<p><strong>ಯಾದಗಿರಿ:</strong>‘ ಭಗವದ್ಗೀತೆ ಕೇವಲ ಧರ್ಮಗ್ರಂಥ, ಮಹಾಕಾವ್ಯ ಅಲ್ಲ. ಅದು ಮನುಕುಲಕ್ಕೆ ದಾರಿದೀಪವಾಗಿದೆ. ಅದನ್ನು ಅಧ್ಯಯನ ಮಾಡುವ ಮೂಲಕ ಬದುಕಿನ ಮುಕ್ತಿಮಾರ್ಗ ಕಂಡುಕೊಳ್ಳಬಹುದು’ ಎಂದು ಪಂಡಿತ್ ನರಸಿಂಹಾಚಾರ್ಯ ಪುರಾಣಿಕ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಮಾತಾಮಾಣಿಕೇಶ್ವರಿ ಬಡಾವಣೆಯಲ್ಲಿನ ವೀರಾಂಜನೇಯಸ್ವಾಮಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಕರ್ನಾಟಕ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಭಗವದ್ಗೀತೆಯಲ್ಲಿ ಇರುವ ಬದುಕಿನ ವಿಮರ್ಶೆ ಪ್ರತಿಯೊಬ್ಬರ ಜೀವನಕ್ಕೆ ಅನ್ವಯಿಸುತ್ತದೆ. ಅಲ್ಲಿ ಕಂಡುಬರುವ ದೃಶ್ಯ, ಪಾತ್ರಗಳ ಸವಾಲು ಸಮಸ್ಯೆಗಳು ಎಲ್ಲರ ಬದುಕಿನಲ್ಲೂ ಎದುರಾಗುತ್ತವೆ. ಹಾಗಾಗಿ, ಸಾಮಾನ್ಯರ ಬದುಕಿಗೂ ಭಗವದ್ಗೀತೆ ಅನ್ವಯಿಸುತ್ತದೆ. ಆದ್ದರಿಂದ, ಭಗವವದ್ಗೀತೆಯ ಅಧ್ಯಯನ ಅಗತ್ಯ’ ಎಂದರು.</p>.<p>‘ಭಗವದ್ಗೀತೆ ಮಹಾಕಾವ್ಯ ಕೇವಲ ತ್ರೇತಾಯುಗ, ದ್ವಾಪರಯುಗದ ಮಾಹಿತಿ ನೀಡುವುದಿಲ್ಲ. ಈಗಿನ ಕಲಿಯುಗದಲ್ಲಿ ಪರಮಾತ್ಮನ ಅನುಗ್ರಹ ದೊರೆಯುವ ಮಾರ್ಗದ ಬಗ್ಗೆಯೂ ಸಲಹೆಗಳಿವೆ. ಮನಸ್ಸಿನ ನಿಗ್ರಹ, ಬದುಕಿನ ಯಶಸ್ಸು, ಮುಕ್ತಿಯ ಮಾರ್ಗಗಳನ್ನು ಈ ಕಾವ್ಯದಲ್ಲಿ ಶ್ರೀಕೃಷ್ಣ ಪರಮಾತ್ಮ ವಿವರಿಸುತ್ತಾನೆ. ಅದು ಅಣುರೇಣುಗಳಿಗೂ ಅನ್ವಯಿಸುತ್ತದೆ. ಜೀವರಾಶಿ ಕುರಿತು ಸಮಗ್ರ ವಿವರಗಳನ್ನು ನಾವು ಭಗವದ್ಗೀತೆಯಲ್ಲಿ ಪಡೆಯಬಹುದು’ ಎಂದು ಹೇಳಿದರು.</p>.<p>‘ಅರ್ಜುನ– ಶ್ರೀಕೃಷ್ಣರ ಅನುಸಂಧಾನ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ವಿಷ್ಣುವಿನ ಸಹಸ್ರನಾಮ ಕೂಡ ಮುಕ್ತಿಯನ್ನು ನೀಡುತ್ತದೆ. ಹಾಗಾಗಿ, ಭಗವದ್ಗೀತೆ ಅನಿವಾರ್ಯ ಕೂಡ ಅನಿಸುತ್ತದೆ’ ಎಂದರು.</p>.<p>ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ‘ಭಗವದ್ಗೀತಾ ಅಭಿಯಾನವನ್ನು ಇಡೀ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಡಿ.18 ರಂದು ಧಾರವಾಡದಲ್ಲಿ ಸಮರ್ಪಣೆ ನಡೆಯಲಿದೆ. ಭಗವದ್ಗೀತೆಯ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಮತ್ತು ಪ್ರತಿ ವ್ಯಕ್ತಿಯನ್ನು ಸುಸಂಕೃತರನ್ನಾಗಿ ರೂಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ’ ಎಂದು ಹೇಳಿದರು.</p>.