ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಗಿಗೆ ಸತ್ಮಾತ್ಮತೀರ್ಥರ ಭೇಟಿ

Last Updated 5 ಮೇ 2019, 16:06 IST
ಅಕ್ಷರ ಗಾತ್ರ

ಬಸವನಬಾಗೇವಾಡಿ:ತಾಲ್ಲೂಕಿನ ಮುತ್ತಗಿಯ ಲಕ್ಷ್ಮೀನೃಸಿಂಹ ದೇವರ ಸನ್ನಿಧಾನಕ್ಕೆ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಭೇಟಿ ನೀಡಲಿದ್ದಾರೆ ಎಂದು ದೇಗುಲದ ಅರ್ಚಕ ಶ್ರೀನಿವಾಸಾಚಾರ್ಯ ಜೋಶಿ ತಿಳಿಸಿದ್ದಾರೆ.

ಸತ್ಯಾತ್ಮತೀರ್ಥ ಶ್ರೀಗಳು ಛಾಯಾ ಭಗವತಿಯಿಂದ ಮೇ 7ರ ಮಂಗಳವಾರ ರಾತ್ರಿಯೇ ಮುತ್ತಗಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ರಾತ್ರಿಯೇ ತೊಟ್ಟಿಲು ಪೂಜಾ ಕಾರ್ಯಕ್ರಮ ನಡೆಯಲಿದೆ.

ಮೇ 8ರ ಬುಧವಾರ ಬೆಳಿಗ್ಗೆ 7ರಿಂದ ಮುದ್ರಾಧಾರಣ, ಪಾದಪೂಜೆ, 8.-30ಕ್ಕೆ ಶ್ರೀ ಲಕ್ಷ್ಮೀ ನೃಸಿಂಹ ದೇವರಿಗೆ ಕ್ಷೀರಾಭೀಷೇಕ, 9-.30ಕ್ಕೆ ಸಭಾ ಕಾರ್ಯಕ್ರಮ, ಸತ್ಯಾತ್ಮತೀರ್ಥರ ಅನುಗ್ರಹ ಸಂದೇಶ, 11ಕ್ಕೆ ಸಂಸ್ಥಾನ ಪೂಜೆ, ನಂತರ ತೀರ್ಥ ಪ್ರಸಾದ ಜರುಗಲಿವೆ ಎಂದು ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT