ತಾಲ್ಲೂಕಿನ ಚೌಡೇಶ್ವರಿಹಾಳ, ಕರ್ನಾಳ, ಹಾಲಗೇರಿ, ಶಖಾಪುರ ಗ್ರಾಮಕ್ಕೆ ತಂಡ ಭೇಟಿ ನೀಡಿ ಲಸಿಕೆ ನಿರಾಕರಿಸುತ್ತಿರುವ 200 ಜನರ ಪೈಕಿ 20 ಜನರಿಗೆ ಲಸಿಕೆ ಹಾಕಲು ಯಶಸ್ವಿಯಾಯಿತು. ಉಳಿದವರು ಬೇರೆ ಊರಿಗೆ ಮತ್ತು ಹೊಲಕ್ಕೆ ಹೋಗಿದ್ದರು. ಶೀಘ್ರದಲ್ಲಿ ಉಳಿದವರಿಗೆ ಲಸಿಕೆ ಹಾಕಿಸಿ ಮತ್ತು ಗುಳೆ ಹೋದ ಕಾರ್ಮಿಕರು ಲಸಿಕೆ ಹಾಕಿಸಿಕೊಂಡ ಬಗ್ಗೆ ಆಯಾ ನಗರದ ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ತರಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.