ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಯಾದಗಿರಿ: ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ನಿವೇಶನಗಳು ವಿವಿಧ ಸಮುದಾಯಗಳಿಗೆ ಹಂಚಿಕೆ

Published : 13 ಸೆಪ್ಟೆಂಬರ್ 2025, 5:18 IST
Last Updated : 13 ಸೆಪ್ಟೆಂಬರ್ 2025, 5:18 IST
ಫಾಲೋ ಮಾಡಿ
Comments
ನಮ್ಮ ಕ್ಷೇತ್ರ ಸರ್ವಜನಾಂಗದ ಶಾಂತಿ ತೋಟವಾಗಿದೆ. ಎಲ್ಲಾ ಸಮುದಾಯಗಳಿಗೆ ಸಮಾನ ಹಂಚಿಕೆಯನ್ನು ಅನುದಾನ ಮಾಡಿದ್ದೇನೆ. ಜನಪರ ಕೆಲಸಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕು.
- ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
‘ಸಮುದಾಯ ಭವನ ಟ್ರಸ್ಟಿಗೆ ನೀಡಬಾರದು’
ಆಯಾ ಸಮುದಾಯದ ಪಾಲಿಗೆ ಪವಿತ್ರ ಸ್ಥಳದಂತೆ ಭಾವಿಸಿ ಸಮುದಾಯ ಭವನವನ್ನು ಎಂದಿಗೂ ಟ್ರಸ್ಟ್ ವ್ಯಾಪ್ತಿಗೆ ನೀಡಬಾರದು. ಇದರಿಂದ ಕೆಲ ವ್ಯಕ್ತಿಗಳ ಸ್ವತ್ತು ಆಗುತ್ತದೆ. ಸಮುದಾಯ ಭವನದಿಂದ ಬಡ ಜನತೆಗೆ ಮತ್ತು ಧಾರ್ಮಿಕ ಸಭೆ ಸಮಾರಂಭ ನಡೆಸಲು ಅನುಕೂಲ ಆಗಬೇಕು. ಸಮುದಾಯ ನಿರ್ಮಾಣಗೊಳ್ಳುವುದರಿಂದ ಗರ್ವದ ಪ್ರತೀಕವಾಗಿ ನಮ್ಮದು ಎಂಬ ಭಾವನೆ ಬರುತ್ತದೆ. ಅದರ ನಿರ್ವಹಣೆ ಮಾಡುವುದು ದೊಡ್ಡ ಸವಾಲಿನ ಕೆಲಸ’ ಎನ್ನುತ್ತಾರೆ ಮುಸ್ಲಿಂ ಸಮದಾಯದ ಮುಖಂಡ ಯೂಸೂಫ್ ಸಿದ್ದಿಕಿ.
‘ಸಭೆ ನಡೆಸಲು ಬಳಕೆಯಾಗಲಿ’
‘ನಗರದ ಪ್ರದೇಶದಲ್ಲಿ ದುಬಾರಿ ಬಾಡಿಗೆ ನೀಡಿ ಸಮುದಾಯದ ಸಭೆ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸಲು ತೊಂದರೆ ಆಗುತ್ತದೆ. ಸಮುದಾಯ ಭವನದ ನಿರ್ಮಾಣದಿಂದ ಅಂತಹ ತಾಪತ್ರೆ ತಪ್ಪುತ್ತದೆ. ನಮ್ಮದು ಎಂಬ ಭಾವನೆಯಿಂದ ಆಯಾ ಸಮದಾಯದವರು ಒಗ್ಗೂಡಲಿಕ್ಕೆ ಉತ್ತಮ ವೇದಿಕೆಯೂ ಆಗುತ್ತದೆ. ನಿರ್ವಹಣೆಯು ಸಜ್ಜನರ ಕೈಯಲ್ಲಿ ಇದ್ದರೆ ಉತ್ತಮವಾಗಿ ಬೆಳೆವಣಿಗೆ ಆಗುತ್ತದೆ. ಅದನ್ನು ವ್ಯಾಪಾರ ಮನೋಭಾವದಿಂದ ನೋಡಬಾರದು’ ಎನ್ನುತ್ತಾರೆ ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT