<p><strong>ಆಲಮೇಲ</strong>: ರುಕುಂಪುರ ರಸ್ತೆ ಅತಿಕ್ರಮಣ ತೆರವಿಗಾಗಿ ಪ್ರಗತಿಪರ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಧರಣಿ ಶನಿವಾರ 4ನೇ ದಿನ ಪೂರೈಸಿತು. </p>.<p>ಶನಿವಾರ ಪ್ರತಿಭಟನೆ ನಿರತರು ಅರೆಬೆತ್ತಲೆಯಾಗಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತ ನಡೆದರು. </p>.<p>ಅರೆಬೆತ್ತಲೆ ಮೆರವಣಿಗೆಯಲ್ಲಿ ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಸಂಜೀವಕುಮಾರ ಯಂಟಮಾನ, ಹರೀಶ ಯಂಟಮಾನ, ಶಿವಾನಂದ ಜಗತಿ, ಶ್ರೀಶೈಲ ಭೋವಿ, ಶಿವಾನಂದ ತಳವಾರ, ಸೋಮನಾಥ ಮೇಲಿನಮನಿ, ಬಸವರಾಜ ಹೂಗಾರ, ಅಪ್ಪು ಶೆಟ್ಟಿ, ಚಂದು ಹಳೀಮನಿ, ಶಿವಕುಮಾರ ಮೇಲಿನಮನಿ ಮೊದಲಾದವರು ಭಾಗವಹಿಸಿದ್ದರು.</p>.<p><strong>ಮಾಜಿ ಶಾಸಕ ಭೇಟಿ</strong>: ಸತ್ಯಾಗ್ರಹ ಟೆಂಟ್ಗೆ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ನಿಮ್ಮ ಹೋರಾಟದಲ್ಲಿ ನಾನೂ ಕೈಗೋಡಿಸುತ್ತೇನೆ, ಎಲ್ಲ ರೀತಿಯ ಸಹಕಾರ ನೀಡುವೆ ಎಂದರು.</p>.<p><strong>ಜಿಲ್ಲಾಧಿಕಾರಿಗೆ ಮನವಿ</strong>: ಶುಕ್ರವಾರ ಧರಣಿ ನಿರತ ಮುಖಂಡರ ಒಂದು ತಂಡ ಆಲಮೇಲ ದೇಶಮುಖರಾದ ನಿರಂಜನ ಶಂಕರರಾವ್ ದೇಶಮುಖ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಆನಂದ ಅವರನ್ನು ಭೇಟಿ ಮಾಡಿತು.</p>.<p>ಪೀರಗಾಲೀಬಸಾಬ ಉರುಸ್ ನ ವೈಶಿಷ್ಟ, ದರ್ಗಾರಸ್ತೆ ಅತಿಕ್ರಮಣ ಹಾಗೂ ದಾನರೂಪದಲ್ಲಿ ಜಾಗ ನೀಡಿದ ಎಲ್ಲ ವಿವರಗಳನ್ನು ಜಿಲ್ಲಾಧಿಕಾರಿಗೆ ವಿವರಿಸಿದರು. ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಪ್ರಭು ವಾಲಿಕಾರ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮೇಲ</strong>: ರುಕುಂಪುರ ರಸ್ತೆ ಅತಿಕ್ರಮಣ ತೆರವಿಗಾಗಿ ಪ್ರಗತಿಪರ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಧರಣಿ ಶನಿವಾರ 4ನೇ ದಿನ ಪೂರೈಸಿತು. </p>.<p>ಶನಿವಾರ ಪ್ರತಿಭಟನೆ ನಿರತರು ಅರೆಬೆತ್ತಲೆಯಾಗಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತ ನಡೆದರು. </p>.<p>ಅರೆಬೆತ್ತಲೆ ಮೆರವಣಿಗೆಯಲ್ಲಿ ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಸಂಜೀವಕುಮಾರ ಯಂಟಮಾನ, ಹರೀಶ ಯಂಟಮಾನ, ಶಿವಾನಂದ ಜಗತಿ, ಶ್ರೀಶೈಲ ಭೋವಿ, ಶಿವಾನಂದ ತಳವಾರ, ಸೋಮನಾಥ ಮೇಲಿನಮನಿ, ಬಸವರಾಜ ಹೂಗಾರ, ಅಪ್ಪು ಶೆಟ್ಟಿ, ಚಂದು ಹಳೀಮನಿ, ಶಿವಕುಮಾರ ಮೇಲಿನಮನಿ ಮೊದಲಾದವರು ಭಾಗವಹಿಸಿದ್ದರು.</p>.<p><strong>ಮಾಜಿ ಶಾಸಕ ಭೇಟಿ</strong>: ಸತ್ಯಾಗ್ರಹ ಟೆಂಟ್ಗೆ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ನಿಮ್ಮ ಹೋರಾಟದಲ್ಲಿ ನಾನೂ ಕೈಗೋಡಿಸುತ್ತೇನೆ, ಎಲ್ಲ ರೀತಿಯ ಸಹಕಾರ ನೀಡುವೆ ಎಂದರು.</p>.<p><strong>ಜಿಲ್ಲಾಧಿಕಾರಿಗೆ ಮನವಿ</strong>: ಶುಕ್ರವಾರ ಧರಣಿ ನಿರತ ಮುಖಂಡರ ಒಂದು ತಂಡ ಆಲಮೇಲ ದೇಶಮುಖರಾದ ನಿರಂಜನ ಶಂಕರರಾವ್ ದೇಶಮುಖ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಆನಂದ ಅವರನ್ನು ಭೇಟಿ ಮಾಡಿತು.</p>.<p>ಪೀರಗಾಲೀಬಸಾಬ ಉರುಸ್ ನ ವೈಶಿಷ್ಟ, ದರ್ಗಾರಸ್ತೆ ಅತಿಕ್ರಮಣ ಹಾಗೂ ದಾನರೂಪದಲ್ಲಿ ಜಾಗ ನೀಡಿದ ಎಲ್ಲ ವಿವರಗಳನ್ನು ಜಿಲ್ಲಾಧಿಕಾರಿಗೆ ವಿವರಿಸಿದರು. ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಪ್ರಭು ವಾಲಿಕಾರ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>