<p>ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸುತ್ತಮುತ್ತ ಬೆಳೆದಿರುವ ಹತ್ತಿ ಬೆಳೆಗೆ ಕಂಬಳಿ ಹುಳುವಿನ ಕಾಟ ಹೆಚ್ಚಾಗಿದ್ದು, ರೈತರು ಕಂಗಾಲಾಗಿದ್ದಾರೆ.</p>.<p>ಹತ್ತಿ ಬೆಳೆಯ ಹೂವು, ಹಣ್ಣು, ಬೀಜಕೋಶ, ಎಲೆಯನ್ನು ಕೀಟ ತಿನ್ನುವುದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ. ಇದರಿಂದ ಹುಳು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಳುವರಿ ಕಡಿಮೆ ಆಗಲಿದೆ ಎನ್ನುತ್ತಾರೆ ರೈತರು.</p>.<p>ಕಂಬಳಿ ಹುಳುವಿಗೆ ಔಷಧ ಸಿಂಪಡಣೆ ಮಾಡಿದರೂ ಹತೋಟಿಗೆ ಬರುತ್ತಿಲ್ಲ. ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿದರೆ ಸಮರ್ಪಕವಾದ ಮಾಹಿತಿ ಒದಗಿಸುತ್ತಿಲ್ಲ. ರೈತರ ಸಮಸ್ಯೆಯನ್ನು ಕೆಳುವವರೇ ಇಲ್ಲದಂತಾಗಿದೆ ಎನ್ನುತ್ತಾರೆ ರೈತರು.</p>.<p>ಗುರುಗುಂಟಾ ಹೋಬಳಿ ವ್ಯಾಪ್ತಿಯ ಹಟ್ಟಿ, ಗುರುಗುಂಟಾ, ಮೇದಿನಾಪುರ, ಕೋಠಾ, ಮಾಚನೂರು, ಯಲಗಟ್ಟಾ, ಪೈದೊಡ್ಡಿ, ಯರಜಂತಿ, ನಿಲೋಗಲ್, ರೋಡಲಬಂಡ, ಗೌಡೂರು, ವೀರಾಪುರ, ಆನ್ವರಿ, ಚಿಕ್ಕನಗನೂರು, ಚುಕನಟ್ಟಿ, ಹಿರೇನಗನೂರು, ಹಿರೇ ಹೆಸರೂರು ಗ್ರಾಮಗಳ ರೈತರು ಈ ಬಾರಿ ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದಾರೆ. ಆದರೆ, ಬೆಳೆಗೆ ಕಂಬಳಿಹುಳು ಕಾಟ ಹೆಚ್ಚಾಗಿದೆ.</p>.<p>ಕಂಬಳಿ ಹುಳು ಚಿಕ್ಕ ಕಾಯಿಗಳನ್ನು ತಿಂದು ಹಾಕಿದೆ. ಇದೇ ರೀತಿ ಮುಂದುವರಿದರೆ ಫಲ ಬರುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗಲಿದೆ ಎನ್ನುತ್ತಾರೆ ಈ ಭಾಗದ ರೈತರು.</p>.<p>ದೂಳು ರೂಪದ ಕೀಟನಾಶಕವಾದ 0.4 ಫೆನ್ವಾಲೆರೇಟ್ ಅಥವಾ ಶೇ 5ರಷ್ಟು ಮೆಲಾಥಿಯನ್ ಪುಡಿಯನ್ನು ಎಕರೆಗೆ 25 ಕೆ.ಜಿಯಷ್ಟು ದೂಳಿಸಿದರೆ ಹುಳುಗಳನ್ನು ನಾಶ ಮಾಡಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸುತ್ತಮುತ್ತ ಬೆಳೆದಿರುವ ಹತ್ತಿ ಬೆಳೆಗೆ ಕಂಬಳಿ ಹುಳುವಿನ ಕಾಟ ಹೆಚ್ಚಾಗಿದ್ದು, ರೈತರು ಕಂಗಾಲಾಗಿದ್ದಾರೆ.</p>.<p>ಹತ್ತಿ ಬೆಳೆಯ ಹೂವು, ಹಣ್ಣು, ಬೀಜಕೋಶ, ಎಲೆಯನ್ನು ಕೀಟ ತಿನ್ನುವುದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ. ಇದರಿಂದ ಹುಳು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಳುವರಿ ಕಡಿಮೆ ಆಗಲಿದೆ ಎನ್ನುತ್ತಾರೆ ರೈತರು.</p>.<p>ಕಂಬಳಿ ಹುಳುವಿಗೆ ಔಷಧ ಸಿಂಪಡಣೆ ಮಾಡಿದರೂ ಹತೋಟಿಗೆ ಬರುತ್ತಿಲ್ಲ. ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿದರೆ ಸಮರ್ಪಕವಾದ ಮಾಹಿತಿ ಒದಗಿಸುತ್ತಿಲ್ಲ. ರೈತರ ಸಮಸ್ಯೆಯನ್ನು ಕೆಳುವವರೇ ಇಲ್ಲದಂತಾಗಿದೆ ಎನ್ನುತ್ತಾರೆ ರೈತರು.</p>.<p>ಗುರುಗುಂಟಾ ಹೋಬಳಿ ವ್ಯಾಪ್ತಿಯ ಹಟ್ಟಿ, ಗುರುಗುಂಟಾ, ಮೇದಿನಾಪುರ, ಕೋಠಾ, ಮಾಚನೂರು, ಯಲಗಟ್ಟಾ, ಪೈದೊಡ್ಡಿ, ಯರಜಂತಿ, ನಿಲೋಗಲ್, ರೋಡಲಬಂಡ, ಗೌಡೂರು, ವೀರಾಪುರ, ಆನ್ವರಿ, ಚಿಕ್ಕನಗನೂರು, ಚುಕನಟ್ಟಿ, ಹಿರೇನಗನೂರು, ಹಿರೇ ಹೆಸರೂರು ಗ್ರಾಮಗಳ ರೈತರು ಈ ಬಾರಿ ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದಾರೆ. ಆದರೆ, ಬೆಳೆಗೆ ಕಂಬಳಿಹುಳು ಕಾಟ ಹೆಚ್ಚಾಗಿದೆ.</p>.<p>ಕಂಬಳಿ ಹುಳು ಚಿಕ್ಕ ಕಾಯಿಗಳನ್ನು ತಿಂದು ಹಾಕಿದೆ. ಇದೇ ರೀತಿ ಮುಂದುವರಿದರೆ ಫಲ ಬರುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗಲಿದೆ ಎನ್ನುತ್ತಾರೆ ಈ ಭಾಗದ ರೈತರು.</p>.<p>ದೂಳು ರೂಪದ ಕೀಟನಾಶಕವಾದ 0.4 ಫೆನ್ವಾಲೆರೇಟ್ ಅಥವಾ ಶೇ 5ರಷ್ಟು ಮೆಲಾಥಿಯನ್ ಪುಡಿಯನ್ನು ಎಕರೆಗೆ 25 ಕೆ.ಜಿಯಷ್ಟು ದೂಳಿಸಿದರೆ ಹುಳುಗಳನ್ನು ನಾಶ ಮಾಡಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>