<p><strong>ಸಿಂದಗಿ:</strong> ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಹೊರ ಆವರಣದಲ್ಲಿ ಬುಧವಾರ ರಾತ್ರಿ ಮಹಿಳೆಯರು ಅತ್ಯುತ್ಸಾಹದಿಂದ ಗಡಿಗೆ ಒಡೆಯುವ ಸ್ಪರ್ಧೆ, ಮ್ಯೂಜಿಕ್ ಚೇರ್, ಹಗ್ಗ-ಜಗ್ಗಾಟ, ಲೆಮನ್ ಸ್ಪೂನ್, ಬೆಂಕಿ ಇಲ್ಲದೆ ಸಿದ್ಧಪಡಿಸುವ ಆಹಾರ ಸಿದ್ಧತೆ, ರಂಗೋಲಿ ಸ್ಪರ್ಧೆಯಂತಹ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ 134ನೆಯ ಜಯಂತ್ಯುತ್ಸವ ಆಚರಣೆಯ ಅಂಗವಾಗಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಮಹಿಳಾ ಹಬ್ಬ ಆಯೋಜನೆ ಮಾಡಲಾಗಿತ್ತು.</p>.<p>ವಿಜಯಪುರ ನಗರದ ಲಕ್ಷ್ಮೀ ತೇರದಾಳಮಠ ಭರತನಾಟ್ಯ ಕಲಾ ತಂಡದವರಿಂದ ಸಾಮೂಹಿಕ ನೃತ್ಯಗಳು ಪ್ರದರ್ಶನಗೊಂಡು ಸಭಿಕರ ಮೆಚ್ಚುಗೆ ಪಡೆದುಕೊಂಡವು.</p>.<p>ಮಹಿಳಾ ಹಬ್ಬದ ಉದ್ಘಾಟನೆ: ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ(ಗ್ರೇಡ್-1) ಭವಾನಿ ಪಾಟೀಲ ಅವರು ಬುದ್ಧ, ಡಾ.ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಳಾ ಹಬ್ಬವನ್ನು ಉದ್ಘಾಟಿಸಿದರು.</p>.<p>ತಹಶೀಲ್ದಾರ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಅಧ್ಯಕ್ಷತೆ ವಹಿಸಿದ್ದರು.<br /> ನಿವೇದಿತಾ ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ಸ್ಥಾವರಮಠ ‘ಮಹಿಳೆ ಇಂದು ಯಾವುದರಲ್ಲೂ ಹಿಂದಿಲ್ಲ. ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆದಿದ್ದಾಳೆ’ ಎಂದು ಮಾತನಾಡಿದರು. </p>.<p>ಅಂಬಿಕಾ ಪಾಟೀಲ, ಸುವರ್ಣಾ ಮಾಣಸುಣಗಿ ಕಾರ್ಯಕ್ರಮ ನಿರೂಪಿಸಿದರು.<br /> ಶರಣಮ್ಮ ನಾಯಕ, ನೀಲಮ್ಮ ಯಡ್ರಾಮಿ, ಶಾರದಾ ಬೆಟಗೇರಿ, ಅಶ್ವಿನಿ ನಾಯಕ ವೇದಿಕೆಯಲ್ಲಿ ಇದ್ದರು.</p>.<p>ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ಪರುಶರಾಮ ಕಾಂಬಳೆ, ಮಲ್ಲೂ ಕೂಚಬಾಳ, ರವಿ ಹೋಳಿ, ದತ್ತು ನಾಲ್ಕಮಾನ, ಸಂತೋಷ ಜಾಧವ, ನಿಂಗರಾಜ ಗುಡಿಮನಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಹೊರ ಆವರಣದಲ್ಲಿ ಬುಧವಾರ ರಾತ್ರಿ ಮಹಿಳೆಯರು ಅತ್ಯುತ್ಸಾಹದಿಂದ ಗಡಿಗೆ ಒಡೆಯುವ ಸ್ಪರ್ಧೆ, ಮ್ಯೂಜಿಕ್ ಚೇರ್, ಹಗ್ಗ-ಜಗ್ಗಾಟ, ಲೆಮನ್ ಸ್ಪೂನ್, ಬೆಂಕಿ ಇಲ್ಲದೆ ಸಿದ್ಧಪಡಿಸುವ ಆಹಾರ ಸಿದ್ಧತೆ, ರಂಗೋಲಿ ಸ್ಪರ್ಧೆಯಂತಹ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ 134ನೆಯ ಜಯಂತ್ಯುತ್ಸವ ಆಚರಣೆಯ ಅಂಗವಾಗಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಮಹಿಳಾ ಹಬ್ಬ ಆಯೋಜನೆ ಮಾಡಲಾಗಿತ್ತು.</p>.<p>ವಿಜಯಪುರ ನಗರದ ಲಕ್ಷ್ಮೀ ತೇರದಾಳಮಠ ಭರತನಾಟ್ಯ ಕಲಾ ತಂಡದವರಿಂದ ಸಾಮೂಹಿಕ ನೃತ್ಯಗಳು ಪ್ರದರ್ಶನಗೊಂಡು ಸಭಿಕರ ಮೆಚ್ಚುಗೆ ಪಡೆದುಕೊಂಡವು.</p>.<p>ಮಹಿಳಾ ಹಬ್ಬದ ಉದ್ಘಾಟನೆ: ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ(ಗ್ರೇಡ್-1) ಭವಾನಿ ಪಾಟೀಲ ಅವರು ಬುದ್ಧ, ಡಾ.ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಳಾ ಹಬ್ಬವನ್ನು ಉದ್ಘಾಟಿಸಿದರು.</p>.<p>ತಹಶೀಲ್ದಾರ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಅಧ್ಯಕ್ಷತೆ ವಹಿಸಿದ್ದರು.<br /> ನಿವೇದಿತಾ ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ಸ್ಥಾವರಮಠ ‘ಮಹಿಳೆ ಇಂದು ಯಾವುದರಲ್ಲೂ ಹಿಂದಿಲ್ಲ. ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆದಿದ್ದಾಳೆ’ ಎಂದು ಮಾತನಾಡಿದರು. </p>.<p>ಅಂಬಿಕಾ ಪಾಟೀಲ, ಸುವರ್ಣಾ ಮಾಣಸುಣಗಿ ಕಾರ್ಯಕ್ರಮ ನಿರೂಪಿಸಿದರು.<br /> ಶರಣಮ್ಮ ನಾಯಕ, ನೀಲಮ್ಮ ಯಡ್ರಾಮಿ, ಶಾರದಾ ಬೆಟಗೇರಿ, ಅಶ್ವಿನಿ ನಾಯಕ ವೇದಿಕೆಯಲ್ಲಿ ಇದ್ದರು.</p>.<p>ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ಪರುಶರಾಮ ಕಾಂಬಳೆ, ಮಲ್ಲೂ ಕೂಚಬಾಳ, ರವಿ ಹೋಳಿ, ದತ್ತು ನಾಲ್ಕಮಾನ, ಸಂತೋಷ ಜಾಧವ, ನಿಂಗರಾಜ ಗುಡಿಮನಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>