<p><strong>ದೇವರಹಿಪ್ಪರಗಿ</strong>: ತಾಲ್ಲೂಕಿನ ಬಮ್ಮನಜೋಗಿ ಗ್ರಾಮದಿಂದ ಕೊಕಟನೂರ, ಬಮ್ಮನಜೋಗಿ ತಾಂಡಾ, ಇಬ್ರಾಹಿಂಪೂರ ಹಾಗೂ ತಾಂಡಾ, ಜಾಲವಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಹಳ್ಳದ ಸೇತುವೆ ಎತ್ತರಿಸುವಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<p>ತಾಲ್ಲೂಕಿನ ಬಮ್ಮನಜೋಗಿ ಹತ್ತಿರದ ಹಳ್ಳ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತುಂಬಿ ಹರಿಯುತ್ತಿದೆ. ಈ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಪ್ರವಾಹದ ನೀರಿನಲ್ಲಿ ಈಗಾಗಲೇ ಬಹುತೇಕ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.</p>.<p>ಆದರೆ ಬಮ್ಮನಜೋಗಿ ಗ್ರಾಮದಿಂದ ತಾಂಡಾ ಹಾಗೂ ಜಾಲವಾದ, ಇಬ್ರಾಹಿಂಪೂರಗಳಿಗೆ ಬೈಕ್ ಅಥವಾ ಇತರೆ ವಾಹನಗಳ ಮೂಲಕ ತೆರಳುವ ಸಾರ್ವಜನಿಕರು ಅನಿವಾರ್ಯವಾಗಿ ನೀರಿನಮಟ್ಟವನ್ನು ಪರಿಗಣಿಸದೇ ತುಂಬಿ ಹರಿಯುತ್ತಿರುವ ನೀರಿನಲ್ಲಿಯೇ ದಾಟುವ ಹರಸಾಹಸ ಮಾಡಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇದು ಪ್ರತಿವರ್ಷದ ಮಳೆಗಾಲದಲ್ಲಿ ಈ ಭಾಗದ ಜನರಿಗೆ ಅನಿವಾರ್ಯ ಹಾಗೂ ಅಭ್ಯಾಸವಾಗಿದ್ದು ಇವರೆಗೆ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.</p>.<p>ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಮುನ್ನವೇ ಈ ಹಳ್ಳದ ಸೇತುವೆಯನ್ನು ಎತ್ತರಿಸುವ ಕಾರ್ಯ ಆಗಬೇಕಾಗಿದೆ. ಆದ್ದರಿಂದ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರು ಕೂಡಲೇ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಬಮ್ಮನಜೋಗಿ ಗ್ರಾಮದ ವಿಠ್ಠಲ ಯಂಕಂಚಿ, ಶಿವಶಂಕರ ಕೋಣಶಿರಸಗಿ, ಚಂದ್ರಾಮ ನಂದಗೇರಿ, ಬಸವರಾಜ ಹೊಸಮನಿ, ಶಶಿಕಾಂತ ಸುಂಗಠಾಣ, ತಾಂಡಾದ ಬಾಬು ರಾಠೋಡ, ಹರೀಶ ಚವ್ಹಾಣ, ಆನಂದ ರಾಠೋಡ, ಇಬ್ರಾಹಿಂಪೂರ ಗ್ರಾಮದ ವೀರೇಶ ಹುಣಸಗಿ, ನಾಗು ಕಮತಗಿ ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವರಹಿಪ್ಪರಗಿ</strong>: ತಾಲ್ಲೂಕಿನ ಬಮ್ಮನಜೋಗಿ ಗ್ರಾಮದಿಂದ ಕೊಕಟನೂರ, ಬಮ್ಮನಜೋಗಿ ತಾಂಡಾ, ಇಬ್ರಾಹಿಂಪೂರ ಹಾಗೂ ತಾಂಡಾ, ಜಾಲವಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಹಳ್ಳದ ಸೇತುವೆ ಎತ್ತರಿಸುವಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<p>ತಾಲ್ಲೂಕಿನ ಬಮ್ಮನಜೋಗಿ ಹತ್ತಿರದ ಹಳ್ಳ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತುಂಬಿ ಹರಿಯುತ್ತಿದೆ. ಈ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಪ್ರವಾಹದ ನೀರಿನಲ್ಲಿ ಈಗಾಗಲೇ ಬಹುತೇಕ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.</p>.<p>ಆದರೆ ಬಮ್ಮನಜೋಗಿ ಗ್ರಾಮದಿಂದ ತಾಂಡಾ ಹಾಗೂ ಜಾಲವಾದ, ಇಬ್ರಾಹಿಂಪೂರಗಳಿಗೆ ಬೈಕ್ ಅಥವಾ ಇತರೆ ವಾಹನಗಳ ಮೂಲಕ ತೆರಳುವ ಸಾರ್ವಜನಿಕರು ಅನಿವಾರ್ಯವಾಗಿ ನೀರಿನಮಟ್ಟವನ್ನು ಪರಿಗಣಿಸದೇ ತುಂಬಿ ಹರಿಯುತ್ತಿರುವ ನೀರಿನಲ್ಲಿಯೇ ದಾಟುವ ಹರಸಾಹಸ ಮಾಡಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇದು ಪ್ರತಿವರ್ಷದ ಮಳೆಗಾಲದಲ್ಲಿ ಈ ಭಾಗದ ಜನರಿಗೆ ಅನಿವಾರ್ಯ ಹಾಗೂ ಅಭ್ಯಾಸವಾಗಿದ್ದು ಇವರೆಗೆ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.</p>.<p>ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಮುನ್ನವೇ ಈ ಹಳ್ಳದ ಸೇತುವೆಯನ್ನು ಎತ್ತರಿಸುವ ಕಾರ್ಯ ಆಗಬೇಕಾಗಿದೆ. ಆದ್ದರಿಂದ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರು ಕೂಡಲೇ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಬಮ್ಮನಜೋಗಿ ಗ್ರಾಮದ ವಿಠ್ಠಲ ಯಂಕಂಚಿ, ಶಿವಶಂಕರ ಕೋಣಶಿರಸಗಿ, ಚಂದ್ರಾಮ ನಂದಗೇರಿ, ಬಸವರಾಜ ಹೊಸಮನಿ, ಶಶಿಕಾಂತ ಸುಂಗಠಾಣ, ತಾಂಡಾದ ಬಾಬು ರಾಠೋಡ, ಹರೀಶ ಚವ್ಹಾಣ, ಆನಂದ ರಾಠೋಡ, ಇಬ್ರಾಹಿಂಪೂರ ಗ್ರಾಮದ ವೀರೇಶ ಹುಣಸಗಿ, ನಾಗು ಕಮತಗಿ ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>