<p><strong>ವಿಜಾಪುರ: </strong>ತಾಲ್ಲೂಕಿನ ಅರಕೇರಿ (ಮುಮ್ಮೆಟ್ಟಿ) ಗುಡ್ಡದಲ್ಲಿ ಸೋಮ ವಾರ ಪ್ರಸಿದ್ಧ ಅಮೋಘ ಸಿದ್ಧೇಶ್ವರ ಜಾತ್ರೆಯ ವೈಭವ. ಛಟ್ಟಿ ಅಮಾವಾಸ್ಯೆ ಯಂದು ಲಕ್ಷಾಂತರ ಭಕ್ತರು ಪಾಲ್ಗೊಂಡು, ‘ದೇವರ ಭೇಟಿ’ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.<br /> <br /> ಮಹಾರಾಷ್ಟ್ರ ಮತ್ತು ಕರ್ನಾಟಕದ 150ಕ್ಕೂ ಹೆಚ್ಚು ಗ್ರಾಮಸ್ಥರು ತಮ್ಮೂ ರಿನ ದೇವರ ಪಲ್ಲಕ್ಕಿಯೊಂದಿಗೆ ಮುಮ್ಮೆಟ್ಟಿ ಗುಡ್ಡಕ್ಕೆ ಆಗಮಿಸಿದ್ದರು. ದೇವಸ್ಥಾನದ ಎದುರಿನ ಬಯಲು ಜಾಗೆಯಲ್ಲಿ ಈ ಪಲ್ಲಕ್ಕಿಗಳನ್ನು ಇಡಲಾ ಗಿತ್ತು. ಆ ಪ್ರದೇಶ ಪಲ್ಲಕ್ಕಿ ಮತ್ತು ಭಕ್ತರಿಂದ ತುಂಬಿತ್ತು.<br /> <br /> ಮಧ್ಯಾಹ್ನದ ನಂತರ ಈ ಎಲ್ಲ ಪಲ್ಲಕ್ಕಿಗಳಿಗೆ ಅಮೋಘಸಿದ್ಧೇಶ್ವರ ದೇವಸ್ಥಾನದ ಪಲ್ಲಕ್ಕಿಯ ದರ್ಶನ ಕೊಡಿಸಲಾಯಿತು. ಇದಕ್ಕೆ ದೇವರ ಭೇಟಿ ಎಂದು ಕರೆಯಲಾಗುತ್ತಿದೆ. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಭಕ್ತರು, ಅಪಾರ ಪ್ರಮಾಣದ ಭಂಡಾರ (ಅರಿ ಷಿಣ ಪುಡಿ) ಎರಚಿ ಸಂಭ್ರಮಿಸಿದರು. ಆವೇಷ ಭರಿತರಾಗಿ ಡೊಳ್ಳುಗಳನ್ನು ನುಡಿಸಿ–ಕುಣಿದು ಕುಪ್ಪಳಿಸಿದರು.<br /> <br /> ಮನೆಯಿಂದ ತಂದಿದ್ದ ಹೋಳಿಗೆ–ಕರಿಗಡಬಿನ ನೈವೇದ್ಯವನ್ನು ದೇವರಿಗೆ ಸರ್ಮಪಿಸಿ, ಸಹಭೋಜನ ಸವಿದರು. ಅಮೋಘಸಿದ್ಧರ ಮೂಲ ಗದ್ದುಗೆಗೆ ಮಹಾಪೂಜೆ, ಭಂಡಾರ ಪೂಜೆ ನಸುಕಿನಲ್ಲಿ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ನಾಲ್ಕೈದು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.