<p><strong>ವಿಜಯಪುರ</strong>: ಇಂಡಿ ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿರುವ ಗುರುದೇವ ರಾನಡೆ ಆಶ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ.</p><p>ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೇ ಕೇವಲ ಧ್ಯಾನ, ಭಜನೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ಜೂನ್ ಅಥವಾ ಜುಲೈನಲ್ಲಿ ಅವರು ಇಲ್ಲಿಗೆ ಭೇಟಿ ನೀಡಿ, ಧ್ಯಾನದಲ್ಲಿ ತೊಡಗುತ್ತಾರೆ. ಸಾರ್ವಜನಿಕರು, ಮುಖಂಡರು ಸೇರಿದಂತೆ ಯಾರನ್ನೂ ಈ ಸಂದರ್ಭದಲ್ಲಿ ಅವರು ಭೇಟಿಯಾಗುವುದಿಲ್ಲ. ಜೊತೆಗೆ ಝಡ್ ಫ್ಲಸ್ ಭದ್ರತೆ ಇರುವುದರಿಂದ ಯಾರನ್ನೂ ಆಶ್ರಮಕ್ಕೆ ಬಿಡುತ್ತಿಲ್ಲ.</p><p>ಜೂನ್ 27ರಂದು ಹೊರ್ತಿ ಸಮೀಪದ ಇಂಚಗೇರಿ ಮಠಕ್ಕೆ ಮೋಹನ ಭಾಗವತ್ ಭೇಟಿ ನೀಡಲಿದ್ದಾರೆ. ಶ್ರೀ ಮಠದ ಗುರುಲಿಂಗ ಮಹಾರಾಜರ ಮತ್ತು ಬಾವೂಸಾಹೇಬ ಮಹಾರಾಜರ ದೇಗುಲದಲ್ಲಿ ಭಜನೆ, ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಆ ನಂತರ ದೇವರ ನಿಂಬರಗಿಯ ಶ್ರೀಮಠದ ಗುರುಲಿಂಗ ಮಹಾರಾಜರ ದೇಗುಲ ದರ್ಶನ ಪಡೆದು, ನೆರೆಯ ಮಹಾರಾಷ್ಟ್ರದ ಉಮದಿಯ ಬಾವೂಸಾಹೇಬ ಮಹಾರಾಜರ ದೇಗುಲಕ್ಕೆ ಭೇಟಿ ನೀಡಿ ನಾಗಪುರಕ್ಕೆ ತೆರಳಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಇಂಡಿ ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿರುವ ಗುರುದೇವ ರಾನಡೆ ಆಶ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ.</p><p>ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೇ ಕೇವಲ ಧ್ಯಾನ, ಭಜನೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ಜೂನ್ ಅಥವಾ ಜುಲೈನಲ್ಲಿ ಅವರು ಇಲ್ಲಿಗೆ ಭೇಟಿ ನೀಡಿ, ಧ್ಯಾನದಲ್ಲಿ ತೊಡಗುತ್ತಾರೆ. ಸಾರ್ವಜನಿಕರು, ಮುಖಂಡರು ಸೇರಿದಂತೆ ಯಾರನ್ನೂ ಈ ಸಂದರ್ಭದಲ್ಲಿ ಅವರು ಭೇಟಿಯಾಗುವುದಿಲ್ಲ. ಜೊತೆಗೆ ಝಡ್ ಫ್ಲಸ್ ಭದ್ರತೆ ಇರುವುದರಿಂದ ಯಾರನ್ನೂ ಆಶ್ರಮಕ್ಕೆ ಬಿಡುತ್ತಿಲ್ಲ.</p><p>ಜೂನ್ 27ರಂದು ಹೊರ್ತಿ ಸಮೀಪದ ಇಂಚಗೇರಿ ಮಠಕ್ಕೆ ಮೋಹನ ಭಾಗವತ್ ಭೇಟಿ ನೀಡಲಿದ್ದಾರೆ. ಶ್ರೀ ಮಠದ ಗುರುಲಿಂಗ ಮಹಾರಾಜರ ಮತ್ತು ಬಾವೂಸಾಹೇಬ ಮಹಾರಾಜರ ದೇಗುಲದಲ್ಲಿ ಭಜನೆ, ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಆ ನಂತರ ದೇವರ ನಿಂಬರಗಿಯ ಶ್ರೀಮಠದ ಗುರುಲಿಂಗ ಮಹಾರಾಜರ ದೇಗುಲ ದರ್ಶನ ಪಡೆದು, ನೆರೆಯ ಮಹಾರಾಷ್ಟ್ರದ ಉಮದಿಯ ಬಾವೂಸಾಹೇಬ ಮಹಾರಾಜರ ದೇಗುಲಕ್ಕೆ ಭೇಟಿ ನೀಡಿ ನಾಗಪುರಕ್ಕೆ ತೆರಳಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>