಾನಗರ ಪಾಲಿಕೆ ಚುನಾವಣೆಯಲ್ಲಿಬಿಜೆಪಿ ಸೋಲಿಸಬೇಕು, ಯತ್ನಾಳ ಮುಗಿಸಬೇಕು ಎಂದು ಕಾಂಗ್ರೆಸ್, ಬಿಜೆಪಿಯಲ್ಲಿರುವ ಕೆಲಕಳ್ಳರ ಗ್ಯಾಂಗ್ ಮುಧೋಳ, ಬೆಂಗಳೂರಿನಿಂದ ನನ್ನ ವಿರೋಧಿಗಳಿಗೆ ಸಹಾಯ ಹಸ್ತ ನೀಡಿದ್ದರು. ಆದರೆ, ವಿಜಯಪುರ ಜನ ಹುಚ್ಚರಿಲ್ಲ. ತಕ್ಕ ಉತ್ತರ ನೀಡಿದ್ದಾರೆ. ಇನ್ನಾದರೂ ಬುದ್ದಿ ಕಲಿತು ನಿವೃತ್ತಿ ಜೀವನ ಮನೆಯಲ್ಲಿ ಅರಾಂ ಆಗಿ ಮಾಡಲಿ ಎಂದು ಯತ್ನಾಳ ಟಾಂಗ್ ನೀಡಿದರು.