<br /> <br /> ಆಡಳಿತ ಮಂಡಳಿಯ ವಿವಾದದ ಹಿನ್ನೆಲೆಯಲ್ಲಿ ಈ ದೇವಸ್ಥಾನದಲ್ಲಿ ಇತ್ತೀಚೆಗೆ ಭಕ್ತರೊಬ್ಬರ ಕೊಲೆ ನಡೆದಿತ್ತು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>ತಾಲ್ಲೂಕಿನ ಅರಕೇರಿ (ಮುಮ್ಮೆಟ್ಟಿ) ಗುಡ್ಡದಲ್ಲಿ ಸೋಮ ವಾರ ಪ್ರಸಿದ್ಧ ಅಮೋಘ ಸಿದ್ಧೇಶ್ವರ ಜಾತ್ರೆಯ ವೈಭವ. ಛಟ್ಟಿ ಅಮಾವಾಸ್ಯೆ ಯಂದು ಲಕ್ಷಾಂತರ ಭಕ್ತರು ಪಾಲ್ಗೊಂಡು, ‘ದೇವರ ಭೇಟಿ’ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.<br /> <br /> ಮಹಾರಾಷ್ಟ್ರ ಮತ್ತು ಕರ್ನಾಟಕದ 150ಕ್ಕೂ ಹೆಚ್ಚು ಗ್ರಾಮಸ್ಥರು ತಮ್ಮೂ ರಿನ ದೇವರ ಪಲ್ಲಕ್ಕಿಯೊಂದಿಗೆ ಮುಮ್ಮೆಟ್ಟಿ ಗುಡ್ಡಕ್ಕೆ ಆಗಮಿಸಿದ್ದರು. ದೇವಸ್ಥಾನದ ಎದುರಿನ ಬಯಲು ಜಾಗೆಯಲ್ಲಿ ಈ ಪಲ್ಲಕ್ಕಿಗಳನ್ನು ಇಡಲಾ ಗಿತ್ತು. ಆ ಪ್ರದೇಶ ಪಲ್ಲಕ್ಕಿ ಮತ್ತು ಭಕ್ತರಿಂದ ತುಂಬಿತ್ತು.<br /> <br /> ಮಧ್ಯಾಹ್ನದ ನಂತರ ಈ ಎಲ್ಲ ಪಲ್ಲಕ್ಕಿಗಳಿಗೆ ಅಮೋಘಸಿದ್ಧೇಶ್ವರ ದೇವಸ್ಥಾನದ ಪಲ್ಲಕ್ಕಿಯ ದರ್ಶನ ಕೊಡಿಸಲಾಯಿತು. ಇದಕ್ಕೆ ದೇವರ ಭೇಟಿ ಎಂದು ಕರೆಯಲಾಗುತ್ತಿದೆ. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಭಕ್ತರು, ಅಪಾರ ಪ್ರಮಾಣದ ಭಂಡಾರ (ಅರಿ ಷಿಣ ಪುಡಿ) ಎರಚಿ ಸಂಭ್ರಮಿಸಿದರು. ಆವೇಷ ಭರಿತರಾಗಿ ಡೊಳ್ಳುಗಳನ್ನು ನುಡಿಸಿ–ಕುಣಿದು ಕುಪ್ಪಳಿಸಿದರು.<br /> <br /> ಮನೆಯಿಂದ ತಂದಿದ್ದ ಹೋಳಿಗೆ–ಕರಿಗಡಬಿನ ನೈವೇದ್ಯವನ್ನು ದೇವರಿಗೆ ಸರ್ಮಪಿಸಿ, ಸಹಭೋಜನ ಸವಿದರು. ಅಮೋಘಸಿದ್ಧರ ಮೂಲ ಗದ್ದುಗೆಗೆ ಮಹಾಪೂಜೆ, ಭಂಡಾರ ಪೂಜೆ ನಸುಕಿನಲ್ಲಿ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ನಾಲ್ಕೈದು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.<br /> <br /> ಆಡಳಿತ ಮಂಡಳಿಯ ವಿವಾದದ ಹಿನ್ನೆಲೆಯಲ್ಲಿ ಈ ದೇವಸ್ಥಾನದಲ್ಲಿ ಇತ್ತೀಚೆಗೆ ಭಕ್ತರೊಬ್ಬರ ಕೊಲೆ ನಡೆದಿತ್ತು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>