ಬೇಸಿಗೆ ಇರುವುದರಿಂದ ನೀರಿನ ಬವಣೆ ಹೆಚ್ಚುತ್ತಿದೆ. ದಿನ ಬೆಳಗಾದರೆ ಕೊಡ ಹಿಡಿದುಕೊಂಡು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ಮಹಿಳೆಯರು, ಮಕ್ಕಳು ಕೊಡ ಹಿಡಿದು ಹತ್ತಿರದ ಮುಸ್ಮಿಂ ಸಮಾಜದ ಸ್ಮಶಾನದಲ್ಲಿರುವ ಬೋರ್ನಿಂದ ನೀರು ತರುತ್ತಾರೆ. ಕೆಲವರು ಬೈಕ್ ಮೇಲೆ ತರುತ್ತಾರೆ. ಬೈಕ್ ಇಲ್ಲದ ಬಡವರು ಭಾರದ ಕೊಡಗಳನ್ನು ಹೊತ್ತು ದೂರ ಕ್ರಮಿಸಬೇಕಾದ ಸ್ಥಿತಿಯಿದೆ.