<p><strong>ವಿಜಯಪುರ:</strong> ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ಹತ್ತಾರು ಕಲಾ ತಂಡಗಳ ಕಲಾ ವೈಭವ, ಜೈ ಚನ್ನಮ್ಮಾ ಎಂಬ ಶಲ್ಯ ಧರಿಸಿದ ಸಾವಿರಾರು ಯುವಕರ ದಂಡು, ಮುಗಿಲು ಮುಟ್ಟಿದ ಜೈ ಚನ್ಮಮ್ಮಾ ಎಂಬ ಜಯ ಘೋಷ....</p>.<p>ವಿಜಯಪುರದಲ್ಲಿ ರಾಣಿ ಚನ್ನಮ್ನ ಅವರ 247 ನೇ ಜಯಂತೋತ್ಸವ ಹಾಗೂ 201ನೇ ವಿಜಯೋತ್ಸವ ಪ್ರಯುಕ್ತ ನಡೆದ ಭವ್ಯ ಮೆರವಣಿಗೆಯ ದೃಶ್ಯಗಳಿವು.</p>.<p>ಕರ್ನಾಟಕ ರಾಜ್ಯ ಕಿತ್ತೂರ ರಾಣಿ ಚೆನ್ನಮ್ಮ ಉತ್ಸವ ಸಮಿತಿ ವತಿಯಿಂದ ವಿಜಯಪುರ ನಗರದಲ್ಲಿ ಭಾನುವಾರ ಆಯೋಜಿಸಲಾದ ಭವ್ಯ ಮೆರವಣಿಗೆ ವೈಭವೋಪೇರಿತವಾಗಿ ನಡೆಯಿತು.</p>.<p>ಮಹಿಳಾ ಡೊಳ್ಳು ಮೆರವಣಿಗೆಯಲ್ಲಿ ಗಮನ ಸೆಳೆಯಿತು. ರಾಣಿ ಚನ್ನಮ್ಮ ಅವರ ಶೌರ್ಯ, ದೇಶಾಭಿಮಾನ ಸಾರುವ ಗೀತೆಗಳು ಮೆರವಣಿಗೆಯುದ್ದಕ್ಕೂ ಅನುರುಣಿಸಿದವು. ವಿವಿಧ ಕಲಾ ತಂಡಗಳ ವಾದ್ಯಗಳಿಂದ ಮೊಳಗಿದ ಸದ್ದು ಹೊಸ ಉತ್ಸಾಹ ಮೊಳಗಿಸಿತು.</p>.<p>ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ, ಗಾಂಧಿ ವೃತ್ತ ಮೂಲಕ ಸಾಗಿ ಕೇಂದ್ರ ಬಸ್ ನಿಲ್ದಾಣ ಎದುರು ಇರುವ ರಾಣಿ ಚೆನ್ನಮ್ಮ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು.</p>.<p>ಮೆರವಣಿಗೆಯಲ್ಲಿ ಬಬಲೇಶ್ವರ ಬ್ರಹ್ಮನ ಮಠ ಮಹಾದೇವ ಶಿವಾಚಾರ್ಯರು, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಭೂರಣಾಪುರದ ಯೋಗೇಶ್ವರಿ ಮಾತಾಜಿ, ಸುರೇಶ ಬಿರಾದಾರ, ಹೊನಮಲ್ಲ ಸಾರವಾರ, ಅಶೋಕಗೌಡ ಪಾಟೀಲ ಹಡಗಲಿ, ಬಸವರಾಜ ಕಳಸಗೊಂಡ, ಮುತ್ತು ಜಂಗಮಶೆಟ್ಟಿ, ಬಿ.ಎಂ.ಬಿರಾದಾರ, ಎಂ.ಎಂ.ಪಾಟೀಲ, ಸುರೇಶ ಶೆಡಶ್ಯಾಳ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ಹತ್ತಾರು ಕಲಾ ತಂಡಗಳ ಕಲಾ ವೈಭವ, ಜೈ ಚನ್ನಮ್ಮಾ ಎಂಬ ಶಲ್ಯ ಧರಿಸಿದ ಸಾವಿರಾರು ಯುವಕರ ದಂಡು, ಮುಗಿಲು ಮುಟ್ಟಿದ ಜೈ ಚನ್ಮಮ್ಮಾ ಎಂಬ ಜಯ ಘೋಷ....</p>.<p>ವಿಜಯಪುರದಲ್ಲಿ ರಾಣಿ ಚನ್ನಮ್ನ ಅವರ 247 ನೇ ಜಯಂತೋತ್ಸವ ಹಾಗೂ 201ನೇ ವಿಜಯೋತ್ಸವ ಪ್ರಯುಕ್ತ ನಡೆದ ಭವ್ಯ ಮೆರವಣಿಗೆಯ ದೃಶ್ಯಗಳಿವು.</p>.<p>ಕರ್ನಾಟಕ ರಾಜ್ಯ ಕಿತ್ತೂರ ರಾಣಿ ಚೆನ್ನಮ್ಮ ಉತ್ಸವ ಸಮಿತಿ ವತಿಯಿಂದ ವಿಜಯಪುರ ನಗರದಲ್ಲಿ ಭಾನುವಾರ ಆಯೋಜಿಸಲಾದ ಭವ್ಯ ಮೆರವಣಿಗೆ ವೈಭವೋಪೇರಿತವಾಗಿ ನಡೆಯಿತು.</p>.<p>ಮಹಿಳಾ ಡೊಳ್ಳು ಮೆರವಣಿಗೆಯಲ್ಲಿ ಗಮನ ಸೆಳೆಯಿತು. ರಾಣಿ ಚನ್ನಮ್ಮ ಅವರ ಶೌರ್ಯ, ದೇಶಾಭಿಮಾನ ಸಾರುವ ಗೀತೆಗಳು ಮೆರವಣಿಗೆಯುದ್ದಕ್ಕೂ ಅನುರುಣಿಸಿದವು. ವಿವಿಧ ಕಲಾ ತಂಡಗಳ ವಾದ್ಯಗಳಿಂದ ಮೊಳಗಿದ ಸದ್ದು ಹೊಸ ಉತ್ಸಾಹ ಮೊಳಗಿಸಿತು.</p>.<p>ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ, ಗಾಂಧಿ ವೃತ್ತ ಮೂಲಕ ಸಾಗಿ ಕೇಂದ್ರ ಬಸ್ ನಿಲ್ದಾಣ ಎದುರು ಇರುವ ರಾಣಿ ಚೆನ್ನಮ್ಮ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು.</p>.<p>ಮೆರವಣಿಗೆಯಲ್ಲಿ ಬಬಲೇಶ್ವರ ಬ್ರಹ್ಮನ ಮಠ ಮಹಾದೇವ ಶಿವಾಚಾರ್ಯರು, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಭೂರಣಾಪುರದ ಯೋಗೇಶ್ವರಿ ಮಾತಾಜಿ, ಸುರೇಶ ಬಿರಾದಾರ, ಹೊನಮಲ್ಲ ಸಾರವಾರ, ಅಶೋಕಗೌಡ ಪಾಟೀಲ ಹಡಗಲಿ, ಬಸವರಾಜ ಕಳಸಗೊಂಡ, ಮುತ್ತು ಜಂಗಮಶೆಟ್ಟಿ, ಬಿ.ಎಂ.ಬಿರಾದಾರ, ಎಂ.ಎಂ.ಪಾಟೀಲ, ಸುರೇಶ ಶೆಡಶ್ಯಾಳ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>