<p><strong>ಸಿಂದಗಿ:</strong> ಪ್ರತಿ ಟನ್ ಕಬ್ಬಿಗೆ ₹3,160 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರು ತಾಲ್ಲೂಕಿನ ಯರಗಲ್ ಕೆ.ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬಂದ್ ಮಾಡಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮುಂದುವರೆದಿತ್ತು.</p>.<p>ಮನ್ನಾಪುರ, ಬಂಕಲಗಿ, ನಾಗಾವಿ ಬಿ.ಕೆ. ಗೊರವಗುಂಡಗಿ, ಗಬಸಾವಳಗಿ, ಬಂಟನೂರ, ಆಹೇರಿ ಮುಂತಾದ ಗ್ರಾಮಗಳ ಕಬ್ಬು ಬೆಳೆಗಾರರು ಹೆದ್ದಾರಿಯಲ್ಲಿ ಕುಳಿತು ಕೈಯಲ್ಲಿ ಹಸಿರು ಶಲ್ಲೆ ತಿರುಗಿಸುತ್ತ ಘೋಷಣೆ ಕೂಗುತ್ತಿದ್ದರು.</p>.<p>ರೈತ ಮುಖಂಡ ಚುನ್ನಪ್ಪ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪಕ್ಷವಿದೆ. ಇದು ರಾಜಕೀಯವಾಗಿ ಪಕ್ಷಾತೀತವಾದುದು. ಅಂತೆಯೇ ಸರ್ಕಾರ ಹೋರಾಟಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ ₹3,300 ರೂಪಾಯಿ ಘೋಷಣೆ ಮಾಡಿತು ಎಂದರು.</p>.<p>ಹೋರಾಟಗಾರ ಶಿವಾಜಿ ಮೆಟಗಾರ ಅನ್ನದಾತ ರೈತ ಬೆಳೆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ಆ ಜೀವಕ್ಕೆ ಕಟ್ಟುವ ಬೆಲೆ ₹5 ಲಕ್ಷ ಎಂದು ವಿಷಾದ ವ್ಯಕ್ತಪಡಿಸಿ, ಕಬ್ಬು ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಲು ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಆ ಪಾರ್ಟಿ ಈ ಪಾರ್ಟಿ ಎಲ್ಲಾ ದೂರಿಟ್ಟು ರೈತರೆಲ್ಲ ಒಂದಾದರೆ ಸರ್ಕಾರ ಬಗ್ಗುತ್ತದೆ ಎಂದರು.</p>.<p>ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ, ಸಂತೋಷ ಪಾಟೀಲ ಡಂಬಳ, ರೈತ ಸಂಘ ಜಿಲ್ಲಾ ಪ್ರಮುಖ ಶಂಕರಗೌಡ ಹಿರೇಗೌಡರ ಮಾತನಾಡಿದರು. ರೈತ ಮುಖಂಡ ಪೀರೂ ಕೆರೂರ, ಭಾಗಪ್ಪಗೌಡ ಪಾಟೀಲ ಆಹೇರಿ, ಗಂಗಾಧರ ಚಿಂಚೊಳ್ಳಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಇದ್ದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಇಂಡಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ತಹಶೀಲ್ದಾರ ಕರೆಪ್ಪ ಬೆಳ್ಳಿ ಹಾಗೂ ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದರು.</p>.<p>ವಿಜಯಪುರ- ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಾರ ಸಂಖ್ಯೆಯಲ್ಲಿ ವಾಹನಗಳ ಸಂಚಾರ ಇರುವುದರಿಂದ ಮೋರಟಗಿ ಮತ್ತು ಸಿಂದಗಿಯಿಂದ ಮಾರ್ಗ ಬದಲಾವಣೆ ಮಾಡಿರುವುದರಿಂದ ಸಂಚಾರ ತೊಂದರೆ ಕಂಡು ಬರಲಿಲ್ಲ.</p>.<div><blockquote>ರಾಜ್ಯದಲ್ಲಿ ಶುಗರ್ ಲಾಬಿ ಸರ್ಕಾರದ ಬುಡಕ್ಕೆ ಕೈ ಹಾಕುವಷ್ಟು ತಾಕತ್ತು ಹೊಂದಿದೆ. ಸಕ್ಕರೆ ಕಾರ್ಕಾನೆಗಳ ಮಾಲಿಕರು ಸರ್ಕಾರವನ್ನೇ ನಡುಗಿಸುತ್ತಾರೆ. </blockquote><span class="attribution">ಚುನ್ನಪ್ಪ ಪೂಜಾರಿ ಬೆಳಗಾವಿ ಜಿಲ್ಲಾ ರೈತ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ಪ್ರತಿ ಟನ್ ಕಬ್ಬಿಗೆ ₹3,160 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರು ತಾಲ್ಲೂಕಿನ ಯರಗಲ್ ಕೆ.ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬಂದ್ ಮಾಡಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮುಂದುವರೆದಿತ್ತು.</p>.<p>ಮನ್ನಾಪುರ, ಬಂಕಲಗಿ, ನಾಗಾವಿ ಬಿ.ಕೆ. ಗೊರವಗುಂಡಗಿ, ಗಬಸಾವಳಗಿ, ಬಂಟನೂರ, ಆಹೇರಿ ಮುಂತಾದ ಗ್ರಾಮಗಳ ಕಬ್ಬು ಬೆಳೆಗಾರರು ಹೆದ್ದಾರಿಯಲ್ಲಿ ಕುಳಿತು ಕೈಯಲ್ಲಿ ಹಸಿರು ಶಲ್ಲೆ ತಿರುಗಿಸುತ್ತ ಘೋಷಣೆ ಕೂಗುತ್ತಿದ್ದರು.</p>.<p>ರೈತ ಮುಖಂಡ ಚುನ್ನಪ್ಪ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪಕ್ಷವಿದೆ. ಇದು ರಾಜಕೀಯವಾಗಿ ಪಕ್ಷಾತೀತವಾದುದು. ಅಂತೆಯೇ ಸರ್ಕಾರ ಹೋರಾಟಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ ₹3,300 ರೂಪಾಯಿ ಘೋಷಣೆ ಮಾಡಿತು ಎಂದರು.</p>.<p>ಹೋರಾಟಗಾರ ಶಿವಾಜಿ ಮೆಟಗಾರ ಅನ್ನದಾತ ರೈತ ಬೆಳೆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ಆ ಜೀವಕ್ಕೆ ಕಟ್ಟುವ ಬೆಲೆ ₹5 ಲಕ್ಷ ಎಂದು ವಿಷಾದ ವ್ಯಕ್ತಪಡಿಸಿ, ಕಬ್ಬು ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಲು ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಆ ಪಾರ್ಟಿ ಈ ಪಾರ್ಟಿ ಎಲ್ಲಾ ದೂರಿಟ್ಟು ರೈತರೆಲ್ಲ ಒಂದಾದರೆ ಸರ್ಕಾರ ಬಗ್ಗುತ್ತದೆ ಎಂದರು.</p>.<p>ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ, ಸಂತೋಷ ಪಾಟೀಲ ಡಂಬಳ, ರೈತ ಸಂಘ ಜಿಲ್ಲಾ ಪ್ರಮುಖ ಶಂಕರಗೌಡ ಹಿರೇಗೌಡರ ಮಾತನಾಡಿದರು. ರೈತ ಮುಖಂಡ ಪೀರೂ ಕೆರೂರ, ಭಾಗಪ್ಪಗೌಡ ಪಾಟೀಲ ಆಹೇರಿ, ಗಂಗಾಧರ ಚಿಂಚೊಳ್ಳಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಇದ್ದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಇಂಡಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ತಹಶೀಲ್ದಾರ ಕರೆಪ್ಪ ಬೆಳ್ಳಿ ಹಾಗೂ ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದರು.</p>.<p>ವಿಜಯಪುರ- ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಾರ ಸಂಖ್ಯೆಯಲ್ಲಿ ವಾಹನಗಳ ಸಂಚಾರ ಇರುವುದರಿಂದ ಮೋರಟಗಿ ಮತ್ತು ಸಿಂದಗಿಯಿಂದ ಮಾರ್ಗ ಬದಲಾವಣೆ ಮಾಡಿರುವುದರಿಂದ ಸಂಚಾರ ತೊಂದರೆ ಕಂಡು ಬರಲಿಲ್ಲ.</p>.<div><blockquote>ರಾಜ್ಯದಲ್ಲಿ ಶುಗರ್ ಲಾಬಿ ಸರ್ಕಾರದ ಬುಡಕ್ಕೆ ಕೈ ಹಾಕುವಷ್ಟು ತಾಕತ್ತು ಹೊಂದಿದೆ. ಸಕ್ಕರೆ ಕಾರ್ಕಾನೆಗಳ ಮಾಲಿಕರು ಸರ್ಕಾರವನ್ನೇ ನಡುಗಿಸುತ್ತಾರೆ. </blockquote><span class="attribution">ಚುನ್ನಪ್ಪ ಪೂಜಾರಿ ಬೆಳಗಾವಿ ಜಿಲ್ಲಾ ರೈತ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>