<p>ಅಭಿಯಾನದ ಸಂಚಾಲಕ ಅನಿಲ ದೇಶಪಾಂಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong>‘ ಭಗವದ್ಗೀತೆ ಕೇವಲ ಧರ್ಮಗ್ರಂಥ, ಮಹಾಕಾವ್ಯ ಅಲ್ಲ. ಅದು ಮನುಕುಲಕ್ಕೆ ದಾರಿದೀಪವಾಗಿದೆ. ಅದನ್ನು ಅಧ್ಯಯನ ಮಾಡುವ ಮೂಲಕ ಬದುಕಿನ ಮುಕ್ತಿಮಾರ್ಗ ಕಂಡುಕೊಳ್ಳಬಹುದು’ ಎಂದು ಪಂಡಿತ್ ನರಸಿಂಹಾಚಾರ್ಯ ಪುರಾಣಿಕ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಮಾತಾಮಾಣಿಕೇಶ್ವರಿ ಬಡಾವಣೆಯಲ್ಲಿನ ವೀರಾಂಜನೇಯಸ್ವಾಮಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಕರ್ನಾಟಕ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಭಗವದ್ಗೀತೆಯಲ್ಲಿ ಇರುವ ಬದುಕಿನ ವಿಮರ್ಶೆ ಪ್ರತಿಯೊಬ್ಬರ ಜೀವನಕ್ಕೆ ಅನ್ವಯಿಸುತ್ತದೆ. ಅಲ್ಲಿ ಕಂಡುಬರುವ ದೃಶ್ಯ, ಪಾತ್ರಗಳ ಸವಾಲು ಸಮಸ್ಯೆಗಳು ಎಲ್ಲರ ಬದುಕಿನಲ್ಲೂ ಎದುರಾಗುತ್ತವೆ. ಹಾಗಾಗಿ, ಸಾಮಾನ್ಯರ ಬದುಕಿಗೂ ಭಗವದ್ಗೀತೆ ಅನ್ವಯಿಸುತ್ತದೆ. ಆದ್ದರಿಂದ, ಭಗವವದ್ಗೀತೆಯ ಅಧ್ಯಯನ ಅಗತ್ಯ’ ಎಂದರು.</p>.<p>‘ಭಗವದ್ಗೀತೆ ಮಹಾಕಾವ್ಯ ಕೇವಲ ತ್ರೇತಾಯುಗ, ದ್ವಾಪರಯುಗದ ಮಾಹಿತಿ ನೀಡುವುದಿಲ್ಲ. ಈಗಿನ ಕಲಿಯುಗದಲ್ಲಿ ಪರಮಾತ್ಮನ ಅನುಗ್ರಹ ದೊರೆಯುವ ಮಾರ್ಗದ ಬಗ್ಗೆಯೂ ಸಲಹೆಗಳಿವೆ. ಮನಸ್ಸಿನ ನಿಗ್ರಹ, ಬದುಕಿನ ಯಶಸ್ಸು, ಮುಕ್ತಿಯ ಮಾರ್ಗಗಳನ್ನು ಈ ಕಾವ್ಯದಲ್ಲಿ ಶ್ರೀಕೃಷ್ಣ ಪರಮಾತ್ಮ ವಿವರಿಸುತ್ತಾನೆ. ಅದು ಅಣುರೇಣುಗಳಿಗೂ ಅನ್ವಯಿಸುತ್ತದೆ. ಜೀವರಾಶಿ ಕುರಿತು ಸಮಗ್ರ ವಿವರಗಳನ್ನು ನಾವು ಭಗವದ್ಗೀತೆಯಲ್ಲಿ ಪಡೆಯಬಹುದು’ ಎಂದು ಹೇಳಿದರು.</p>.<p>‘ಅರ್ಜುನ– ಶ್ರೀಕೃಷ್ಣರ ಅನುಸಂಧಾನ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ವಿಷ್ಣುವಿನ ಸಹಸ್ರನಾಮ ಕೂಡ ಮುಕ್ತಿಯನ್ನು ನೀಡುತ್ತದೆ. ಹಾಗಾಗಿ, ಭಗವದ್ಗೀತೆ ಅನಿವಾರ್ಯ ಕೂಡ ಅನಿಸುತ್ತದೆ’ ಎಂದರು.</p>.<p>ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ‘ಭಗವದ್ಗೀತಾ ಅಭಿಯಾನವನ್ನು ಇಡೀ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಡಿ.18 ರಂದು ಧಾರವಾಡದಲ್ಲಿ ಸಮರ್ಪಣೆ ನಡೆಯಲಿದೆ. ಭಗವದ್ಗೀತೆಯ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಮತ್ತು ಪ್ರತಿ ವ್ಯಕ್ತಿಯನ್ನು ಸುಸಂಕೃತರನ್ನಾಗಿ ರೂಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ’ ಎಂದು ಹೇಳಿದರು.</p>.<p>ಅಭಿಯಾನದ ಸಂಚಾಲಕ ಅನಿಲ ದೇಶಪಾಂಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>