‘ಆರೋಗ್ಯದ ವಿಷಯದಲ್ಲಿ ಕೇಂದ್ರದ ಜತೆ ಜಟಾಪಟಿ ನಡೆಸಲ್ಲ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್, ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಒಟ್ಟುಗೂಡಿಸಿ 1.20 ಕೋಟಿ ಕುಟುಂಬದ 4.5 ಕೋಟಿ ಜನರಿಗೆ ಆರೋಗ್ಯ ಸೌಲಭ್ಯ ಒದಗಿಸುತ್ತೇವೆ. ಇದಕ್ಕೆ ಯಾವ ವಿಶೇಷ ಗುರುತಿನ ಕಾರ್ಡ್ ಬೇಕಿಲ್ಲ. ಲಭ್ಯ ದಾಖಲೆಗಳನ್ನು ಪ್ರದರ್ಶಿಸಿ ರಾಜ್ಯದಲ್ಲಿ ಈ ಯೋಜನೆಗಳಡಿ ನೋಂದಾಯಿಸಿಕೊಂಡಿರುವ 500 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು’ ಎಂದು ಶಿವಾನಂದ ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.