<p><strong>ಯಾದಗಿರಿ: </strong>‘ಅಸ್ಥಿ ಸಾಂದ್ರತಾ (ಮೂಳೆ) ಮಾಪಕ ಉಚಿತ ತಪಾಸಣೆ ಶಿಬಿರ ಅಕ್ಟೋಬರ್ 20ರಂದು ವಿಆರ್ಬಿ ಮುದ್ನಾಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆವರೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಆಸ್ಪತ್ರೆಯ ಡಾ.ವೀರಬಸವಂತರಡ್ಡಿ ಮುದ್ನಾಳ ತಿಳಿಸಿದರು.</p>.<p>‘ಅಂದು ವಿಶ್ವ ಆಸ್ಟಿಯೊಪೊರೋಸಿಸ್ (OSTEOPOROSIS) ದಿನದ ಅಂಗವಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ. 35 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು ತಪಾಸಣೆ ಮಾಡಿಕೊಳ್ಳಬಹುದು‘ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>‘ಬೆನ್ನು, ಸೊಂಟ, ಮೊಣಕಾಲು, ಸ್ನಾಯು ನೋವು ಇರುವವರಿಗೆ ಅತ್ಯಾಧುನಿಕ ಬಿಎಂಡಿ ಯಂತ್ರದಿಂದ ತಪಾಸಣೆ ಮಾಡಲಾಗುವುದು. ಜೊತೆಗೆ ಒಂದು ವಾರದ ಮಟ್ಟಿಗೆ ಉಚಿತ ಔಷಧಿ ವಿತರಿಸಲಾಗುವುದು. ನಿರ್ಲಕ್ಷ್ಯ ಮಾಡಿದರೆ ಮೂಳೆ ಸವೆತ ಅಥವಾ ಮುರಿತಕ್ಕೆ ಕಾರಣವಾಗಬಹುದು. ನಗರದ ಶುಭಂ ಪೆಟ್ರೋಲ್ ಬಂಕ್ ಹಿಂಭಾಗದ ಸಜ್ಜಲಶ್ರೀ ನಗರದಲ್ಲಿ ಆಸ್ಪತ್ರೆ ಇದ್ದು,ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.</p>.<p>ತಜ್ಞ ವೈದ್ಯ ಡಾ.ಸುನೀಲ್ ಮುಕನೂರ ಮಾತನಾಡಿ, ‘ವಯಸ್ಸು ಆದಂತೆ ಮೂಳೆ ಸಾಂದ್ರತೆ ಕಳೆದುಕೊಳ್ಳುತ್ತದೆ. ಇದನ್ನು ಕೂಡ ರಕ್ತಪರೀಕ್ಷೆ, ರಕ್ತದೊತ್ತಡ, ಮಧುಮೇಹದಂತೆ ಆಗಾಗ ಪರೀಕ್ಷೆ ಮಾಡಿಕೊಳ್ಳಬೇಕು. ಇದರಿಂದ ಮೂಳೆ ಉಳುಕುವುದು ತಪ್ಪುತ್ತದೆ. ಇದೊಂದು ಮಾರಕ ಕಾಯಿಲೆಯಾಗಿದೆ’ ಎಂದರು.</p>.<p>‘ವಿಟಮಿನ್ ಡಿ ಕೊರತೆಯಿಂದ ಮೂಳೆ ಸವೆತ ಉಂಟಾಗುತ್ತದೆ. ಸೂಕ್ತ ತಪಾಸಣೆ ಮಾಡಕೊಳ್ಳುವುದರಿಂದ ಇದನ್ನು ತಪ್ಪಿಸಬಹುದು’ ಎಂದರು.</p>.<p>ಈ ವೇಳೆ ಡಾ.ಬಸವರಾಜ ನರಸಣಗಿ, ಡಾ.ಅಮೋಘ ನರಸಣಗಿ, ಮಾರುತಿ ಕಲಾಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>‘ಅಸ್ಥಿ ಸಾಂದ್ರತಾ (ಮೂಳೆ) ಮಾಪಕ ಉಚಿತ ತಪಾಸಣೆ ಶಿಬಿರ ಅಕ್ಟೋಬರ್ 20ರಂದು ವಿಆರ್ಬಿ ಮುದ್ನಾಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆವರೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಆಸ್ಪತ್ರೆಯ ಡಾ.ವೀರಬಸವಂತರಡ್ಡಿ ಮುದ್ನಾಳ ತಿಳಿಸಿದರು.</p>.<p>‘ಅಂದು ವಿಶ್ವ ಆಸ್ಟಿಯೊಪೊರೋಸಿಸ್ (OSTEOPOROSIS) ದಿನದ ಅಂಗವಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ. 35 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು ತಪಾಸಣೆ ಮಾಡಿಕೊಳ್ಳಬಹುದು‘ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>‘ಬೆನ್ನು, ಸೊಂಟ, ಮೊಣಕಾಲು, ಸ್ನಾಯು ನೋವು ಇರುವವರಿಗೆ ಅತ್ಯಾಧುನಿಕ ಬಿಎಂಡಿ ಯಂತ್ರದಿಂದ ತಪಾಸಣೆ ಮಾಡಲಾಗುವುದು. ಜೊತೆಗೆ ಒಂದು ವಾರದ ಮಟ್ಟಿಗೆ ಉಚಿತ ಔಷಧಿ ವಿತರಿಸಲಾಗುವುದು. ನಿರ್ಲಕ್ಷ್ಯ ಮಾಡಿದರೆ ಮೂಳೆ ಸವೆತ ಅಥವಾ ಮುರಿತಕ್ಕೆ ಕಾರಣವಾಗಬಹುದು. ನಗರದ ಶುಭಂ ಪೆಟ್ರೋಲ್ ಬಂಕ್ ಹಿಂಭಾಗದ ಸಜ್ಜಲಶ್ರೀ ನಗರದಲ್ಲಿ ಆಸ್ಪತ್ರೆ ಇದ್ದು,ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.</p>.<p>ತಜ್ಞ ವೈದ್ಯ ಡಾ.ಸುನೀಲ್ ಮುಕನೂರ ಮಾತನಾಡಿ, ‘ವಯಸ್ಸು ಆದಂತೆ ಮೂಳೆ ಸಾಂದ್ರತೆ ಕಳೆದುಕೊಳ್ಳುತ್ತದೆ. ಇದನ್ನು ಕೂಡ ರಕ್ತಪರೀಕ್ಷೆ, ರಕ್ತದೊತ್ತಡ, ಮಧುಮೇಹದಂತೆ ಆಗಾಗ ಪರೀಕ್ಷೆ ಮಾಡಿಕೊಳ್ಳಬೇಕು. ಇದರಿಂದ ಮೂಳೆ ಉಳುಕುವುದು ತಪ್ಪುತ್ತದೆ. ಇದೊಂದು ಮಾರಕ ಕಾಯಿಲೆಯಾಗಿದೆ’ ಎಂದರು.</p>.<p>‘ವಿಟಮಿನ್ ಡಿ ಕೊರತೆಯಿಂದ ಮೂಳೆ ಸವೆತ ಉಂಟಾಗುತ್ತದೆ. ಸೂಕ್ತ ತಪಾಸಣೆ ಮಾಡಕೊಳ್ಳುವುದರಿಂದ ಇದನ್ನು ತಪ್ಪಿಸಬಹುದು’ ಎಂದರು.</p>.<p>ಈ ವೇಳೆ ಡಾ.ಬಸವರಾಜ ನರಸಣಗಿ, ಡಾ.ಅಮೋಘ ನರಸಣಗಿ, ಮಾರುತಿ ಕಲಾಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>