ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿ ಈಚೆಗೆ ನಡೆದ ಆಯುಷ್ಮಾನ್ ಭಾರತದ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,‘ಕೋವಿಡ್ ಸಂಕಷ್ಟದಿಂದ ನಾವೆಲ್ಲರೂ ಆರೋಗ್ಯದ ಪಾಠ ಕಲಿತಿದ್ದೇವೆ. ಕೊರೊನಾ ಹೋಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತ ಅದರ ಜೊತೆಗೆ ಜೀವನ ಸಾಗಿಸಬೇಕಾಗಿದೆ’ ಎಂದರು. ಹತ್ತಿಗೂಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರೈಹಿಮುದ್ದೀನ್, ಗ್ರಾಮ ಪಂಚಾಯಿತಿ ಸದಸ್ಯ ಶರಣಗೌಡ ದಳಪತಿ, ತಾಯಣ್ಣ ಕೊಳ್ಳೂರ, ಹಣಮಂತ ದೊಡಮನಿ, ಸಾಯಿಬಣ್ಣ ರಾಜನಾಳ, ದುಂಡಪ್ಪ ಚವಾಣ್, ಆರೋಗ್ಯ ಸಹಾಯಕ ಅಧಿಕಾರಿ ಶರಣಪ್ಪ ಬೀರನೂರ ಹಾಗೂ ಶಂಕರ ಶೆಟ್ಟಿ ಇದ್ದರು.