<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ತಾಲ್ಲೂಕಿನ ಕೇಶ್ವಾರ ಗ್ರಾಮದಲ್ಲಿ ಬುಧವಾರ (ಮೇ 10) ರಂದು ಮಧ್ಯಾಹ್ನದ ವೇಳೆ ಬಿಜೆಪಿ, ಜೆಡಿಎಸ್ ನಡುವೆ ಕಲ್ಲು ತೂರಾಟದ ಘಟನೆಯಿಂದ ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ಸ್ಥಿತಿಯಿದೆ.</p>.<p>‘ಶುಕ್ರವಾರ ಬೆಳಿಗ್ಗೆ (ಮೇ 12) ಗ್ರಾಮದ ಯುವಕನೊಬ್ಬ ಬಹಿರ್ದೆಸೆಗೆ ಹೋದಲ್ಲಿ ನಾಲ್ಕು ಜನ ಹಲ್ಲೆ ನಡೆಸಿ ತಲೆ ಹೊಡೆದಿದ್ದು, ಇದರಿಂದ ಕೇಶ್ವಾರದಲ್ಲಿ ಮತ್ತೆ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.</p><p>ಗ್ರಾಮದಲ್ಲಿ ಉದ್ವಿಗ್ನತೆಯಿಂದ ಪರಿಸ್ಥಿತಿ ವಿಕೋಪಗೊಳ್ಳದಂತೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಶುಕ್ರವಾರ ನಡೆದ 'ಘಟನೆಗೆ ಸಂಬಂಧಿಸಿ ಎಂಟು ಜನರನ್ನು ಪೊಲೀಸ್ ವಶಕ್ಕೆ ಪಡೆದು, ವಿಚಾರಿಸಲಾಗುತ್ತಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿದವು.</p><p>‘ಚುನಾವಣೆ ಸಮಯ ಮೂಡಿದ ಕಾವಿನಿಂದ ಗ್ರಾಮದಲ್ಲಿನ್ನೂ ಒಳ ಬೇಗುದಿ ಮುಂದುವರೆದಿದೆ. ಇದು ಗ್ರಾಮದಲ್ಲಿ ಪ್ರಕ್ಷುಬ್ಧತೆ ಹೆಚ್ಚಿಸುತ್ತಿದ್ದು, ಯಾವಾಗ ಮತ್ತೆ ಭುಗಿಲೇಳಲಿದೆಯೋ ತಿಳಿಯದಂತಾಗಿದೆ. ಇದು ಗ್ರಾಮವನ್ನು ಇಬ್ಬಾಗವಾಗಿಸಿ, ಹಿಂಸಾಚಾರಗಳು ಮರುಕಳಿಸದಂತೆ ಈಗಲೇ ಸರಿಪಡಿಸಿದರೆ’ ಉತ್ತಮ ಎಂದು ಕೆಲ ಗ್ರಾಮಸ್ಥರು ಅಳಲು ತೋಡಿಕೊಂಡರು.</p>.<h2>ಸ್ವಯಂಪ್ರೇರಿತ ಪ್ರಕರಣ ದಾಖಲು</h2>.<p>ಬುಧವಾರ ಕೇಶ್ವಾರ ಗ್ರಾಮದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಹತ್ತು ಜನರ ವಿರುದ್ಧ ಗುರುವಾರ ಸ್ವಯಂಪ್ರೇರಿತ ಪ್ರಕರಣ (ಸು–ಮೋಟೊ) ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ತಾಲ್ಲೂಕಿನ ಕೇಶ್ವಾರ ಗ್ರಾಮದಲ್ಲಿ ಬುಧವಾರ (ಮೇ 10) ರಂದು ಮಧ್ಯಾಹ್ನದ ವೇಳೆ ಬಿಜೆಪಿ, ಜೆಡಿಎಸ್ ನಡುವೆ ಕಲ್ಲು ತೂರಾಟದ ಘಟನೆಯಿಂದ ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ಸ್ಥಿತಿಯಿದೆ.</p>.<p>‘ಶುಕ್ರವಾರ ಬೆಳಿಗ್ಗೆ (ಮೇ 12) ಗ್ರಾಮದ ಯುವಕನೊಬ್ಬ ಬಹಿರ್ದೆಸೆಗೆ ಹೋದಲ್ಲಿ ನಾಲ್ಕು ಜನ ಹಲ್ಲೆ ನಡೆಸಿ ತಲೆ ಹೊಡೆದಿದ್ದು, ಇದರಿಂದ ಕೇಶ್ವಾರದಲ್ಲಿ ಮತ್ತೆ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.</p><p>ಗ್ರಾಮದಲ್ಲಿ ಉದ್ವಿಗ್ನತೆಯಿಂದ ಪರಿಸ್ಥಿತಿ ವಿಕೋಪಗೊಳ್ಳದಂತೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಶುಕ್ರವಾರ ನಡೆದ 'ಘಟನೆಗೆ ಸಂಬಂಧಿಸಿ ಎಂಟು ಜನರನ್ನು ಪೊಲೀಸ್ ವಶಕ್ಕೆ ಪಡೆದು, ವಿಚಾರಿಸಲಾಗುತ್ತಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿದವು.</p><p>‘ಚುನಾವಣೆ ಸಮಯ ಮೂಡಿದ ಕಾವಿನಿಂದ ಗ್ರಾಮದಲ್ಲಿನ್ನೂ ಒಳ ಬೇಗುದಿ ಮುಂದುವರೆದಿದೆ. ಇದು ಗ್ರಾಮದಲ್ಲಿ ಪ್ರಕ್ಷುಬ್ಧತೆ ಹೆಚ್ಚಿಸುತ್ತಿದ್ದು, ಯಾವಾಗ ಮತ್ತೆ ಭುಗಿಲೇಳಲಿದೆಯೋ ತಿಳಿಯದಂತಾಗಿದೆ. ಇದು ಗ್ರಾಮವನ್ನು ಇಬ್ಬಾಗವಾಗಿಸಿ, ಹಿಂಸಾಚಾರಗಳು ಮರುಕಳಿಸದಂತೆ ಈಗಲೇ ಸರಿಪಡಿಸಿದರೆ’ ಉತ್ತಮ ಎಂದು ಕೆಲ ಗ್ರಾಮಸ್ಥರು ಅಳಲು ತೋಡಿಕೊಂಡರು.</p>.<h2>ಸ್ವಯಂಪ್ರೇರಿತ ಪ್ರಕರಣ ದಾಖಲು</h2>.<p>ಬುಧವಾರ ಕೇಶ್ವಾರ ಗ್ರಾಮದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಹತ್ತು ಜನರ ವಿರುದ್ಧ ಗುರುವಾರ ಸ್ವಯಂಪ್ರೇರಿತ ಪ್ರಕರಣ (ಸು–ಮೋಟೊ) ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>