<p><strong>ಕಕ್ಕೇರಾ:</strong> ಸಾರ್ವಜನಿಕರು ಹಾಗೂ ಮುಖ್ಯ ಗುರುಗಳು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಬೆಳೆಯಬಲ್ಲವು ಎಂಬುವುದಕ್ಕೆ ಪಟ್ಟಣದ ಸಮೀಪದ ಏದಲಭಾವಿ ಗ್ರಾಮದ ಶಾಲೆಯೇ ಉದಾಹರಣೆ.</p>.<p>‘ನಮ್ಮ ಶಾಲೆಯು ಎಲ್ಲ ಶಾಲೆಯಂತೆ ಇರಬಾರದು ಎಂದು ನಿರ್ಧಾರ ಮಾಡಿದೆ. ಮಕ್ಕಳು ಹಾಗೂ ಊರಿನ ನಾಗರಿಕರ ಶ್ರಮದಿಂದ ಉತ್ತಮ ಶಾಲೆಯಾಗಿ ಮಾರ್ಪಟ್ಟಿತು. ಶಾಲೆಗೆ ಅನೇಕ ಪ್ರಶಸ್ತಿಗಳು ಬರುತ್ತಿರುವುದು ಸಂತಸವಿದೆ’ ಎಂಬುದು ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ಹುಣಸಗಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡಿರುವ ದುಂಡಪ್ಪ ಕೋಲಕಾರ ಅವರ ಮನದಾಳದ ಮಾತು.</p>.<p>ಶಾಲೆಯ ಪರಿಸರವು ಹಸಿರಿನಿಂದ ಕಂಗೊಳಿಸುತ್ತಿದೆ. ಶಾಲೆಗೆ ಸರ್ವ ಶಿಕ್ಷಣ ಅಭಿಯಾನದಲ್ಲಿ ಸುಸಜ್ಜಿತವಾದ 11 ಕೊಠಡಿಗಳನ್ನು ನಿರ್ಮಿಸಲಾಗಿದೆ. ರಾಷ್ಟ್ರನಾಯಕರ ಭಾವಚಿತ್ರ, ರಾಷ್ಟ್ರ ಪ್ರಾಣಿ, ಪಕ್ಷಿ ಚಿತ್ರಗಳನ್ನು ಚಿತ್ರಿಸಲಾಗಿದೆ. ಹಾಗೆಯೇ ಹಸಿರು ಹುಲ್ಲು ಹಾಸಿನಲ್ಲಿ ಕರ್ನಾಟಕದ, ಭಾರತದ ನಕ್ಷೆ ರೂಪಿಸಿರುವುದು ಗಮನ ಸೆಳೆಯುತ್ತದೆ.</p>.<p>2014-15 ನೇ ಸಾಲಿನಲ್ಲಿ ಹಸಿರು ಶಾಲೆ ಜಿಲ್ಲಾ ಪ್ರಶಸ್ತಿ ಲಭಿಸಿದೆ. 1 ರಿಂದ 8 ನೇ ತರಗತಿ ಹೊಂದಿದ್ದು 3 ಜನ ಕಾಯಂ ಶಿಕ್ಷಕರು ಹಾಗೂ ಮೂವರು ಅತಿಥಿ ಶಿಕ್ಷಕರು ಇದ್ದಾರೆ. ಇಂಗ್ಲಿಷ್ ಹಾಗೂ ಹಿಂದಿ ಸೇರಿ ಇಬ್ಬರು ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಈ ಎರಡು ವಿಷಯಗಳ ಮೇಲೆ ವಿದ್ಯಾರ್ಥಿಗಳ ಹಿಡಿತ ಸಾಧಿಸಲು ಶಿಕ್ಷಕರನ್ನು ನೇಮಿಸುವುದು ಅವಶ್ಯ ಎಂದು ಗ್ರಾಮಸ್ಥರಾದ ಅಮರೇಶ ಹಡಪದ ಹೇಳುತ್ತಾರೆ.</p>.<p>ಮಕ್ಕಳಿಗಾಗಿ ಕೈತೋಟ ನಿರ್ಮಿಸಿ ತರಕಾರಿಗಳನ್ನು ಬೆಳೆಯಲಾಗಿದೆ. ಶಾಲೆಯ ಆವರಣದೊಳಗೆ ತೆಂಗು, ಅಶೋಕ ಮರ ಹಾಗೂ ಗಾರ್ಡನ್ ನಿರ್ಮಿಸಿ ವಾತಾವರಣವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ.</p>.<p>ಬಿಸಿಯೂಟ ತಯಾರಿಸಲು ಉತ್ತಮ ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೌಚಾಲಯ ನಿರ್ಮಿಸಿ ಸ್ವಚ್ಛತೆ ಕಾಪಾಡಿಕೊಂಡು ಬರಲಾಗಿದೆ.</p>.<p>ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಇದೆ. ಇನ್ನೂ ಹೆಚ್ಚಿನ ಶಿಕ್ಷಣ ನೀಡುವುದಕ್ಕಾಗಿ ಎಲ್ಸಿಡಿ ಪ್ರೊಜೆಕ್ಟರ್ ಇದ್ದು ಬಹು ವಿಷಯ ಆಧಾರಿತ ಸಿ.