<p><strong>ಹುಣಸಗಿ</strong>: ‘ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದರೆ ನೆಮ್ಮದಿಯ ಜೀವನ ಇರುತ್ತದೆ. ದೈವಿಶಕ್ತಿ ಸದಾ ಜಾಗೃತವಾಗಿರುತ್ತದೆ’ ಎಂದು ಹುಣಸಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ ತೀರ್ಥರು ಹೇಳಿದರು.</p>.<p>ಹುಣಸಗಿ ಸಮೀಪದ ಬಿಳೇಬಾವಿ ಗ್ರಾಮದಲ್ಲಿ ಅಕ್ಷೊಭ್ಯತೀರ್ಥರ 214 ನೇ ಆರಾಧಾನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಧ್ಯಾರಾಧನೆ ಅಂಗವಾಗಿ ವೃಂದಾವನಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>‘ನಾವು ನಿತ್ಯದಲ್ಲಿ ಕೈಗೊಳ್ಳುವ ಆಚಾರ, ವಿಚಾರ, ಧಾರ್ಮಿಕ ಕಾರ್ಯಗಳು ಸದಾ ಮನೆಯ ಸದಸ್ಯರಿಗೂ ಉತ್ತಮ ಮಾರ್ಗ ತೊರಿಸುತ್ತದೆ’ ಎಂದರು. </p>.<p>ಯರಗಲ್ಲದ ರಾಮರಾವ್ ಕುಲಕರ್ಣಿ ಉಪನ್ಯಾಸ ನೀಡಿ, ‘ಭಗವಂತ ಸಾಮಿಪ್ಯಕ್ಕೆ ಹೋಗಲು ಗುರು ಕರುಣೆ ಬೇಕು. ಆದ್ದರಿಂದ ಗುರುಗಳ ಸೇವೆ ಹಾಗೂ ಧರ್ಮ ಕಾರ್ಯದಲ್ಲಿ ನಮ್ಮನ್ನು ನಾವು ತೋಡಗಿಸಿಕೊಳ್ಳಬೇಕು’ ಎಂದರು.</p>.<p>ಅರುಣ ದೇಸಾಯಿ ಮಾತನಾಡಿ, ‘ಮನೆಯಲ್ಲಿರುವ ಹಿರಿಯರು ಹಾಗೂ ತಂದೆ–ತಾಯಿರಿಗೆ ಗೌರವಿಸುವ ಮೂಲಕ ಅವರ ಆರೈಕೆಯಲ್ಲಿ ದೇವರ ರೂಪವನ್ನು ಕಂಡಾಗ ಮಾತ್ರ ಮನೆಯ ವಾತಾವರಣವೂ ಚನ್ನಾಗಿರುತ್ತದೆ’ ಎಂದು ತಿಳಿಸಿದರು.</p>.<p>ಆರಾಧನೆ ಅಂಗವಾಗಿ ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ನಿರ್ಮಾಲ್ಯ ಸೇವೆ, ಬಳಿಕ ಯತಿಳ ವೃಂದಾನವಗಳಿಗೆ ಅಲಂಕಾಲ, ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯಿತು. </p>.<p>ಯಲಗೂರಾಚಾರ್ಯ ಜೋಶಿ, ಗಂಗಾಧರ ಜೋಶಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಗಾಯತ್ರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.</p>.<p>ಆರಾಧನೆಯಲ್ಲಿ ಕೃಷ್ಣಾಚಾರ ಗುಡಗುಂಟಿ, ಭೀಮಶೇನರಾವ್ ಹೇಗಡ್ಯಾಳ, ಗಂಗಾಧರ ಜೂಲಗುಡ್ಡ, ದತ್ತಾತ್ರೇಯ ನಾರಾಯಣಪುರ, ರವಿ ಜೋಶಿ, ವಿಲಾಸ್, ಮಲ್ಲಾರಾವ್, ರವಿಂದ್ರ, ಅಶೋಕ, ಶ್ರೀಹರಿ, ಭೀಮರಾವ್ ಕುಲಕರ್ಣಿ, ಅಶೋಕ ಮೈಲೇಶ್ವರ, ದತ್ತಾತ್ರೇಯ ಜಹಗಿರದಾರ, ಸದಾಶಿವ ನಾರಾಯಣಪುರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ‘ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದರೆ ನೆಮ್ಮದಿಯ ಜೀವನ ಇರುತ್ತದೆ. ದೈವಿಶಕ್ತಿ ಸದಾ ಜಾಗೃತವಾಗಿರುತ್ತದೆ’ ಎಂದು ಹುಣಸಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ ತೀರ್ಥರು ಹೇಳಿದರು.