<p><strong>ಕಕ್ಕೇರಾ:</strong> ಪಟ್ಟಣದಲ್ಲಿ ಸುಮಾರು 50ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಜಂತ್ರಿ ಕಾಯಕ ವೃತ್ತಿ ಮಾಡುತ್ತಿರುವ ಕುಟುಂಬಗಳು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ.</p>.<p>ಸರ್ಕಾರದ ವಿಶೇಷ ಪ್ಯಾಕೇಜ್ನಲ್ಲಿ ತಮ್ಮ ವೃತ್ತಿಯನ್ನು ಕಡೆಗಣಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಂದು ಶುಭ ಸಮಾರಂಭಗಳಿಗೆ ನಾವುಗಳು ಮಾತ್ರ ನೆನಪಾಗುತ್ತೇವೆ. ಆದರೆ ನಮಗೆ ತೊಂದರೆಯಾದಾಗ ಯಾರು ಇಲ್ಲವಾ ಎಂದು ಬ್ಯಾಂಜೋ ಮುಖ್ಯಸ್ಥ ಹಣಮಂತ ಭಜಂತ್ರಿ ಹೇಳುತ್ತಾರೆ.</p>.<p>ಮದುವೆ ಸಮಾರಂಭಗಳಲ್ಲಿ ,ಶುಭ ಕಾರ್ಯಕ್ರಮಗಳಲ್ಲಿ ವಾದ್ಯಮೇಳದವರಿಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಆದರೆ ಕೋವಿಡ್ ಮಾರ್ಗಸೂಚಿಗಳಿಂದಾಗಿ ನಮಗೆ ತೊಂದರೆಯಾಗಿದೆ ಎನ್ನುತ್ತಾರೆ ಅವರು.</p>.<p>ಬ್ಯಾಂಜೋ ವಾದಕರ ಚಾಲಕರು, ಕಲಾವಿದರು ಇಂದು ನಿರ್ಗತಿಕರಾಗಿದ್ದು, ಅವರ ಕುಟುಂಬ ಕಷ್ಟದಲ್ಲಿದೆ ಎಂದು ಮೌನೇಶ ಭಜಂತ್ರಿ ಹೇಳಿದರು.</p>.<p>ಮದುವೆ ಶುಭ ಸಮಾರಂಭಗಳಲ್ಲಿ ಒಂದು ಮದುವೆಗೆ ₹ 10 ಸಾವಿರದಿಂದ ₹ 12 ಸಾವಿರ ಹಣ ಪಡೆಯುತ್ತಿದ್ದೇವು. ಆದರೆ ಪ್ರಸ್ತುತ ಬ್ಯಾಂಜೋ ವಾದಕರಿಲ್ಲದೇ ಮದುವೆ ಮಾಡುತ್ತಿದ್ದು, ನಮಗೆ ತೊಂದರೆಯಾಗಿದೆ ಎಂದು ಹಿರಿಯ ಮುಖಂಡ ರಮೇಶ ಹೂಗಾರ ಹೇಳಿದರು.</p>.<p>‘ನಮಗೆ ಸರ್ಕಾರ ಸಹಾಯಧನ ನೀಡಬೇಕು ಎಂದು ಯಲ್ಲಪ್ಪ ಭಜಂತ್ರಿ, ಸೋಮನಿಂಗಪ್ಪ ಭಜಂತ್ರಿ, ರಮೇಶ ಹೂಗಾರ, ಹಣಮಂತ ಭಜಂತ್ರಿ, ಪರಮಣ್ಣ ಭಜಂತ್ರಿ ಹಾಗೂ ನಾಗನಾಥ ಸಾಳಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ:</strong> ಪಟ್ಟಣದಲ್ಲಿ ಸುಮಾರು 50ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಜಂತ್ರಿ ಕಾಯಕ ವೃತ್ತಿ ಮಾಡುತ್ತಿರುವ ಕುಟುಂಬಗಳು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ.</p>.<p>ಸರ್ಕಾರದ ವಿಶೇಷ ಪ್ಯಾಕೇಜ್ನಲ್ಲಿ ತಮ್ಮ ವೃತ್ತಿಯನ್ನು ಕಡೆಗಣಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಂದು ಶುಭ ಸಮಾರಂಭಗಳಿಗೆ ನಾವುಗಳು ಮಾತ್ರ ನೆನಪಾಗುತ್ತೇವೆ. ಆದರೆ ನಮಗೆ ತೊಂದರೆಯಾದಾಗ ಯಾರು ಇಲ್ಲವಾ ಎಂದು ಬ್ಯಾಂಜೋ ಮುಖ್ಯಸ್ಥ ಹಣಮಂತ ಭಜಂತ್ರಿ ಹೇಳುತ್ತಾರೆ.</p>.<p>ಮದುವೆ ಸಮಾರಂಭಗಳಲ್ಲಿ ,ಶುಭ ಕಾರ್ಯಕ್ರಮಗಳಲ್ಲಿ ವಾದ್ಯಮೇಳದವರಿಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಆದರೆ ಕೋವಿಡ್ ಮಾರ್ಗಸೂಚಿಗಳಿಂದಾಗಿ ನಮಗೆ ತೊಂದರೆಯಾಗಿದೆ ಎನ್ನುತ್ತಾರೆ ಅವರು.</p>.<p>ಬ್ಯಾಂಜೋ ವಾದಕರ ಚಾಲಕರು, ಕಲಾವಿದರು ಇಂದು ನಿರ್ಗತಿಕರಾಗಿದ್ದು, ಅವರ ಕುಟುಂಬ ಕಷ್ಟದಲ್ಲಿದೆ ಎಂದು ಮೌನೇಶ ಭಜಂತ್ರಿ ಹೇಳಿದರು.</p>.<p>ಮದುವೆ ಶುಭ ಸಮಾರಂಭಗಳಲ್ಲಿ ಒಂದು ಮದುವೆಗೆ ₹ 10 ಸಾವಿರದಿಂದ ₹ 12 ಸಾವಿರ ಹಣ ಪಡೆಯುತ್ತಿದ್ದೇವು. ಆದರೆ ಪ್ರಸ್ತುತ ಬ್ಯಾಂಜೋ ವಾದಕರಿಲ್ಲದೇ ಮದುವೆ ಮಾಡುತ್ತಿದ್ದು, ನಮಗೆ ತೊಂದರೆಯಾಗಿದೆ ಎಂದು ಹಿರಿಯ ಮುಖಂಡ ರಮೇಶ ಹೂಗಾರ ಹೇಳಿದರು.</p>.<p>‘ನಮಗೆ ಸರ್ಕಾರ ಸಹಾಯಧನ ನೀಡಬೇಕು ಎಂದು ಯಲ್ಲಪ್ಪ ಭಜಂತ್ರಿ, ಸೋಮನಿಂಗಪ್ಪ ಭಜಂತ್ರಿ, ರಮೇಶ ಹೂಗಾರ, ಹಣಮಂತ ಭಜಂತ್ರಿ, ಪರಮಣ್ಣ ಭಜಂತ್ರಿ ಹಾಗೂ ನಾಗನಾಥ ಸಾಳಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>