<p>ನಾರಾಯಣಪುರ: ಸ್ಥಳೀಯ ಗಜಾನನ ಯುವಕ ಮಂಡಳಿಯವರಿಂದ ವಿವಿದೆಢೆ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಬುಧವಾರ ರಾತ್ರಿ ಭಕ್ತ ಗಣದ ಮಧ್ಯೆ ಅದ್ದೂರಿ ಮೆರವಣಿಗೆಯೊಂದಿಗೆ ಪಟಾಕಿ ಸಿಡಿಸಿ, ಪ್ರಸಾದ ವಿತರಣೆಯೊಂದಿಗೆ ವಿಸರ್ಜನಾ ಕಾರ್ಯ ನೆರವೇರಿಸಲಾಯಿತು.</p>.<p>ಪ್ರತಿಷ್ಠಾಪಿತ ಗಣೇಶನಿಗೆ ಐದು ದಿನಗಳ ಕಾಲ ನಿತ್ಯ ಬೆಳಿಗ್ಗೆ, ಸಂಜೆ ವೇಳೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಲಾಯಿತು. </p>.<p>ಬಹುಮಾನ ವಿತರಣೆ: ಇಲ್ಲಿನ ಯುಕೆಪಿ ಕ್ಯಾಂಪ್ ಕಾಲೊನಿಯಲ್ಲಿ ಗಜಾನನ ಯುವಕ ಮಂಡಳಿಯವರು ಬುಧವಾರ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು</p>.<p>ಗ್ರಾ.ಪಂ ಅಧ್ಯಕ್ಷ ಹಣಮಂತ ಕಬಡರ, ಸುರೇಶ ನಾಯಕ, ಅಮರೇಶ ಕೋಳೂರ, ಉದಯ ವನಕುದರಿ, ಬಸವರಾಜ ಯಾದವಾಡ, ನಾಗರಾಜ ಹುಡೇದ, ಕಿರಣ ಜೋಶಿ, ಶರಣಗೌಡ, ಹುಸೇನ, ಚನ್ನಮಲ್ಲಪ್ಪ ಬಲಕುಂದಿ, ಸಂಗು ನಾವದಗಿ, ಅಮರೇಶ ತಾಳಿಕೋಟಿ, ಮಲ್ಲು ಕಂಬಳಿ ಸೇರಿದಂತೆ ಕಾಲೊನಿಯ ಗಜಾನನ ಭಕ್ತರು ಉಪಸ್ಥಿತರಿದ್ದರು.</p>.<p>ಗಣೇಶನ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಗಜಾನನ ಯುವಕ ಮಂಡಳಿಯಿಂದ ಅನ್ನಸಂತರ್ಪಣೆ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾರಾಯಣಪುರ: ಸ್ಥಳೀಯ ಗಜಾನನ ಯುವಕ ಮಂಡಳಿಯವರಿಂದ ವಿವಿದೆಢೆ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಬುಧವಾರ ರಾತ್ರಿ ಭಕ್ತ ಗಣದ ಮಧ್ಯೆ ಅದ್ದೂರಿ ಮೆರವಣಿಗೆಯೊಂದಿಗೆ ಪಟಾಕಿ ಸಿಡಿಸಿ, ಪ್ರಸಾದ ವಿತರಣೆಯೊಂದಿಗೆ ವಿಸರ್ಜನಾ ಕಾರ್ಯ ನೆರವೇರಿಸಲಾಯಿತು.</p>.<p>ಪ್ರತಿಷ್ಠಾಪಿತ ಗಣೇಶನಿಗೆ ಐದು ದಿನಗಳ ಕಾಲ ನಿತ್ಯ ಬೆಳಿಗ್ಗೆ, ಸಂಜೆ ವೇಳೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಲಾಯಿತು. </p>.<p>ಬಹುಮಾನ ವಿತರಣೆ: ಇಲ್ಲಿನ ಯುಕೆಪಿ ಕ್ಯಾಂಪ್ ಕಾಲೊನಿಯಲ್ಲಿ ಗಜಾನನ ಯುವಕ ಮಂಡಳಿಯವರು ಬುಧವಾರ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು</p>.<p>ಗ್ರಾ.ಪಂ ಅಧ್ಯಕ್ಷ ಹಣಮಂತ ಕಬಡರ, ಸುರೇಶ ನಾಯಕ, ಅಮರೇಶ ಕೋಳೂರ, ಉದಯ ವನಕುದರಿ, ಬಸವರಾಜ ಯಾದವಾಡ, ನಾಗರಾಜ ಹುಡೇದ, ಕಿರಣ ಜೋಶಿ, ಶರಣಗೌಡ, ಹುಸೇನ, ಚನ್ನಮಲ್ಲಪ್ಪ ಬಲಕುಂದಿ, ಸಂಗು ನಾವದಗಿ, ಅಮರೇಶ ತಾಳಿಕೋಟಿ, ಮಲ್ಲು ಕಂಬಳಿ ಸೇರಿದಂತೆ ಕಾಲೊನಿಯ ಗಜಾನನ ಭಕ್ತರು ಉಪಸ್ಥಿತರಿದ್ದರು.</p>.<p>ಗಣೇಶನ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಗಜಾನನ ಯುವಕ ಮಂಡಳಿಯಿಂದ ಅನ್ನಸಂತರ್ಪಣೆ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>