</p>.<p>ಹುಣಸಗಿ ಸಮೀಪದ ಬಿಳೇಬಾವಿ ಗ್ರಾಮದಲ್ಲಿ ಅಕ್ಷೊಭ್ಯತೀರ್ಥರ 214 ನೇ ಆರಾಧಾನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಧ್ಯಾರಾಧನೆ ಅಂಗವಾಗಿ ವೃಂದಾವನಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>‘ನಾವು ನಿತ್ಯದಲ್ಲಿ ಕೈಗೊಳ್ಳುವ ಆಚಾರ, ವಿಚಾರ, ಧಾರ್ಮಿಕ ಕಾರ್ಯಗಳು ಸದಾ ಮನೆಯ ಸದಸ್ಯರಿಗೂ ಉತ್ತಮ ಮಾರ್ಗ ತೊರಿಸುತ್ತದೆ’ ಎಂದರು. </p>.<p>ಯರಗಲ್ಲದ ರಾಮರಾವ್ ಕುಲಕರ್ಣಿ ಉಪನ್ಯಾಸ ನೀಡಿ, ‘ಭಗವಂತ ಸಾಮಿಪ್ಯಕ್ಕೆ ಹೋಗಲು ಗುರು ಕರುಣೆ ಬೇಕು. ಆದ್ದರಿಂದ ಗುರುಗಳ ಸೇವೆ ಹಾಗೂ ಧರ್ಮ ಕಾರ್ಯದಲ್ಲಿ ನಮ್ಮನ್ನು ನಾವು ತೋಡಗಿಸಿಕೊಳ್ಳಬೇಕು’ ಎಂದರು.</p>.<p>ಅರುಣ ದೇಸಾಯಿ ಮಾತನಾಡಿ, ‘ಮನೆಯಲ್ಲಿರುವ ಹಿರಿಯರು ಹಾಗೂ ತಂದೆ–ತಾಯಿರಿಗೆ ಗೌರವಿಸುವ ಮೂಲಕ ಅವರ ಆರೈಕೆಯಲ್ಲಿ ದೇವರ ರೂಪವನ್ನು ಕಂಡಾಗ ಮಾತ್ರ ಮನೆಯ ವಾತಾವರಣವೂ ಚನ್ನಾಗಿರುತ್ತದೆ’ ಎಂದು ತಿಳಿಸಿದರು.</p>.<p>ಆರಾಧನೆ ಅಂಗವಾಗಿ ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ನಿರ್ಮಾಲ್ಯ ಸೇವೆ, ಬಳಿಕ ಯತಿಳ ವೃಂದಾನವಗಳಿಗೆ ಅಲಂಕಾಲ, ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯಿತು. </p>.<p>ಯಲಗೂರಾಚಾರ್ಯ ಜೋಶಿ, ಗಂಗಾಧರ ಜೋಶಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಗಾಯತ್ರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.</p>.<p>ಆರಾಧನೆಯಲ್ಲಿ ಕೃಷ್ಣಾಚಾರ ಗುಡಗುಂಟಿ, ಭೀಮಶೇನರಾವ್ ಹೇಗಡ್ಯಾಳ, ಗಂಗಾಧರ ಜೂಲಗುಡ್ಡ, ದತ್ತಾತ್ರೇಯ ನಾರಾಯಣಪುರ, ರವಿ ಜೋಶಿ, ವಿಲಾಸ್, ಮಲ್ಲಾರಾವ್, ರವಿಂದ್ರ, ಅಶೋಕ, ಶ್ರೀಹರಿ, ಭೀಮರಾವ್ ಕುಲಕರ್ಣಿ, ಅಶೋಕ ಮೈಲೇಶ್ವರ, ದತ್ತಾತ್ರೇಯ ಜಹಗಿರದಾರ, ಸದಾಶಿವ ನಾರಾಯಣಪುರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>