<p><strong>ವಿಜಯಪುರ</strong>:ಬಿಪಿಎಲ್ ಕಾರ್ಡ್ದಾರರಿಗೆ ನೀಡುತ್ತಿರುವ ತಲಾ 5 ಕೆ.ಜಿ ಅಕ್ಕಿಯನ್ನು ಇನ್ನು ಮುಂದೆ 2 ಕೆ.ಜಿಗೆ ಇಳಿಸಿ, ಅದರ ಬದಲು ಮೈಸೂರು ಭಾಗದಲ್ಲಿ 3 ಕೆ.ಜಿ ರಾಗಿ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ 3 ಕೆ.ಜಿ ಜೋಳವನ್ನು ನೀಡುವುದು. ಅಲ್ಲದೇ, ಅಂತ್ಯೋದಯ ಅನ್ನ ಯೋಜನೆಯ ಪ್ರತಿ ಕಾರ್ಡ್ದಾರರಿಗೆ ಮಾಸಿಕ 35 ಕೆ.ಜಿ ಅಕ್ಕಿಯನ್ನು 15 ಕೆ.ಜಿಗೆ ಇಳಿಸಲು ತಿರ್ಮಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಎಸ್ಯುಸಿಐ ಕಮ್ಯೂನಿಷ್ಟ್ ಪಕ್ಷದ ವಿಜಯಪುರ ಜಿಲ್ಲಾ ಸಮಿತಿಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.</p>.<p>ಈ ಹಿಂದೆ ಅನ್ನ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ತಲಾ 7 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಇದನ್ನು ಸದ್ದಿಲ್ಲದೆ 5 ಕೆ.ಜಿ ಗೆ ಇಳಿಸಲಾಗಿತ್ತು. ಆ ಸಂದರ್ಭದಲ್ಲಿ ಕೆಂದ್ರ ಸರ್ಕಾರವು ಹೆಚ್ಚುವರಿ ದವಸ, ಧಾನ್ಯ ಪೂರೈಸಿದ್ದರಿಂದ ಬಡವರಿಗೆ ತಕ್ಷಣಕ್ಕೆ ಇದರ ಪರಿಣಾಮ ತಟ್ಟಲಿಲ್ಲ. ಕಳೆದ ನವೆಂಬರ್ನಿಂದ ಕೇಂದ್ರದ ಆ ಹೆಚ್ಚುವರಿ ಯೋಜನೆ ಮುಗಿದಿದೆ ಎಂದು ಹೇಳಿದರು.</p>.<p>ಇದೀಗ ಕೋವಿಡ್ ಎರಡನೇ ಅಲೇ ತೀವ್ರ ಸ್ವರೂಪ ಪಡೆದುಕೊಂಡಿದ್ದು ಜನತೆ ಮತ್ತೆ ಕಂಗಾಲಾಗಿದ್ದಾರೆ. ಮತ್ತೇ ಭಾಗಶ: ಲಾಕ್ ಡೌನ್ ಹೇರಲಾಗುತ್ತಿದೆ. ಕೂಲಿಕಾರರು ಬೀದಿ ಬದಿ ವ್ಯಾಪಾರಿಗಳು ಬಡವರು ಬಡವರು ಊಟಕ್ಕೆ ಪರದಾಡುವ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದರು.</p>.<p>ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕೂಡಾ ಈಗ ರಾಜ್ಯಕ್ಕೆ ಆಹಾರ ಪದಾರ್ಥಗಳು ಒದಗಿಸಿ ತನ್ನ ಜವಾಬ್ದಾರಿ ಮೆರೆಯಬೇಕಿದೆ. ಇಂತಹ ಸಂದರ್ಭದಲ್ಲಿ ಪಡಿತರ ವಿತರಣೆಯ ಸಾಮಗ್ರಿಗಳನ್ನು ಹೆಚ್ಚು ಮಾಡಬೇಕಲ್ಲದೇ, ಕಡಿತಗೊಳಿಸಿಸುವ ಕ್ರಮವಂತೂ ಅತ್ಯಂತ ಅಮಾನವೀಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.</p>.<p>***</p>.<p>ರಾಗಿ, ಜೋಳವನ್ನು ಹೆಚ್ಚುವರಿಯಾಗಿ ನೀಡಬೇಕೇ ಹೊರತು, ಅಕ್ಕಿಯನ್ನು ಕಡಿತಗೊಳಿಸಿರುವುದು ಖಂಡನೀಯ. ಬೇಳೆಕಾಳುಗಳು, ಎಣ್ಣೆ, ಸಕ್ಕರೆ ಮೊದಲಾದ ಅಗತ್ಯ ಪದಾರ್ಥಗಳನ್ನೂ ಪಡಿತರ ಮೂಲಕ ವಿತರಿಸಬೇಕು.<br />-<em><strong>ಬಿ.ಭಗವಾನರೆಡ್ಡಿ,ಜಿಲ್ಲಾ ಕಾರ್ಯದರ್ಶಿ,</strong></em><em><strong>ಎಸ್ಯುಸಿಐ ಕಮ್ಯೂನಿಷ್ಟ್ ಪಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>:ಬಿಪಿಎಲ್ ಕಾರ್ಡ್ದಾರರಿಗೆ ನೀಡುತ್ತಿರುವ ತಲಾ 5 ಕೆ.