ಭಾನುವಾರ, 12 ಅಕ್ಟೋಬರ್ 2025
×
ADVERTISEMENT
ADVERTISEMENT

ವಿಜಯಪುರ: ಪಂಚ ವಿಚಾರಧಾರೆ ಪಾಲನೆಗೆ ಕರೆ

ಶತಮಾನೋತ್ಸವ, ವಿಜಯದಶಮಿ ಉತ್ಸವದಲ್ಲಿ ಗೋಪಾಲ ನಾಗರಕಟ್ಟೆ
Published : 12 ಅಕ್ಟೋಬರ್ 2025, 7:46 IST
Last Updated : 12 ಅಕ್ಟೋಬರ್ 2025, 7:46 IST
ಫಾಲೋ ಮಾಡಿ
Comments
ವಿಜಯಪುರ ನಗರದ ದರಬಾರ್‌ ಮೈದಾನದಲ್ಲಿ ಶನಿವಾರ ನಡೆದ  ಆರ್‌ಎಸ್‌ಎಸ್‌  ವಿಜಯ ದಶಮಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಗಣವೇಷಧಾರಿಗಳು  –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ದರಬಾರ್‌ ಮೈದಾನದಲ್ಲಿ ಶನಿವಾರ ನಡೆದ  ಆರ್‌ಎಸ್‌ಎಸ್‌  ವಿಜಯ ದಶಮಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಗಣವೇಷಧಾರಿಗಳು  –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಶನಿವಾರ ಆರ್‌ಎಸ್‌ಎಸ್‌ ಪಥ ಸಂಚಲನ ಸಾಗುವ ಮಾರ್ಗದಲ್ಲಿ ರಾಷ್ಟ್ರ ನಾಯಕರ ವೇಷಧರಿಸಿ ನಿಂತಿದ್ದ ಚಿಣ್ಣರು ಗಮನ ಸೆಳೆದರು  –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಶನಿವಾರ ಆರ್‌ಎಸ್‌ಎಸ್‌ ಪಥ ಸಂಚಲನ ಸಾಗುವ ಮಾರ್ಗದಲ್ಲಿ ರಾಷ್ಟ್ರ ನಾಯಕರ ವೇಷಧರಿಸಿ ನಿಂತಿದ್ದ ಚಿಣ್ಣರು ಗಮನ ಸೆಳೆದರು  –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಶನಿವಾರ ಆರ್‌ಎಸ್‌ಎಸ್‌ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಶನಿವಾರ ಆರ್‌ಎಸ್‌ಎಸ್‌ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು –ಪ್ರಜಾವಾಣಿ ಚಿತ್ರ
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸಮಾಜ ಕೇವಲ ಸ್ವೀಕರಿಸಿದರೆ ಸಾಲದು ಸಂಘದ ವಿಚಾರಗಳನ್ನು ಅನುಸರಿಸಬೇಕು 
ಗೋಪಾಲ ನಾಗರಕಟ್ಟೆಅಖಿಲ ಭಾರತೀಯ ಕಾರ್ಯದರ್ಶಿ ವಿಎಚ್‌ಪಿ 
ಆರ್‌ಎಸ್‌ಎಸ್ ಆಕರ್ಷಕ ಪಥಸಂಚಲನ
ವಿಜಯಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ವಿಜಯ ದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಸಂಭ್ರಮ ಮನೆ ಮಾಡಿತ್ತು. ತಳಿರು ತೋರಣಗಳಿಂದ ಕೇಸರಿಮಯವಾಗಿದ್ದ ನಗರದ ಪ್ರಮುಖ ಮಾರ್ಗಗಳಲ್ಲಿ ಗಣವೇಷಧಾರಿಗಳಿಂದ ಆಕರ್ಷಕ ಪಥಸಂಚಲ ನಡೆಯಿತು. ಪಂಥಸಂಚಲನ ಸಾಗಿದ ಮಾರ್ಗದಲ್ಲಿ ಚಿತ್ತಾಕರ್ಷಕ ರಂಗೋಲಿ ಹಾಕಲಾಗಿತ್ತು. ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪವೃಷ್ಟಿಗೈದರು. ರಸ್ತೆಗಳ ಇಕ್ಕೆಲಗಳಲ್ಲಿ ಸಾಲಾಗಿ ನಿಂತ ಜನ ಪಥ ಸಂಚಲನ ವೀಕ್ಷಿಸಿದರು.  ಭಾರತ ಮಾತಾ ಕೀ ಜೈ....ವಂದೇ ಮಾತರಂ...ಎನ್ನುವ ಉದ್ಘೋಷ ಮೊಳಗಿದವು. ಹಿರಿಯರು ಯುವಕರು  ಚಿಕ್ಕಮಕ್ಕಳು ಸಹ ಗಣವೇಷ ಧರಿಸಿ ಶಿಸ್ತುಬದ್ಧವಾಗಿ ಪಥಸಂಚಲನೆಯಲ್ಲಿ ಸಾಗಿದರು. ಸುಶ್ರಾವ್ಯವಾದ ಹಿಮ್ಮೇಳನ ಕೊಳಲಿನ ವಾದನ ಸಂಗೀತದ ವೈಭವಯುತ ಹಿಮ್ಮೇಳನದಲ್ಲಿ ಪಥಸಂಚಲನೆ ಸಾಗಿತು. ರಾಷ್ಟ್ರಭಕ್ತರ ವೇಷದಲ್ಲಿ ಚಿಣ್ಣರು ಕಂಗೊಳಿಸಿ ಗಮನ ಸೆಳೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT