ಶಿರಸಿ: ವಿಧಾನಸೌಧ ಇರಲಿ, ಮನೆ ಅಥವಾ ಕಚೇರಿ ಇರಲಿ ಸಾರ್ವಜನಿಕರ ಭೇಟಿಗೆ ಸದಾ ಲಭ್ಯವಿರುತ್ತೇನೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸಚಿವ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಕುರಿತು ಭೇಟಿಗೆ ಅವಕಾಶ ಕೇಳಿರುವ ಕುರಿತು ಬುಧವಾರ ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
'ನನ್ನ ಭೇಟಿಗೆ ಅವಕಾಶ ಕೇಳಿದವರಿಗೆ ನಿಶ್ಚಿತವಾಗಿಯೂ ನೀಡುತ್ತೇನೆ' ಎಂದರು. ಆದರೆ ಆನಂದ್ ಸಿಂಗ್ ಭೇಟಿಗೆ ಅವಕಾಶ ಕೇಳಿದ್ದಾರೆಂದು ನೇರವಾಗಿ ಸ್ಪಷ್ಟಪಡಿಸಲಿಲ್ಲ.