ಡಿಗಳ ಮುಖಾಂತರ ವಿದ್ಯಾರ್ಥಿಗಳಿಗೆ ಪಠ್ಯೇತರ ಬೋಧನೆ ನಡೆಸಿಕೊಂಡು ಬರಲಾಗುತ್ತದೆ.</p>.<p>ಒಟ್ಟು 217 ವಿದ್ಯಾರ್ಥಿಗಳು ದಾಖಲಾತಿ ಇದೆ. ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಡೊಳ್ಳು ಕುಣಿತ, ನಾಟಕ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಶಿಕ್ಷಕ ಬಸವರಾಜ ನೀಲಗಾರ ಹೇಳಿದರು.</p>.<p>*<br />ಈ ಹಿಂದೆ ಇದ್ದ ಮುಖ್ಯ ಗುರು ದುಂಡಪ್ಪ ಕೋಲಕಾರ ಹಾಗೂ ಮುರಗೇಂದ್ರಸ್ವಾಮಿ ಶ್ರಮದಿಂದ ನಮ್ಮ ಶಾಲೆ ಈ ಉನ್ನತ ಮಟ್ಟಕ್ಕೆ ಏರಿದೆ. ಆಟ- ಪಾಠದಲ್ಲಿ ಅವರು ಹಾಕಿದ ಅಡಿಪಾಯ, ಭದ್ರ ಬುನಾದಿಯಾಗಿ ಗಮನ ಸೆಳೆಯುತ್ತಿದೆ<br /><em><strong>-ಹಣಮಂತ ಬಾಚಾಳ, ಕರವೇ ಹೋಬಳಿ ಘಟಕ ಅಧ್ಯಕ್ಷ</strong></em></p>.<p><em><strong>*</strong></em><br />ಗ್ರಾಮಸ್ಥರ ಸಹಕಾರದಿಂದ ಶಾಲೆಯ ಪರಿಸರವೇ ಮಕ್ಕಳಿಗೆ ಹೆಚ್ಚಿನ ಜ್ಞಾನ ತಂದು ಕೊಡುವಂತಿದೆ.<br /><em><strong>-ಸಂಗಪ್ಪ ವಿಶ್ವಕರ್ಮ, ಮುಖ್ಯ ಶಿಕ್ಷಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ:</strong> ಸಾರ್ವಜನಿಕರು ಹಾಗೂ ಮುಖ್ಯ ಗುರುಗಳು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಬೆಳೆಯಬಲ್ಲವು ಎಂಬುವುದಕ್ಕೆ ಪಟ್ಟಣದ ಸಮೀಪದ ಏದಲಭಾವಿ ಗ್ರಾಮದ ಶಾಲೆಯೇ ಉದಾಹರಣೆ.</p>.<p>‘ನಮ್ಮ ಶಾಲೆಯು ಎಲ್ಲ ಶಾಲೆಯಂತೆ ಇರಬಾರದು ಎಂದು ನಿರ್ಧಾರ ಮಾಡಿದೆ. ಮಕ್ಕಳು ಹಾಗೂ ಊರಿನ ನಾಗರಿಕರ ಶ್ರಮದಿಂದ ಉತ್ತಮ ಶಾಲೆಯಾಗಿ ಮಾರ್ಪಟ್ಟಿತು. ಶಾಲೆಗೆ ಅನೇಕ ಪ್ರಶಸ್ತಿಗಳು ಬರುತ್ತಿರುವುದು ಸಂತಸವಿದೆ’ ಎಂಬುದು ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ಹುಣಸಗಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡಿರುವ ದುಂಡಪ್ಪ ಕೋಲಕಾರ ಅವರ ಮನದಾಳದ ಮಾತು.</p>.<p>ಶಾಲೆಯ ಪರಿಸರವು ಹಸಿರಿನಿಂದ ಕಂಗೊಳಿಸುತ್ತಿದೆ. ಶಾಲೆಗೆ ಸರ್ವ ಶಿಕ್ಷಣ ಅಭಿಯಾನದಲ್ಲಿ ಸುಸಜ್ಜಿತವಾದ 11 ಕೊಠಡಿಗಳನ್ನು ನಿರ್ಮಿಸಲಾಗಿದೆ. ರಾಷ್ಟ್ರನಾಯಕರ ಭಾವಚಿತ್ರ, ರಾಷ್ಟ್ರ ಪ್ರಾಣಿ, ಪಕ್ಷಿ ಚಿತ್ರಗಳನ್ನು ಚಿತ್ರಿಸಲಾಗಿದೆ. ಹಾಗೆಯೇ ಹಸಿರು ಹುಲ್ಲು ಹಾಸಿನಲ್ಲಿ ಕರ್ನಾಟಕದ, ಭಾರತದ ನಕ್ಷೆ ರೂಪಿಸಿರುವುದು ಗಮನ ಸೆಳೆಯುತ್ತದೆ.