<p><strong>ವಿಜಯಪುರ: </strong>ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ದಟ್ಟ ಮಂಜು ಆವರಿಸಿದೆ. ಜೊತೆಗೆ ಶೀತಗಾಳಿ ಬೀಸುತ್ತಿದೆ.</p>.<p>ಬೆಳಿಗ್ಗೆ 10 ಗಂಟೆಯಾದರೂ ಸೂರ್ಯನ ದರ್ಶನವಿಲ್ಲ. ಶೀತ ಗಾಳಿ, ಮೈ ಕೊರೆಯುವ ಚಳಿಯ ಕಾರಣಕ್ಕೆ ಜನ ಮನೆಯಿಂದ ಹೊರಬರಲು ಅಂಜುವಂತಾಗಿದೆ.</p>.<p>ತಾಪಮಾನ 8 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾಗಿದ್ದು, ಚಳಿಯಿಂದ ಪಾರಾಗಲು ಜನ ಹೆಚ್ಚೆಚ್ಚು<br />ಟೀ, ಕಾಫಿ ಹೀರುತ್ತಿದ್ದಾರೆ. ಬಹುತೇಕರು ಶ್ವೆಟರ್, ಟೊಪ್ಪಿ ಮೊರೆ ಹೋಗಿದ್ದಾರೆ.</p>.<p>ಬೆಳ್ಳಂಬೆಳಿಗ್ಗೆ ಹಾಲು, ದಿನಪತ್ರಿಕೆ ವಿತರಕರು ಚಳಿಯಿಂದ ತೊಂದರೆಗೆ ಒಳಗಾಗಿದ್ದಾರೆ. ನಿಗದಿತ ಸಮಯಕ್ಕಿಂತ ವಿಳಂಬವಾಗಿ ಹಾಲು, ಪತ್ರಿಕೆಗಳನ್ನು ವಿತರಿಸುತ್ತಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ದಟ್ಟ ಮಂಜು ಆವರಿಸಿದೆ. ಜೊತೆಗೆ ಶೀತಗಾಳಿ ಬೀಸುತ್ತಿದೆ.</p>.<p>ಬೆಳಿಗ್ಗೆ 10 ಗಂಟೆಯಾದರೂ ಸೂರ್ಯನ ದರ್ಶನವಿಲ್ಲ. ಶೀತ ಗಾಳಿ, ಮೈ ಕೊರೆಯುವ ಚಳಿಯ ಕಾರಣಕ್ಕೆ ಜನ ಮನೆಯಿಂದ ಹೊರಬರಲು ಅಂಜುವಂತಾಗಿದೆ.</p>.<p>ತಾಪಮಾನ 8 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾಗಿದ್ದು, ಚಳಿಯಿಂದ ಪಾರಾಗಲು ಜನ ಹೆಚ್ಚೆಚ್ಚು<br />ಟೀ, ಕಾಫಿ ಹೀರುತ್ತಿದ್ದಾರೆ. ಬಹುತೇಕರು ಶ್ವೆಟರ್, ಟೊಪ್ಪಿ ಮೊರೆ ಹೋಗಿದ್ದಾರೆ.</p>.<p>ಬೆಳ್ಳಂಬೆಳಿಗ್ಗೆ ಹಾಲು, ದಿನಪತ್ರಿಕೆ ವಿತರಕರು ಚಳಿಯಿಂದ ತೊಂದರೆಗೆ ಒಳಗಾಗಿದ್ದಾರೆ. ನಿಗದಿತ ಸಮಯಕ್ಕಿಂತ ವಿಳಂಬವಾಗಿ ಹಾಲು, ಪತ್ರಿಕೆಗಳನ್ನು ವಿತರಿಸುತ್ತಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>