ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಜಿಲ್ಲೆಯಾದ್ಯಂತ ಮುಂಗಾರು ಸಿಂಚನ

ತಾಳಿಕೋಟಿ 35.2 ಮಿ.ಮೀ.ಗರಿಷ್ಠ ಮಳೆ
Last Updated 1 ಜೂನ್ 2020, 16:29 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಗೆ ಮುಂಗಾರು ಮಳೆ ಅಡಿ ಇಟ್ಟಿದೆ. ಬಹುತೇಕ ಕಡೆ ಮಳೆಯ ಸಿಂಚನವಾಗಿದೆ.

ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಮತ್ತು ರಭಸದ ಗಾಳಿಯೊಂದಿಗೆ ಮುಂಗಾರು ಮಳೆ ಸುರಿಯತೊಡಗಿರುವುದರಿಂದ ಬಿಸಿಲಿನ ಝಳ ತಗ್ಗಿ, ವಾತಾವರಣ ತಂಪಾಗಿದೆ.

ಭಾನುವಾರ ರಾತ್ರಿಯಿಂದ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ರೈತರ ಮೊಗದಲ್ಲಿ ಖುಷಿ ಮೂಡಿದೆ.

ತಾಳಿಕೋಟಿಯಲ್ಲಿ ಗರಿಷ್ಠ ಅಂದರೆ, 35.2 ಮಿ.ಮೀ. ಮಳೆಯಾಗಿದೆ. ಉಳಿದಂತೆ ಬಸವನ ಬಾಗೇವಾಡಿಯಲ್ಲಿ 11.7, ಮನಗೂಳಿ 34, ಆಲಮಟ್ಟಿ 1, ಹೂವಿನ ಹಿಪ್ಪರಗಿ 5.2, ವಿಜಯಪುರ 4.2, ನಾಗಠಾಣ 1, ಭೂತನಾಳ 5.2, ಹಿಟ್ನಳ್ಳಿ 12, ತಿಕೋಟಾ 27.4, ಮಮದಾಪೂರ 18.8, ಕುಮಟಗಿ 3.2, ಬಬಲೇಶ್ವರ 24.6, ಇಂಡಿ 9, ನಾದ ಬಿ.ಕೆ 4.2, ಅಗರಖೇಡ 6.4, ಹೊರ್ತಿ 1.8, ಚಡಚಣ 1.6, ಝಳಕಿ 0.7, ಮುದ್ದೇಬಿಹಾಳ 0.5, ನಾಲತವಾಡ 3.2, ಢವಳಗಿ 7, ಸಿಂದಗಿ 8, ಆಲಮೇಲ 6.7, ಸಾಸಾಬಾಳ 6, ರಾಮನಹಳ್ಳಿ 4.2, ಕಡ್ಲೇವಾಡ 6.1, ದೇವರ ಹಿಪ್ಪರಗಿ 28.6, ಕೊಂಡಗೂಳಿ 28.4 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT