ಸತ್ತ ಆಕಳಿನಿಂದ ದುರ್ವಾಸನೆ ಬರುತ್ತಿದ್ದು, ಸುತ್ತಲಿನ ಪರಿಸರವು ಗಬ್ಬು ನಾರುತ್ತಿದೆ. ಹಾಗೆಯೇ ಜೋಳದಡಗಿ, ಕೊಂಗಂಡಿ ಹಾಗೂ ಇನ್ನಿತರ ಗ್ರಾಮದ ಮಹಿಳೆಯರು ಬಟ್ಟೆ ಒಗೆಯಲು ಹಾಗೂ ಕೆಲವೊಂದು ವೇಳೆ ಕುಡಿಯಲು ನೀರನ್ನು ಬಳಕೆ ಮಾಡುತ್ತಾರೆ. ಮೊಸಳೆಗಳು ಮಧ್ಯಾಹ್ನ ವೇಳೆ ನದಿಯ ತಟದಲ್ಲಿ ಬಂದು ಬಿಸಿಲಿಗೆ ಮೈಯೊಡ್ಡಿ ನೀರಿಗೆ ಇಳಿಯುವ ಜಾನುವಾರು ಮೇಲೆ ದಾಳಿ ಮಾಡಲು ಹೊಂಚುಹಾಕಿ ಕುಳಿತುಕೊಳ್ಳತ್ತವೆ. ‘ಕೃಷ್ಣಾ ನದಿಯಲ್ಲಿ ಸಾಕಷ್ಟು ಮೊಸಳೆಗಳಿದ್ದು, ಯಾವುದೇ ನಾಮಫಲಕವಾಗಲಿ ಹಾಗೂ ಎಚ್ಚರಿಕೆ ಫಲಕವಾಗಲಿ ಸಂಬಂಧಪಟ್ಟ ಇಲಾಖೆಯವರು ಅಳವಡಿಸಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.