‘ಭಗವದ್ಗೀತೆ ಮಹಾಕಾವ್ಯ ಕೇವಲ ತ್ರೇತಾಯುಗ, ದ್ವಾಪರಯುಗದ ಮಾಹಿತಿ ನೀಡುವುದಿಲ್ಲ. ಈಗಿನ ಕಲಿಯುಗದಲ್ಲಿ ಪರಮಾತ್ಮನ ಅನುಗ್ರಹ ದೊರೆಯುವ ಮಾರ್ಗದ ಬಗ್ಗೆಯೂ ಸಲಹೆಗಳಿವೆ. ಮನಸ್ಸಿನ ನಿಗ್ರಹ, ಬದುಕಿನ ಯಶಸ್ಸು, ಮುಕ್ತಿಯ ಮಾರ್ಗಗಳನ್ನು ಈ ಕಾವ್ಯದಲ್ಲಿ ಶ್ರೀಕೃಷ್ಣ ಪರಮಾತ್ಮ ವಿವರಿಸುತ್ತಾನೆ. ಅದು ಅಣುರೇಣುಗಳಿಗೂ ಅನ್ವಯಿಸುತ್ತದೆ. ಜೀವರಾಶಿ ಕುರಿತು ಸಮಗ್ರ ವಿವರಗಳನ್ನು ನಾವು ಭಗವದ್ಗೀತೆಯಲ್ಲಿ ಪಡೆಯಬಹುದು’ ಎಂದು ಹೇಳಿದರು.