‘ಬೆನ್ನು, ಸೊಂಟ, ಮೊಣಕಾಲು, ಸ್ನಾಯು ನೋವು ಇರುವವರಿಗೆ ಅತ್ಯಾಧುನಿಕ ಬಿಎಂಡಿ ಯಂತ್ರದಿಂದ ತಪಾಸಣೆ ಮಾಡಲಾಗುವುದು. ಜೊತೆಗೆ ಒಂದು ವಾರದ ಮಟ್ಟಿಗೆ ಉಚಿತ ಔಷಧಿ ವಿತರಿಸಲಾಗುವುದು. ನಿರ್ಲಕ್ಷ್ಯ ಮಾಡಿದರೆ ಮೂಳೆ ಸವೆತ ಅಥವಾ ಮುರಿತಕ್ಕೆ ಕಾರಣವಾಗಬಹುದು. ನಗರದ ಶುಭಂ ಪೆಟ್ರೋಲ್ ಬಂಕ್ ಹಿಂಭಾಗದ ಸಜ್ಜಲಶ್ರೀ ನಗರದಲ್ಲಿ ಆಸ್ಪತ್ರೆ ಇದ್ದು,ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.