ವಿಜಯಪುರ: ‘ನಿಸರ್ಗ’ ಚಂಡಮಾರುತದ ಪರಿಣಾಮ ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಬಿರುಗಾಳಿಯ ಅಬ್ಬರ ಜೋರಾಗಿತ್ತು.
ಬೆಳಿಗ್ಗೆಯಿಂದ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಚದುರಿದಂತೆ ಜಿಟಿಜಿಟಿ ಮಳೆಯಾಯಿತು.
ವಿಜಯಪುರ ನಗರದ ಬಸ್ ನಿಲ್ದಾಣದ ಎದುರಿನ ವೃತ್ತದಲ್ಲಿ ಬೇಸಿಗೆ ಬಿಸಿಲಿನಿಂದ ರಕ್ಷಣೆಗಾಗಿ ಮಹಾನಗರ ಪಾಲಿಕೆ ಅಳವಡಿಸಿದ್ದ ಹಸಿರು ಪರದೆ ಹರಿದುಹೋಯಿತು. ಉಳಿದಂತೆ ಗಾಳಿಯ ಅಬ್ಬರಕ್ಕೆ ರಸ್ತೆಯಲ್ಲಿ ದೂಳು ಮುಖಕ್ಕೆ ರಾಚುತ್ತಿತ್ತು. ದಿನಪೂರ್ತಿ ಶೀತಮಯ ವಾತಾವರಣ ಇತ್ತು.
ತಾಳಿಕೋಟೆಯಲ್ಲಿ ಮಧ್ಯಾಹ್ನ 15 ನಿಮಿಷಗಳ ಕಾಲ ಸಾಧಾರಣ ಮಳೆ ಸುರಿಯಿತು.