<p><strong>ವಿಜಯಪುರ</strong>: ಬಡವನಿರಲಿ, ಶ್ರೀಮಂತನಿರಲಿ ರಂಜಾನ್ ಮಾಸದಲ್ಲಿ ಪ್ರತಿ ಮುಸಲ್ಮಾನರ ಮನೆಯಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ ಸಹಜ. ರೋಜಾ ಆರಂಭ, ಮುಕ್ತಾಯದ ಸಮಯದಲ್ಲಿ ಅದೆಷ್ಟು ಖುಷಿ, ಕಲರವ ಆ ಮನೆಗಳಲ್ಲಿ ಇರುತ್ತಿದೆ ಎಂದರೆ ಸ್ವರ್ಗವೇ ಧರೆಗಳಿದಂತೆ.</p>.<p>ಹೊಸ ಬಟ್ಟೆಯನ್ನು ತೊಟ್ಟು,ಸುಗಂಧ(ಅತ್ತಾರ್)ವನ್ನು ಮೈಗೆ ಲೇಪಿಸಿಕೊಂಡು ಸಂಜೆಯ ಇಫ್ತಾರ್ಗೆ ಕುಟುಂಬದ ಸದಸ್ಯರೆಲ್ಲ ತಯಾರಾಗುವ ಪರಿ ಅಕ್ಕಪಕ್ಕದ ಅನ್ಯ ಸಮುದಾಯದವರನ್ನೂ ಆಕರ್ಷಿಸುವಂತಿರುತ್ತಿದೆ. ಆದರೆ, ಈ ವರ್ಷ ಕೋವಿಡ್ ಪರಿಣಾಮ ರಂಜಾನ್ ಮಾಸ ಹಾಗಿಲ್ಲ.</p>.<p>ಹೌದು, ಪ್ರತಿ ವರ್ಷದಂತೆ ಈ ವರ್ಷವೂ ‘ಮನೆಯೊಳಗಣ ರಂಜಾನ್’ ಕುರಿತು ವಿಶೇಷ ವರದಿಗಾಗಿ ವಿಜಯಪುರ ನಗರದ ಖಾಜಾ ಅಮಿನ್ ದರ್ಗಾ ನಿವಾಸಿ, ಛಾಯಾಗ್ರಾಹಕ ರಾಜು ಢವಳಗಿ ಅವರ ಮನೆಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡುಬಂದ ವಾತಾವರಣ ಎಲ್ಲ ಮುಸ್ಲಿಮರ ಮನೆಯ ಪ್ರತಿಬಿಂಬದಂತೆ ತೋರಿತು.</p>.<p>ಸುಣ್ಣ, ಬಣ್ಣ ಬಳಿದುಕೊಳ್ಳದ ಮನೆಯ ಗೋಡೆಗಳು, ಘಮಘಮಿಸಿದ ಅಡುಗೆ ಕೋಣೆ, ಹಳೇ ಬಟ್ಟೆಯಲ್ಲೇ ತಿರುಗಾಡುವ ಮಕ್ಕಳು, ಯುವಕರು, ಹಿರಿಯರು, ಮೆಹಂದಿ ಕಾಣದ ಹೆಣ್ಣು ಮಕ್ಕಳ ಬರಿಗೈಗಳು ಕಂಡವೇ ಹೊರತು, ಹಬ್ಬದ ಸಂಭ್ರಮ ಸೂಚಿಸುವ ಯಾವೊಂದು ಪ್ರತೀಕಗಳು ಅಲ್ಲಿ ಕಾಣಲಿಲ್ಲ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜು ಢವಳಗಿ, ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್ ಅಂಗವಾಗಿ ರೋಜಾ (ಉಪವಾಸ) ಮಾಡುತ್ತಿದ್ದೇವೆ. ಆದರೆ, ಕೋವಿಡ್ ತಂದೊಡ್ಡಿರುವ ಸಂಕಷ್ಟದಿಂದಾಗಿ ಈ ಬಾರಿ ಹಬ್ಬದ ಸಡಗರ ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಹಿಂದಿನ ವರ್ಷಗಳಲ್ಲಿ ರಂಜಾನ್ ಬಂತೆಂದರೆ ಮನೆಯಲ್ಲಿ ಅದೇನೋ ಸಡಗರ ಮನೆಮಾಡಿರುತ್ತಿತ್ತು. ವರ್ಷ ಪೂರ್ತಿ ಬಡತನ, ಹಸಿವು ಇದ್ದರೂ ರಂಜಾನ್ ಮಾಸದಲ್ಲಿ ಅದಾವುದಕ್ಕೂ ಅವಕಾಶವಿಲ್ಲದಂತೆ ಶ್ರೀಮಂತಿಕೆ ಭಾವ ಇರುತ್ತಿತ್ತು. ಮನೆಮಂದಿ ಹೊಸ ಬಟ್ಟೆ, ಚಪ್ಪಲಿ, ವೈವಿಧ್ಯಮ ಭಕ್ಷ್ಯಭೋಜನಕ್ಕಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗುತ್ತಿದ್ದೆವು.</p>.<p>ರಂಜಾನ್ ತಿಂಗಳಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ ವಿಶೇಷ ಭಕ್ಷ್ಯ, ಭೋಜನ ಸಿದ್ಧಪಡಿಸಿ ಇಫ್ತಾರ್ ಕೂಟ ಆಯೋಜಿಸಲಾಗುತ್ತಿತ್ತು. ನಾವು ಅವರ ಮನೆಗೆ, ಅವರು ನಮ್ಮ ಮನೆಗೆ ಹೋಗಿಬರುವುದು ಇರುತ್ತಿತ್ತು. ಆದರೆ, ಈ ಬಾರಿ ಎಲ್ಲಿಯೂ ಒಂದೇ ಒಂದು ಇಫ್ತಾರ್ ಕೂಟಗಳು ನಡೆದಿಲ್ಲ.</p>.<p>ನೆರೆಹೊರೆಯಲ್ಲಿ ಕೋವಿಡ್ನಿಂದ ಸಾವು, ನೋವುಗಳು ಸಂಭವಿಸುತ್ತಿರುವುದರಿಂದ ಇಫ್ತಾರ್ ಕೂಟ, ಹೊಸ ಬಟ್ಟೆ ಖರೀದಿ ಸೇರಿದಂತೆ ಸಡಗರ ಸಂಭ್ರಮ ಸಂಪೂರ್ಣ ಸ್ಥಗಿತಗೊಳಿಸಿದ್ದೇವೆ. ಈ ಬಾರಿ ಹಬ್ಬ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತವಾಗಿದೆ.</p>.<p>ಅಂಗಡಿ, ಮಳಿಗೆಗಳು ಬಾಗಿಲು ಮುಚ್ಚಿರುವುದರಿಂದ ಹೊಸ ಬಟ್ಟೆ, ಚಪ್ಪಲಿ ಖರೀದಿಗೆ ಅವಕಾಶವಿಲ್ಲದಂತಗಾದೆ. ಜೊತೆಗೆ ಲಾಕ್ಡೌನ್ ಪರಿಣಾಮ ದುಡಿಮೆಯೂ ಇಲ್ಲವಾಗಿದೆ. ಹೀಗಾಗಿ ಈ ವರ್ಷ ಹಳೇ ಬಟ್ಟೆಯನ್ನೇ ತೊಟ್ಟು ಹಬ್ಬ ಮಾಡುತ್ತೇವೆ. ಯಾರನ್ನೂ ಮನೆಗೆ ಆಹ್ವಾನಿಸುತ್ತಿಲ್ಲ. ನಾವೂ ಹೋಗುತ್ತಿಲ್ಲ.</p>.<p>ಪ್ರತಿ ದಿನ ರೋಜಾ ಮುಕ್ತಾಯವಾಗುವ ಸಂದರ್ಭದಲ್ಲಿ ಬಗೆಬಗೆಯ ಹಣ್ಣುಗಳು, ಡ್ರೈಫ್ರೂಟ್ಸ್, ವೈವಿಧ್ಯಮಯ ಖಾದ್ಯಗಳು ಇರುತ್ತಿದ್ದವು. ಆದರೆ, ಈ ವರ್ಷ ಅವಾವೂ ಇಲ್ಲ. ಕೇವಲ ಕರ್ಜೂರ, ನೀರನ್ನು ಸೇವಿಸುವ ಮೂಲಕ ರೋಜಾ ಮುಗಿಸುತ್ತಿದ್ದೇವೆ.</p>.