<p><strong>ವಡಗೇರಾ</strong>: ತಾಲ್ಲೂಕಿನ ಭೀಮಾ ಬ್ರಿಡ್ಜ್ ಕಂ ಬ್ಯಾರೇಜ್ ಸುತ್ತಮುತ್ತ ಹಾಗೂ ವಡಗೇರಾ ಕ್ರಾಸ್ ದಿಂದ ನಾಯ್ಕಲ್ ಗ್ರಾಮದ ಬೈಪಾಸ್ ಹೆದ್ದಾರಿವರೆಗೆ ಮೀನುಗಳು, ಕ್ರಿಮಿಕೀಟಗಳು ಜಲಚರಗಳು ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿರುವುದರಿಂದ ರಾಜ್ಯ ಹೆದ್ದಾರಿ ನಾರುತ್ತಿದೆ ಎಂದು ಗ್ರಾಮಸ್ಥರು, ಪ್ರಯಾಣಿಕರು ದೂರಿದ್ದಾರೆ.</p>.<p>ಭೀಮಾ ನದಿಯ ಪ್ರವಾಹ ಇಳಿಮುಖವಾಗುತ್ತಿರುವ ಹಿನ್ನಲ್ಲೆ ಜಮೀನುಗಳಲ್ಲಿ ಹಾಗೂ ಹೆದ್ದಾರಿಯ ಸುತ್ತಮುತ್ತ ಜಲಚರಗಳು ಸತ್ತು ಬಿದ್ದಿರುವುದರಿಂದ ರೋಗ ಹರಡುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.</p>.<p>ಯಾದಗಿರಿ-ಶಹಾಪುರ ಹೆದ್ದಾರಿಯ ಮೇಲೆ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಮೂಗಿಗೆ ಕರವಸ್ತ್ರವನ್ನು ಕಟ್ಟಿಕೊಂಡು ಸಂಚಾರ ಮಾಡುವಂತಾಗಿದೆ. ಪ್ರವಾಹದಲ್ಲಿ ಜಲಚರಗಳು ಹರಿದು ಬಂದಿದ್ದವು. ಈಗ ಪ್ರವಾಹ ಇಳಿಮುಖವಾದ ಹಿನ್ನಲೆ ಸತ್ತಿವೆ. ಇದರಿಂದ ವಾಸನೆ ಬರುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.</p>.<p>ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದ ಗ್ರಾಪಂಗಳಿಗೆ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ವಾತಾವರಣ ಸ್ವಚ್ಚಗೊಳಿಸಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ</strong>: ತಾಲ್ಲೂಕಿನ ಭೀಮಾ ಬ್ರಿಡ್ಜ್ ಕಂ ಬ್ಯಾರೇಜ್ ಸುತ್ತಮುತ್ತ ಹಾಗೂ ವಡಗೇರಾ ಕ್ರಾಸ್ ದಿಂದ ನಾಯ್ಕಲ್ ಗ್ರಾಮದ ಬೈಪಾಸ್ ಹೆದ್ದಾರಿವರೆಗೆ ಮೀನುಗಳು, ಕ್ರಿಮಿಕೀಟಗಳು ಜಲಚರಗಳು ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿರುವುದರಿಂದ ರಾಜ್ಯ ಹೆದ್ದಾರಿ ನಾರುತ್ತಿದೆ ಎಂದು ಗ್ರಾಮಸ್ಥರು, ಪ್ರಯಾಣಿಕರು ದೂರಿದ್ದಾರೆ.</p>.<p>ಭೀಮಾ ನದಿಯ ಪ್ರವಾಹ ಇಳಿಮುಖವಾಗುತ್ತಿರುವ ಹಿನ್ನಲ್ಲೆ ಜಮೀನುಗಳಲ್ಲಿ ಹಾಗೂ ಹೆದ್ದಾರಿಯ ಸುತ್ತಮುತ್ತ ಜಲಚರಗಳು ಸತ್ತು ಬಿದ್ದಿರುವುದರಿಂದ ರೋಗ ಹರಡುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.</p>.<p>ಯಾದಗಿರಿ-ಶಹಾಪುರ ಹೆದ್ದಾರಿಯ ಮೇಲೆ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಮೂಗಿಗೆ ಕರವಸ್ತ್ರವನ್ನು ಕಟ್ಟಿಕೊಂಡು ಸಂಚಾರ ಮಾಡುವಂತಾಗಿದೆ. ಪ್ರವಾಹದಲ್ಲಿ ಜಲಚರಗಳು ಹರಿದು ಬಂದಿದ್ದವು. ಈಗ ಪ್ರವಾಹ ಇಳಿಮುಖವಾದ ಹಿನ್ನಲೆ ಸತ್ತಿವೆ. ಇದರಿಂದ ವಾಸನೆ ಬರುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.</p>.<p>ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದ ಗ್ರಾಪಂಗಳಿಗೆ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ವಾತಾವರಣ ಸ್ವಚ್ಚಗೊಳಿಸಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>