ವಿಜಯಪುರ: ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ–ಭಾಗ್ಯಶ್ರೀ ದಂಪತಿ ಹಿರಿಯ ಪುತ್ರಿ ಸಂಯುಕ್ತಾ ಅವರ ವಿವಾಹವು ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಶಿವಕುಮಾರ್ ಅವರೊಂದಿಗೆ ನಗರದ ಬೇಗಂ ತಲಾಬ್ ಹತ್ತಿರ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು, ಬಂಧುಗಳು ಹಾಗೂ ಸಹಸ್ರಾರು ಜನರು ವಿವಾಹ ಅರತಕ್ಷತೆಯಲ್ಲಿ ಪಾಲ್ಗೊಂಡು, ನವ ವಧು–ವರರನ್ನು ಆಶೀರ್ವದಿಸಿದರು.
ವಿವಾಹ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಶೈಲಿಯ ತಿಂಡಿ, ತಿನಿಸು, ಭಕ್ಷ್ಯ–ಭೋಜನ ವ್ಯವಸ್ಥೆ ಮಾಡಲಾಗಿತ್ತು.