<p>ಕೋವಿಡ್ ನಿರ್ಬಂಧ ಮತ್ತು ಆತಂಕ ಇರುವುದರಿಂದ ಯಾರೂ ಮಸೀದಿಗೆ ಹೋಗುತ್ತಿಲ್ಲ. ಮನೆಯಲ್ಲೇ ಐದು ಬಾರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದೇವೆ. ಕೋವಿಡ್ ಸಂಕಷ್ಟದಿಂದ ಜನರನ್ನು ರಕ್ಷಿಸುವಂತೆ ಅಲ್ಲಾಹುವಿನಲ್ಲಿ ಪ್ರತಿ ನಿತ್ಯ ಬೇಡುತ್ತಿದ್ದೇವೆ ಎನ್ನುತ್ತಾರೆ ರಾಜು ಅವರ ಪತ್ನಿ ಬಿಸ್ಮಿಲಾ ಢವಳಗಿ.</p>.<p>ಸುತ್ತಮುತ್ತಲು ಬರೀ ಆತಂಕ, ಸಾವು, ನೋವಿನ ಸುದ್ದಿ ಆವರಿಸಿರುವುದರಿಂದ ಈ ಬಾರಿ ರಂಜಾನ್ ಮಾಸವು ಖುಷಿ ನೀಡಿಲ್ಲ. ರೋಜಾ ಸದ್ದುಗದ್ದಲವಿಲ್ಲದೇ ತಣ್ಣಗೆ ಮುಗಿದೇ ಹೋಗಿದೆ. ಈದ್ ಉಲ್ ಫಿತ್ರ್ ಆಚರಿಸಲೂ ಮನಸ್ಸಿಲ್ಲ ಎನ್ನುತ್ತಾರೆ ಅವರು.</p>.<p>ಹಬ್ಬಕ್ಕಾಗಿ ಮಾಡಬೇಕಾಗಿದ್ದ ಖರ್ಚು, ವೆಚ್ಚವನ್ನು ಈ ಬಾರಿ ಸಂಕಷ್ಟದಲ್ಲಿರುವ ಬಡವರಿಗೆ ಕೈಲಾದಷ್ಟು ನೆರವಾಗಲು ಮುಂದಾಗಿದ್ದೇನೆ ಎನ್ನುತ್ತಾರೆ ರಾಜು ಢವಳಗಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಬಡವನಿರಲಿ, ಶ್ರೀಮಂತನಿರಲಿ ರಂಜಾನ್ ಮಾಸದಲ್ಲಿ ಪ್ರತಿ ಮುಸಲ್ಮಾನರ ಮನೆಯಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ ಸಹಜ. ರೋಜಾ ಆರಂಭ, ಮುಕ್ತಾಯದ ಸಮಯದಲ್ಲಿ ಅದೆಷ್ಟು ಖುಷಿ, ಕಲರವ ಆ ಮನೆಗಳಲ್ಲಿ ಇರುತ್ತಿದೆ ಎಂದರೆ ಸ್ವರ್ಗವೇ ಧರೆಗಳಿದಂತೆ.</p>.<p>ಹೊಸ ಬಟ್ಟೆಯನ್ನು ತೊಟ್ಟು,ಸುಗಂಧ(ಅತ್ತಾರ್)ವನ್ನು ಮೈಗೆ ಲೇಪಿಸಿಕೊಂಡು ಸಂಜೆಯ ಇಫ್ತಾರ್ಗೆ ಕುಟುಂಬದ ಸದಸ್ಯರೆಲ್ಲ ತಯಾರಾಗುವ ಪರಿ ಅಕ್ಕಪಕ್ಕದ ಅನ್ಯ ಸಮುದಾಯದವರನ್ನೂ ಆಕರ್ಷಿಸುವಂತಿರುತ್ತಿದೆ. ಆದರೆ, ಈ ವರ್ಷ ಕೋವಿಡ್ ಪರಿಣಾಮ ರಂಜಾನ್ ಮಾಸ ಹಾಗಿಲ್ಲ.</p>.<p>ಹೌದು, ಪ್ರತಿ ವರ್ಷದಂತೆ ಈ ವರ್ಷವೂ ‘ಮನೆಯೊಳಗಣ ರಂಜಾನ್’ ಕುರಿತು ವಿಶೇಷ ವರದಿಗಾಗಿ ವಿಜಯಪುರ ನಗರದ ಖಾಜಾ ಅಮಿನ್ ದರ್ಗಾ ನಿವಾಸಿ, ಛಾಯಾಗ್ರಾಹಕ ರಾಜು ಢವಳಗಿ ಅವರ ಮನೆಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡುಬಂದ ವಾತಾವರಣ ಎಲ್ಲ ಮುಸ್ಲಿಮರ ಮನೆಯ ಪ್ರತಿಬಿಂಬದಂತೆ ತೋರಿತು.</p>.<p>ಸುಣ್ಣ, ಬಣ್ಣ ಬಳಿದುಕೊಳ್ಳದ ಮನೆಯ ಗೋಡೆಗಳು, ಘಮಘಮಿಸಿದ ಅಡುಗೆ ಕೋಣೆ, ಹಳೇ ಬಟ್ಟೆಯಲ್ಲೇ ತಿರುಗಾಡುವ ಮಕ್ಕಳು, ಯುವಕರು, ಹಿರಿಯರು, ಮೆಹಂದಿ ಕಾಣದ ಹೆಣ್ಣು ಮಕ್ಕಳ ಬರಿಗೈಗಳು ಕಂಡವೇ ಹೊರತು, ಹಬ್ಬದ ಸಂಭ್ರಮ ಸೂಚಿಸುವ ಯಾವೊಂದು ಪ್ರತೀಕಗಳು ಅಲ್ಲಿ ಕಾಣಲಿಲ್ಲ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜು ಢವಳಗಿ, ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್ ಅಂಗವಾಗಿ ರೋಜಾ (ಉಪವಾಸ) ಮಾಡುತ್ತಿದ್ದೇವೆ. ಆದರೆ, ಕೋವಿಡ್ ತಂದೊಡ್ಡಿರುವ ಸಂಕಷ್ಟದಿಂದಾಗಿ ಈ ಬಾರಿ ಹಬ್ಬದ ಸಡಗರ ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಹಿಂದಿನ ವರ್ಷಗಳಲ್ಲಿ ರಂಜಾನ್ ಬಂತೆಂದರೆ ಮನೆಯಲ್ಲಿ ಅದೇನೋ ಸಡಗರ ಮನೆಮಾಡಿರುತ್ತಿತ್ತು. ವರ್ಷ ಪೂರ್ತಿ ಬಡತನ, ಹಸಿವು ಇದ್ದರೂ ರಂಜಾನ್ ಮಾಸದಲ್ಲಿ ಅದಾವುದಕ್ಕೂ ಅವಕಾಶವಿಲ್ಲದಂತೆ ಶ್ರೀಮಂತಿಕೆ ಭಾವ ಇರುತ್ತಿತ್ತು. ಮನೆಮಂದಿ ಹೊಸ ಬಟ್ಟೆ, ಚಪ್ಪಲಿ, ವೈವಿಧ್ಯಮ ಭಕ್ಷ್ಯಭೋಜನಕ್ಕಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗುತ್ತಿದ್ದೆವು.</p>.<p>ರಂಜಾನ್ ತಿಂಗಳಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ ವಿಶೇಷ ಭಕ್ಷ್ಯ, ಭೋಜನ ಸಿದ್ಧಪಡಿಸಿ ಇಫ್ತಾರ್ ಕೂಟ ಆಯೋಜಿಸಲಾಗುತ್ತಿತ್ತು. ನಾವು ಅವರ ಮನೆಗೆ, ಅವರು ನಮ್ಮ ಮನೆಗೆ ಹೋಗಿಬರುವುದು ಇರುತ್ತಿತ್ತು. ಆದರೆ, ಈ ಬಾರಿ ಎಲ್ಲಿಯೂ ಒಂದೇ ಒಂದು ಇಫ್ತಾರ್ ಕೂಟಗಳು ನಡೆದಿಲ್ಲ.</p>.<p>ನೆರೆಹೊರೆಯಲ್ಲಿ ಕೋವಿಡ್ನಿಂದ ಸಾವು, ನೋವುಗಳು ಸಂಭವಿಸುತ್ತಿರುವುದರಿಂದ ಇಫ್ತಾರ್ ಕೂಟ, ಹೊಸ ಬಟ್ಟೆ ಖರೀದಿ ಸೇರಿದಂತೆ ಸಡಗರ ಸಂಭ್ರಮ ಸಂಪೂರ್ಣ ಸ್ಥಗಿತಗೊಳಿಸಿದ್ದೇವೆ. ಈ ಬಾರಿ ಹಬ್ಬ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತವಾಗಿದೆ.</p>.<p>ಅಂಗಡಿ, ಮಳಿಗೆಗಳು ಬಾಗಿಲು ಮುಚ್ಚಿರುವುದರಿಂದ ಹೊಸ ಬಟ್ಟೆ, ಚಪ್ಪಲಿ ಖರೀದಿಗೆ ಅವಕಾಶವಿಲ್ಲದಂತಗಾದೆ. ಜೊತೆಗೆ ಲಾಕ್ಡೌನ್ ಪರಿಣಾಮ ದುಡಿಮೆಯೂ ಇಲ್ಲವಾಗಿದೆ. ಹೀಗಾಗಿ ಈ ವರ್ಷ ಹಳೇ ಬಟ್ಟೆಯನ್ನೇ ತೊಟ್ಟು ಹಬ್ಬ ಮಾಡುತ್ತೇವೆ. ಯಾರನ್ನೂ ಮನೆಗೆ ಆಹ್ವಾನಿಸುತ್ತಿಲ್ಲ. ನಾವೂ ಹೋಗುತ್ತಿಲ್ಲ.</p>.<p>ಪ್ರತಿ ದಿನ ರೋಜಾ ಮುಕ್ತಾಯವಾಗುವ ಸಂದರ್ಭದಲ್ಲಿ ಬಗೆಬಗೆಯ ಹಣ್ಣುಗಳು, ಡ್ರೈಫ್ರೂಟ್ಸ್, ವೈವಿಧ್ಯಮಯ ಖಾದ್ಯಗಳು ಇರುತ್ತಿದ್ದವು. ಆದರೆ, ಈ ವರ್ಷ ಅವಾವೂ ಇಲ್ಲ. ಕೇವಲ ಕರ್ಜೂರ, ನೀರನ್ನು ಸೇವಿಸುವ ಮೂಲಕ ರೋಜಾ ಮುಗಿಸುತ್ತಿದ್ದೇವೆ.</p>.<p>ಕೋವಿಡ್ ನಿರ್ಬಂಧ ಮತ್ತು ಆತಂಕ ಇರುವುದರಿಂದ ಯಾರೂ ಮಸೀದಿಗೆ ಹೋಗುತ್ತಿಲ್ಲ. ಮನೆಯಲ್ಲೇ ಐದು ಬಾರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದೇವೆ. ಕೋವಿಡ್ ಸಂಕಷ್ಟದಿಂದ ಜನರನ್ನು ರಕ್ಷಿಸುವಂತೆ ಅಲ್ಲಾಹುವಿನಲ್ಲಿ ಪ್ರತಿ ನಿತ್ಯ ಬೇಡುತ್ತಿದ್ದೇವೆ ಎನ್ನುತ್ತಾರೆ ರಾಜು ಅವರ ಪತ್ನಿ ಬಿಸ್ಮಿಲಾ ಢವಳಗಿ.</p>.<p>ಸುತ್ತಮುತ್ತಲು ಬರೀ ಆತಂಕ, ಸಾವು, ನೋವಿನ ಸುದ್ದಿ ಆವರಿಸಿರುವುದರಿಂದ ಈ ಬಾರಿ ರಂಜಾನ್ ಮಾಸವು ಖುಷಿ ನೀಡಿಲ್ಲ. ರೋಜಾ ಸದ್ದುಗದ್ದಲವಿಲ್ಲದೇ ತಣ್ಣಗೆ ಮುಗಿದೇ ಹೋಗಿದೆ. ಈದ್ ಉಲ್ ಫಿತ್ರ್ ಆಚರಿಸಲೂ ಮನಸ್ಸಿಲ್ಲ ಎನ್ನುತ್ತಾರೆ ಅವರು.</p>.<p>ಹಬ್ಬಕ್ಕಾಗಿ ಮಾಡಬೇಕಾಗಿದ್ದ ಖರ್ಚು, ವೆಚ್ಚವನ್ನು ಈ ಬಾರಿ ಸಂಕಷ್ಟದಲ್ಲಿರುವ ಬಡವರಿಗೆ ಕೈಲಾದಷ್ಟು ನೆರವಾಗಲು ಮುಂದಾಗಿದ್ದೇನೆ ಎನ್ನುತ್ತಾರೆ ರಾಜು ಢವಳಗಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>