<p><strong>ಇಂಡಿ:</strong> ತಾಲ್ಲೂಕಿನ ಭುಯ್ಯಾರ ಗ್ರಾಮದಿಂದ ಸಾತಲಗಾಂವ, ಲಾಳಸಂಗಿ ಮತ್ತು ನಾಗರಹಳ್ಳಿ ಗ್ರಾಮಗಳಿಗೆ ಕೂಡುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗವಾಗಿ ಅಡ್ಡಾಡುವ ಸಾರ್ವಜನಿಕರಿಗೆ ಅತೀವ ತೊಂದರೆಯಾಗಿದೆ. ಶಾಲಾ ಮಕ್ಕಳು, ಬೈಕ್ ಸವಾರರು ದಿನನಿತ್ಯ ಪರಿತಪಸುವಂತಾಗಿದೆ ಕಾರಣ ಈ ರಸ್ತೆಯನ್ನು ಕೂಡಲೇ ಡಾಂಬರೀಕರಣ ಮಾಡಬೇಕೆಂದು ಬುಧವಾರ ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರಿಗೆ ನೂರಾರು ರೈತರು ಮನವಿ ಪತ್ರ ಸಲ್ಲಿಸಿದರು.</p>.<p>ಈ ಸಂದರ್ಭದಲ್ಲಿ ರೈತ ಮುಂಖಡರಾದ ಗಂಗಾಧರ ತಳವಾರ ಮತತು ಪ್ರಭುಲಿಂಗ ಗೋಳಸಾರ ಮಾತನಾಡಿ, ನಮ್ಮ ಗ್ರಾಮದ ಅಕ್ಕಪಕ್ಕದ ಗ್ರಾಮಗಳ ಎಲ್ಲಾ ರಸ್ತೆಗಳು ಡಾಂಬರೀಕರಣಗೊಂಡಿವೆ. ನಮ್ಮ ಗ್ರಾಮದ ಈ ರಸ್ತೆ ಮಾತ್ರ ಕೆಸರಿನಿಂದ ಕೂಡಿದೆ. ಇಲ್ಲಿ ಅಡ್ಡಾಡಲು ಕಷ್ಟವಾಗುತ್ತಿದೆ. ಇದನ್ನು ಈ ಕೂಡಲೇ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿದರು.</p>.<p>ಒಂದು ವೇಳೆ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಕ್ರಮ ಜರುಗಿಸದಿದ್ದರೆ ಗ್ರಾಮಸ್ಥರೆಲ್ಲರೂ ಕೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.</p>.<p>ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಆರ್ಡಿಪಿಐ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದುದಲ್ಲದೇ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಕೆಲವು ದಿವಸಗಳ ಕಾಲ ಕಾಯ್ದು ನೋಡುತ್ತೇವೆ ಎಂದರು.</p>.<p>ರೈತರಾದ ಗಂಗಾಧರ ತಳವಾರ, ಪ್ರಭುಲಿಂಗ ಗೋಳಸಾರ ತಿಳಿಸಿದ್ದಾರೆ. ಮನವಿ ಕೊಡುವ ಸಂದರ್ಭದಲ್ಲಿ ಶ್ಯಾಂತಕುಮಾರ ಬೆಳಮಗಿ, ದಶರಥ ಬಾರಾಮತಿ, ಗಡ್ಡೆಪ್ಪ ಆಳೂರ, ಕೃಷ್ಣಪ್ಪ ಗೋಲಗೇರಿ, ಗುರು ಅಜಗೊಂಡ, ಸಿದ್ದಬೀರ ಸಾಲುಟಗಿ, ಮಾಸಿದ್ದ ಮಖಣಾಪೂರ, ಸಾತಗೌಡ ಬಿರಾದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ:</strong> ತಾಲ್ಲೂಕಿನ ಭುಯ್ಯಾರ ಗ್ರಾಮದಿಂದ ಸಾತಲಗಾಂವ, ಲಾಳಸಂಗಿ ಮತ್ತು ನಾಗರಹಳ್ಳಿ ಗ್ರಾಮಗಳಿಗೆ ಕೂಡುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗವಾಗಿ ಅಡ್ಡಾಡುವ ಸಾರ್ವಜನಿಕರಿಗೆ ಅತೀವ ತೊಂದರೆಯಾಗಿದೆ. ಶಾಲಾ ಮಕ್ಕಳು, ಬೈಕ್ ಸವಾರರು ದಿನನಿತ್ಯ ಪರಿತಪಸುವಂತಾಗಿದೆ ಕಾರಣ ಈ ರಸ್ತೆಯನ್ನು ಕೂಡಲೇ ಡಾಂಬರೀಕರಣ ಮಾಡಬೇಕೆಂದು ಬುಧವಾರ ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರಿಗೆ ನೂರಾರು ರೈತರು ಮನವಿ ಪತ್ರ ಸಲ್ಲಿಸಿದರು.</p>.<p>ಈ ಸಂದರ್ಭದಲ್ಲಿ ರೈತ ಮುಂಖಡರಾದ ಗಂಗಾಧರ ತಳವಾರ ಮತತು ಪ್ರಭುಲಿಂಗ ಗೋಳಸಾರ ಮಾತನಾಡಿ, ನಮ್ಮ ಗ್ರಾಮದ ಅಕ್ಕಪಕ್ಕದ ಗ್ರಾಮಗಳ ಎಲ್ಲಾ ರಸ್ತೆಗಳು ಡಾಂಬರೀಕರಣಗೊಂಡಿವೆ. ನಮ್ಮ ಗ್ರಾಮದ ಈ ರಸ್ತೆ ಮಾತ್ರ ಕೆಸರಿನಿಂದ ಕೂಡಿದೆ. ಇಲ್ಲಿ ಅಡ್ಡಾಡಲು ಕಷ್ಟವಾಗುತ್ತಿದೆ. ಇದನ್ನು ಈ ಕೂಡಲೇ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿದರು.</p>.<p>ಒಂದು ವೇಳೆ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಕ್ರಮ ಜರುಗಿಸದಿದ್ದರೆ ಗ್ರಾಮಸ್ಥರೆಲ್ಲರೂ ಕೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.</p>.<p>ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಆರ್ಡಿಪಿಐ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದುದಲ್ಲದೇ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಕೆಲವು ದಿವಸಗಳ ಕಾಲ ಕಾಯ್ದು ನೋಡುತ್ತೇವೆ ಎಂದರು.</p>.<p>ರೈತರಾದ ಗಂಗಾಧರ ತಳವಾರ, ಪ್ರಭುಲಿಂಗ ಗೋಳಸಾರ ತಿಳಿಸಿದ್ದಾರೆ. ಮನವಿ ಕೊಡುವ ಸಂದರ್ಭದಲ್ಲಿ ಶ್ಯಾಂತಕುಮಾರ ಬೆಳಮಗಿ, ದಶರಥ ಬಾರಾಮತಿ, ಗಡ್ಡೆಪ್ಪ ಆಳೂರ, ಕೃಷ್ಣಪ್ಪ ಗೋಲಗೇರಿ, ಗುರು ಅಜಗೊಂಡ, ಸಿದ್ದಬೀರ ಸಾಲುಟಗಿ, ಮಾಸಿದ್ದ ಮಖಣಾಪೂರ, ಸಾತಗೌಡ ಬಿರಾದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>