</p>.<p>2014-15 ನೇ ಸಾಲಿನಲ್ಲಿ ಹಸಿರು ಶಾಲೆ ಜಿಲ್ಲಾ ಪ್ರಶಸ್ತಿ ಲಭಿಸಿದೆ. 1 ರಿಂದ 8 ನೇ ತರಗತಿ ಹೊಂದಿದ್ದು 3 ಜನ ಕಾಯಂ ಶಿಕ್ಷಕರು ಹಾಗೂ ಮೂವರು ಅತಿಥಿ ಶಿಕ್ಷಕರು ಇದ್ದಾರೆ. ಇಂಗ್ಲಿಷ್ ಹಾಗೂ ಹಿಂದಿ ಸೇರಿ ಇಬ್ಬರು ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಈ ಎರಡು ವಿಷಯಗಳ ಮೇಲೆ ವಿದ್ಯಾರ್ಥಿಗಳ ಹಿಡಿತ ಸಾಧಿಸಲು ಶಿಕ್ಷಕರನ್ನು ನೇಮಿಸುವುದು ಅವಶ್ಯ ಎಂದು ಗ್ರಾಮಸ್ಥರಾದ ಅಮರೇಶ ಹಡಪದ ಹೇಳುತ್ತಾರೆ.</p>.<p>ಮಕ್ಕಳಿಗಾಗಿ ಕೈತೋಟ ನಿರ್ಮಿಸಿ ತರಕಾರಿಗಳನ್ನು ಬೆಳೆಯಲಾಗಿದೆ. ಶಾಲೆಯ ಆವರಣದೊಳಗೆ ತೆಂಗು, ಅಶೋಕ ಮರ ಹಾಗೂ ಗಾರ್ಡನ್ ನಿರ್ಮಿಸಿ ವಾತಾವರಣವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ.</p>.<p>ಬಿಸಿಯೂಟ ತಯಾರಿಸಲು ಉತ್ತಮ ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೌಚಾಲಯ ನಿರ್ಮಿಸಿ ಸ್ವಚ್ಛತೆ ಕಾಪಾಡಿಕೊಂಡು ಬರಲಾಗಿದೆ.</p>.<p>ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಇದೆ. ಇನ್ನೂ ಹೆಚ್ಚಿನ ಶಿಕ್ಷಣ ನೀಡುವುದಕ್ಕಾಗಿ ಎಲ್ಸಿಡಿ ಪ್ರೊಜೆಕ್ಟರ್ ಇದ್ದು ಬಹು ವಿಷಯ ಆಧಾರಿತ ಸಿ.ಡಿಗಳ ಮುಖಾಂತರ ವಿದ್ಯಾರ್ಥಿಗಳಿಗೆ ಪಠ್ಯೇತರ ಬೋಧನೆ ನಡೆಸಿಕೊಂಡು ಬರಲಾಗುತ್ತದೆ.</p>.<p>ಒಟ್ಟು 217 ವಿದ್ಯಾರ್ಥಿಗಳು ದಾಖಲಾತಿ ಇದೆ. ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಡೊಳ್ಳು ಕುಣಿತ, ನಾಟಕ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಶಿಕ್ಷಕ ಬಸವರಾಜ ನೀಲಗಾರ ಹೇಳಿದರು.</p>.<p>*<br />ಈ ಹಿಂದೆ ಇದ್ದ ಮುಖ್ಯ ಗುರು ದುಂಡಪ್ಪ ಕೋಲಕಾರ ಹಾಗೂ ಮುರಗೇಂದ್ರಸ್ವಾಮಿ ಶ್ರಮದಿಂದ ನಮ್ಮ ಶಾಲೆ ಈ ಉನ್ನತ ಮಟ್ಟಕ್ಕೆ ಏರಿದೆ. ಆಟ- ಪಾಠದಲ್ಲಿ ಅವರು ಹಾಕಿದ ಅಡಿಪಾಯ, ಭದ್ರ ಬುನಾದಿಯಾಗಿ ಗಮನ ಸೆಳೆಯುತ್ತಿದೆ<br /><em><strong>-ಹಣಮಂತ ಬಾಚಾಳ, ಕರವೇ ಹೋಬಳಿ ಘಟಕ ಅಧ್ಯಕ್ಷ</strong></em></p>.<p><em><strong>*</strong></em><br />ಗ್ರಾಮಸ್ಥರ ಸಹಕಾರದಿಂದ ಶಾಲೆಯ ಪರಿಸರವೇ ಮಕ್ಕಳಿಗೆ ಹೆಚ್ಚಿನ ಜ್ಞಾನ ತಂದು ಕೊಡುವಂತಿದೆ.<br /><em><strong>-ಸಂಗಪ್ಪ ವಿಶ್ವಕರ್ಮ, ಮುಖ್ಯ ಶಿಕ್ಷಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>