ಜಿ ಅಕ್ಕಿಯನ್ನು ಇನ್ನು ಮುಂದೆ 2 ಕೆ.ಜಿಗೆ ಇಳಿಸಿ, ಅದರ ಬದಲು ಮೈಸೂರು ಭಾಗದಲ್ಲಿ 3 ಕೆ.ಜಿ ರಾಗಿ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ 3 ಕೆ.ಜಿ ಜೋಳವನ್ನು ನೀಡುವುದು. ಅಲ್ಲದೇ, ಅಂತ್ಯೋದಯ ಅನ್ನ ಯೋಜನೆಯ ಪ್ರತಿ ಕಾರ್ಡ್ದಾರರಿಗೆ ಮಾಸಿಕ 35 ಕೆ.ಜಿ ಅಕ್ಕಿಯನ್ನು 15 ಕೆ.ಜಿಗೆ ಇಳಿಸಲು ತಿರ್ಮಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಎಸ್ಯುಸಿಐ ಕಮ್ಯೂನಿಷ್ಟ್ ಪಕ್ಷದ ವಿಜಯಪುರ ಜಿಲ್ಲಾ ಸಮಿತಿಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.</p>.<p>ಈ ಹಿಂದೆ ಅನ್ನ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ತಲಾ 7 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಇದನ್ನು ಸದ್ದಿಲ್ಲದೆ 5 ಕೆ.ಜಿ ಗೆ ಇಳಿಸಲಾಗಿತ್ತು. ಆ ಸಂದರ್ಭದಲ್ಲಿ ಕೆಂದ್ರ ಸರ್ಕಾರವು ಹೆಚ್ಚುವರಿ ದವಸ, ಧಾನ್ಯ ಪೂರೈಸಿದ್ದರಿಂದ ಬಡವರಿಗೆ ತಕ್ಷಣಕ್ಕೆ ಇದರ ಪರಿಣಾಮ ತಟ್ಟಲಿಲ್ಲ. ಕಳೆದ ನವೆಂಬರ್ನಿಂದ ಕೇಂದ್ರದ ಆ ಹೆಚ್ಚುವರಿ ಯೋಜನೆ ಮುಗಿದಿದೆ ಎಂದು ಹೇಳಿದರು.</p>.<p>ಇದೀಗ ಕೋವಿಡ್ ಎರಡನೇ ಅಲೇ ತೀವ್ರ ಸ್ವರೂಪ ಪಡೆದುಕೊಂಡಿದ್ದು ಜನತೆ ಮತ್ತೆ ಕಂಗಾಲಾಗಿದ್ದಾರೆ. ಮತ್ತೇ ಭಾಗಶ: ಲಾಕ್ ಡೌನ್ ಹೇರಲಾಗುತ್ತಿದೆ. ಕೂಲಿಕಾರರು ಬೀದಿ ಬದಿ ವ್ಯಾಪಾರಿಗಳು ಬಡವರು ಬಡವರು ಊಟಕ್ಕೆ ಪರದಾಡುವ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದರು.</p>.<p>ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕೂಡಾ ಈಗ ರಾಜ್ಯಕ್ಕೆ ಆಹಾರ ಪದಾರ್ಥಗಳು ಒದಗಿಸಿ ತನ್ನ ಜವಾಬ್ದಾರಿ ಮೆರೆಯಬೇಕಿದೆ. ಇಂತಹ ಸಂದರ್ಭದಲ್ಲಿ ಪಡಿತರ ವಿತರಣೆಯ ಸಾಮಗ್ರಿಗಳನ್ನು ಹೆಚ್ಚು ಮಾಡಬೇಕಲ್ಲದೇ, ಕಡಿತಗೊಳಿಸಿಸುವ ಕ್ರಮವಂತೂ ಅತ್ಯಂತ ಅಮಾನವೀಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.</p>.<p>***</p>.<p>ರಾಗಿ, ಜೋಳವನ್ನು ಹೆಚ್ಚುವರಿಯಾಗಿ ನೀಡಬೇಕೇ ಹೊರತು, ಅಕ್ಕಿಯನ್ನು ಕಡಿತಗೊಳಿಸಿರುವುದು ಖಂಡನೀಯ. ಬೇಳೆಕಾಳುಗಳು, ಎಣ್ಣೆ, ಸಕ್ಕರೆ ಮೊದಲಾದ ಅಗತ್ಯ ಪದಾರ್ಥಗಳನ್ನೂ ಪಡಿತರ ಮೂಲಕ ವಿತರಿಸಬೇಕು.<br />-<em><strong>ಬಿ.ಭಗವಾನರೆಡ್ಡಿ,ಜಿಲ್ಲಾ ಕಾರ್ಯದರ್ಶಿ,</strong></em><em><strong>ಎಸ್ಯುಸಿಐ ಕಮ್ಯೂನಿಷ್ಟ್ ಪಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>