<p><strong>ಸೋಲಾಪುರ</strong>: ಹಬ್ಬಗಳಿಂದ ತುಂಬಿರುವ ಪವಿತ್ರ ಮತ್ತು ಧಾರ್ಮಿಕವಾಗಿ ಮಹತ್ವದ ಶ್ರಾವಣ ಮಾಸ ಜುಲೈ 25 ರಿಂದ ಪ್ರಾರಂಭವಾಗುತ್ತಿದೆ. ಪೂಜೆ, ಪಠಣ, ಧ್ಯಾನ, ಶಿವಪುರಾಣ ಕಥೆಗಳು, ಪ್ರವಚನ, ಭಜನೆ, ಸತ್ಸಂಗಗಳು ಮುಖ್ಯವಾಗಿವೆ.</p>.<p>ಕರ್ನಾಟಕ, ತೆಲಂಗಾಣ, ಹೈದರಾಬಾದ್, ಪುಣೆ, ಮುಂಬೈ, ಮರಾಠವಾಡಾ ಹಾಗೂ ಅನೇಕ ಭಾಗಗಳಿಂದ ಸಾವಿರಾರು ಭಕ್ತರು ಗ್ರಾಮ ದೇವತೆ ಶಿವಯೋಗಿ ಸಿದ್ಧೇಶ್ವರ ಮಂದಿರಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಪ್ರತಿ ಸೋಮವಾರ ಲಕ್ಷಾಂತರ ಭಕ್ತರು ದರ್ಶನ ಪಡೆಯಲು ಬರುವ ನಿರೀಕ್ಷೆ ಇದೆ.</p>.<p><strong>ಧಾರ್ಮಿಕ ವಿಧಿ ವಿಧಾನ:</strong> ಬೆಳಿಗ್ಗೆ 5-5:30 ಗಂಟೆಯವರೆಗೆ ಕಾಕಡ ಆರತಿ.7: 30 -9:00 ಗಂಟೆವರೆಗೆ ಹಾಗೂ ರಾತ್ರಿ 8 ಗಂಟೆಯಿಂದ 9:30 ಗಂಟೆಯವರೆಗೆ ಶಿವಯೋಗ ಸಮಾಧಿಗೆ ರುದ್ರಾಭಿಷೇಕ, ರುದ್ರಪಠಣ ,108 ಸಲ ಓಂ ನಮಃ ಶಿವಾಯ ಪಠಣ, ಆರತಿ ಹಾಗೂ ಪ್ರಸಾದ. ಬೆಳಿಗ್ಗೆ 8:30 ಗಂಟೆಯಿಂದ 10:30 ಗಂಟೆಯವರೆಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ರುದ್ರ ಪಠಣ, ಓಂ ನಮಃ ಶಿವಾಯ ಪಠಣ, ಆರತಿ . ರಾತ್ರಿ 9:30 ಗಂಟೆಯಿಂದ 10:30 ಗಂಟೆಯವರೆಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಆರತಿ ಇರಲಿದೆ. ಭಕ್ತರು ದರ್ಶನ ಪಡೆಯಲು ಅನುಕೂಲವಾಗುವಂತೆ ಸಭಾ ಮಂಟಪದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 11 ರವರೆಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ.</p>.<p>ದರ್ಶನಕ್ಕಾಗಿ ಬರುವ ಭಕ್ತರ ವಸತಿಗಾಗಿ ಯಾತ್ರಿ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾತ್ರಿ ನಿವಾಸದಲ್ಲಿ ಒಟ್ಟು 20 ಕೊಠಡಿಗಳಿವೆ. ಸಾಮೂಹಿಕವಾಗಿ ಇರಲು 3 ದೊಡ್ಡ ಕೊಠಡಿಗಳಿವೆ ಹಾಗೂ ಹವಾ ನಿಯಂತ್ರಿತ ಕೊಠಡಿಗಳ ಸೌಲಭ್ಯವಿದೆ. ಹವಾ ನಿಯಂತ್ರಿತ ಕೊಠಡಿಗಳಿಗೆ ಪ್ರತಿದಿನ ₹800 ಶುಲ್ಕ ಪಾವತಿಸಬೇಕು. ಬುಕಿಂಗ್ ಪ್ರಾರಂಭವಾಗಿದೆ.</p>.<p>ಹೋಮ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಸತಿಗಾಗಿ ಯಾತ್ರಿ ನಿವಾಸದಲ್ಲಿ ಸಾಮೂಹಿಕ ಹಾಗೂ ಹವಾ ನಿಯಂತ್ರಿತ ಕೊಠಡಿಗಳು, ಭಕ್ತರ ಸಾಮಾನುಗಳು ಇಡುವ ಸಲುವಾಗಿ ಲಾಕರ್ ರೂಮ್, 4 ಸಾವಿರ ಭಕ್ತರಿಗೆ ಪ್ರತಿದಿನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಸಿದ್ಧೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದ್ದಾರೆ.</p>.<p><strong>ವಿಶೇಷ ದಾಸೋಹ</strong></p><p>ಪ್ರತಿ ಸೋಮವಾರ ದರ್ಶನಕ್ಕೆ ಬರುವ ಭಕ್ತರಿಗೆ ಸಾಬುದಾನಿ ಖಿಚಡಿ ಭಗರ ಸಿಹಿಗೆಣಸು ಆಹಾರ ಪದಾರ್ಥಗಳನ್ನು ಅನ್ನ ಛತ್ರದಲ್ಲಿ ನೀಡಲಾಗುವುದು. ಬೆಳಿಗ್ಗೆ 11 ರಿಂದ 2 ಗಂಟೆವರೆಗೆ ಹಾಗೂ ರಾತ್ರಿ 7.30 ಇಂದ 9:30ವರೆಗೆ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.</p><p>ಬೆಳಿಗ್ಗೆ 9:30 ಗಂಟೆಗೆ ಯೋಗ ಸಮಾಧಿ ಹತ್ತಿರ ಆರತಿಯಾದ ನಂತರ ಶಿರಾ ಬುಂದೆ ಉಂಡಿ ಬರ್ಫಿಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿದಿನ 4ರಿಂದ 5 ಸಾವಿರ ಭಕ್ತರು ಬರುವ ನಿರೀಕ್ಷೆ ಇದೆ ಎಂದು ಸಿದ್ದೇಶ್ವರ ದೇವಸ್ಥಾನ ಸಮಿತಿಯ ಅನ್ನದಾಸೋಹ ವಿಭಾಗದ ಅಧ್ಯಕ್ಷ ವಿಶ್ವನಾಥ ಲಬ್ಬಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಲಾಪುರ</strong>: ಹಬ್ಬಗಳಿಂದ ತುಂಬಿರುವ ಪವಿತ್ರ ಮತ್ತು ಧಾರ್ಮಿಕವಾಗಿ ಮಹತ್ವದ ಶ್ರಾವಣ ಮಾಸ ಜುಲೈ 25 ರಿಂದ ಪ್ರಾರಂಭವಾಗುತ್ತಿದೆ. ಪೂಜೆ, ಪಠಣ, ಧ್ಯಾನ, ಶಿವಪುರಾಣ ಕಥೆಗಳು, ಪ್ರವಚನ, ಭಜನೆ, ಸತ್ಸಂಗಗಳು ಮುಖ್ಯವಾಗಿವೆ.</p>.<p>ಕರ್ನಾಟಕ, ತೆಲಂಗಾಣ, ಹೈದರಾಬಾದ್, ಪುಣೆ, ಮುಂಬೈ, ಮರಾಠವಾಡಾ ಹಾಗೂ ಅನೇಕ ಭಾಗಗಳಿಂದ ಸಾವಿರಾರು ಭಕ್ತರು ಗ್ರಾಮ ದೇವತೆ ಶಿವಯೋಗಿ ಸಿದ್ಧೇಶ್ವರ ಮಂದಿರಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಪ್ರತಿ ಸೋಮವಾರ ಲಕ್ಷಾಂತರ ಭಕ್ತರು ದರ್ಶನ ಪಡೆಯಲು ಬರುವ ನಿರೀಕ್ಷೆ ಇದೆ.</p>.<p><strong>ಧಾರ್ಮಿಕ ವಿಧಿ ವಿಧಾನ:</strong> ಬೆಳಿಗ್ಗೆ 5-5:30 ಗಂಟೆಯವರೆಗೆ ಕಾಕಡ ಆರತಿ.7: 30 -9:00 ಗಂಟೆವರೆಗೆ ಹಾಗೂ ರಾತ್ರಿ 8 ಗಂಟೆಯಿಂದ 9:30 ಗಂಟೆಯವರೆಗೆ ಶಿವಯೋಗ ಸಮಾಧಿಗೆ ರುದ್ರಾಭಿಷೇಕ, ರುದ್ರಪಠಣ ,108 ಸಲ ಓಂ ನಮಃ ಶಿವಾಯ ಪಠಣ, ಆರತಿ ಹಾಗೂ ಪ್ರಸಾದ. ಬೆಳಿಗ್ಗೆ 8:30 ಗಂಟೆಯಿಂದ 10:30 ಗಂಟೆಯವರೆಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ರುದ್ರ ಪಠಣ, ಓಂ ನಮಃ ಶಿವಾಯ ಪಠಣ, ಆರತಿ . ರಾತ್ರಿ 9:30 ಗಂಟೆಯಿಂದ 10:30 ಗಂಟೆಯವರೆಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಆರತಿ ಇರಲಿದೆ. ಭಕ್ತರು ದರ್ಶನ ಪಡೆಯಲು ಅನುಕೂಲವಾಗುವಂತೆ ಸಭಾ ಮಂಟಪದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 11 ರವರೆಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ.</p>.<p>ದರ್ಶನಕ್ಕಾಗಿ ಬರುವ ಭಕ್ತರ ವಸತಿಗಾಗಿ ಯಾತ್ರಿ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾತ್ರಿ ನಿವಾಸದಲ್ಲಿ ಒಟ್ಟು 20 ಕೊಠಡಿಗಳಿವೆ. ಸಾಮೂಹಿಕವಾಗಿ ಇರಲು 3 ದೊಡ್ಡ ಕೊಠಡಿಗಳಿವೆ ಹಾಗೂ ಹವಾ ನಿಯಂತ್ರಿತ ಕೊಠಡಿಗಳ ಸೌಲಭ್ಯವಿದೆ. ಹವಾ ನಿಯಂತ್ರಿತ ಕೊಠಡಿಗಳಿಗೆ ಪ್ರತಿದಿನ ₹800 ಶುಲ್ಕ ಪಾವತಿಸಬೇಕು. ಬುಕಿಂಗ್ ಪ್ರಾರಂಭವಾಗಿದೆ.</p>.<p>ಹೋಮ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಸತಿಗಾಗಿ ಯಾತ್ರಿ ನಿವಾಸದಲ್ಲಿ ಸಾಮೂಹಿಕ ಹಾಗೂ ಹವಾ ನಿಯಂತ್ರಿತ ಕೊಠಡಿಗಳು, ಭಕ್ತರ ಸಾಮಾನುಗಳು ಇಡುವ ಸಲುವಾಗಿ ಲಾಕರ್ ರೂಮ್, 4 ಸಾವಿರ ಭಕ್ತರಿಗೆ ಪ್ರತಿದಿನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಸಿದ್ಧೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದ್ದಾರೆ.</p>.<p><strong>ವಿಶೇಷ ದಾಸೋಹ</strong></p><p>ಪ್ರತಿ ಸೋಮವಾರ ದರ್ಶನಕ್ಕೆ ಬರುವ ಭಕ್ತರಿಗೆ ಸಾಬುದಾನಿ ಖಿಚಡಿ ಭಗರ ಸಿಹಿಗೆಣಸು ಆಹಾರ ಪದಾರ್ಥಗಳನ್ನು ಅನ್ನ ಛತ್ರದಲ್ಲಿ ನೀಡಲಾಗುವುದು. ಬೆಳಿಗ್ಗೆ 11 ರಿಂದ 2 ಗಂಟೆವರೆಗೆ ಹಾಗೂ ರಾತ್ರಿ 7.30 ಇಂದ 9:30ವರೆಗೆ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.</p><p>ಬೆಳಿಗ್ಗೆ 9:30 ಗಂಟೆಗೆ ಯೋಗ ಸಮಾಧಿ ಹತ್ತಿರ ಆರತಿಯಾದ ನಂತರ ಶಿರಾ ಬುಂದೆ ಉಂಡಿ ಬರ್ಫಿಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿದಿನ 4ರಿಂದ 5 ಸಾವಿರ ಭಕ್ತರು ಬರುವ ನಿರೀಕ್ಷೆ ಇದೆ ಎಂದು ಸಿದ್ದೇಶ್ವರ ದೇವಸ್ಥಾನ ಸಮಿತಿಯ ಅನ್ನದಾಸೋಹ ವಿಭಾಗದ ಅಧ್ಯಕ್ಷ ವಿಶ್ವನಾಥ ಲಬ್ಬಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>