<p><strong>ಸುರಪುರ</strong>: ‘ನೀರಿನ ಕರ ವಸೂಲಿಯ ನೆಪದಲ್ಲಿ ಜನರಿಂದ ಹಗಲು ದರೋಡೆ ನಡೆಸುವ ಮೂಲಕ ಸುಲಿಗೆ ನಡೆಸಲಾಗುತ್ತಿದೆ’ ಎಂದು ಮಾಜಿ ಸಚಿವ ರಾಜೂಗೌಡ ಆರೋಪಿಸಿದರು.</p>.<p>ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರಂತರ ಕುಡಿಯವ ನೀರು ಸರಬರಾಜು ಯೋಜನೆಯನ್ನು ನನ್ನ ಅವಧಿಯಲ್ಲಿ ಸಾಕಷ್ಟು ಶ್ರಮಪಟ್ಟು ಜಾರಿಗೊಳಿಸಿದ್ದೆ. 5 ವರ್ಷ ನಿರ್ವಹಣೆ ಹೊಣೆ ಗುತ್ತಿಗೆದಾರನದ್ದು’ ಎಂದರು.</p>.<p>‘ಒಂದು ಕುಟುಂಬ ದಿನಕ್ಕೆ 300 ಲೀಟರ್ನಂತೆ ತಿಂಗಳಿಗೆ 8 ಸಾವಿರ ಲೀಟರ್ ಒಳಗಡೆ ಉಪಯೋಗಿಸುತ್ತಾರೆ. ಅಂದರೆ ತಿಂಗಳಿಗೆ ₹ 56 ದರ ನಿಗಮವೇ ನಿಗದಿ ಪಡಿಸಿದೆ. ಆದರೆ ಎರಡು ಪಟ್ಟು ಅಂದರೆ ₹ 120 ವಸೂಲಿ ಮಾಡುತ್ತಿರುವುದು ಸುಲಿಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಈ ಬಗ್ಗೆ ಜನರು ಜಾಗ್ರತೆ ವಹಿಸಬೇಕು. ₹120 ತುಂಬಬಾರದು. ನಮ್ಮ ಮೀಟರ್ ಎಷ್ಟು ತೋರಿಸುತ್ತಿದೆ ಅಷ್ಟನ್ನು ಮಾತ್ರ ತುಂಬುತ್ತೇವೆ ಎಂದು ಧೈರ್ಯವಾಗಿ ಹೇಳಬೇಕು ಎಂದು ಸಲಹೆ ನೀಡಿದರು.</p>.<p>‘ಸುರಪುರ– ಹುಣಸಗಿ ಬಸ್ ಸಂಚಾರ ತೆಗೆದು ಹಾಕಿರುವುದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿದ್ಯುತ್ ವ್ಯತ್ಯಯದಿಂದ ರೈತರು ಕಂಗಾಲಾಗಿದ್ದಾರೆ. ಟಿಸಿ ಸುಟ್ಟರೆ ತಿಂಗಳುಗಟ್ಟಲೆ ತಿರುಗಬೇಕಾದ ಪರಿಸ್ಥಿತಿ ಇದೆ. ಕನ್ನೆಳ್ಳಿ ಗ್ರಾಮದಲ್ಲಿ ಕಾಲುವೆಗೆ ನೀರು ಹರಿಸುತ್ತಿಲ್ಲ. ಈ ಬಗ್ಗೆ ಕೇಳಿದರೆ ಸಿಬ್ಬಂದಿ ರೈತರನ್ನು ಹೆದರಿಸುತ್ತಾರೆ. ಕ್ಷೇತ್ರದಲ್ಲಿ ಅರಾಜಕತೆ ಇದೆ’ ಎಂದು ದೂರಿದರು.</p>.<p>‘ವಸತಿ ಯೋಜನೆ ಅಡಿ ಡಿಡಿ ಸಲ್ಲಿಸಿದವರಿಗೆ ಖಂಡಿತವಾಗಿ ಮನೆ ಸಿಗಲಿವೆ. ರದ್ದು ಮಾಡುವ ಅಧಿಕಾರ ಯಾರಿಗೂ ಇಲ್ಲ. ಆಯ್ಕೆಯಾದ ಫಲಾನುಭವಿಗಳಿಗೆ ಶೀಘ್ರವೇ ಮನೆ ಸಿಗಲಿವೆ. ರದ್ದು ಮಾಡಿದರೆ ಫಲಾನುಭವಿಗಳೊಂದಿಗೆ ಧರಣಿ ಹಮ್ಮಿಕೊಳ್ಳುವೆ’ ಎಂದು ಎಚ್ಚರಿಸಿದರು.</p>.<p>ಮುಖಂಡರಾದ ರಾಜಾ ಹನುಮಪ್ಪನಾಯಕ ತಾತಾ, ವೇಣುಗೋಪಾಲ ನಾಯಕ ಜೇವರ್ಗಿ, ರಾಮನಗೌಡ ಸುಬೇದಾರ, ಪ್ರಕಾಶ ಸಜ್ಜನ್, ರಾಜಾ ರಂಗಪ್ಪನಾಯಕ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ‘ನೀರಿನ ಕರ ವಸೂಲಿಯ ನೆಪದಲ್ಲಿ ಜನರಿಂದ ಹಗಲು ದರೋಡೆ ನಡೆಸುವ ಮೂಲಕ ಸುಲಿಗೆ ನಡೆಸಲಾಗುತ್ತಿದೆ’ ಎಂದು ಮಾಜಿ ಸಚಿವ ರಾಜೂಗೌಡ ಆರೋಪಿಸಿದರು.</p>.<p>ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರಂತರ ಕುಡಿಯವ ನೀರು ಸರಬರಾಜು ಯೋಜನೆಯನ್ನು ನನ್ನ ಅವಧಿಯಲ್ಲಿ ಸಾಕಷ್ಟು ಶ್ರಮಪಟ್ಟು ಜಾರಿಗೊಳಿಸಿದ್ದೆ. 5 ವರ್ಷ ನಿರ್ವಹಣೆ ಹೊಣೆ ಗುತ್ತಿಗೆದಾರನದ್ದು’ ಎಂದರು.</p>.<p>‘ಒಂದು ಕುಟುಂಬ ದಿನಕ್ಕೆ 300 ಲೀಟರ್ನಂತೆ ತಿಂಗಳಿಗೆ 8 ಸಾವಿರ ಲೀಟರ್ ಒಳಗಡೆ ಉಪಯೋಗಿಸುತ್ತಾರೆ. ಅಂದರೆ ತಿಂಗಳಿಗೆ ₹ 56 ದರ ನಿಗಮವೇ ನಿಗದಿ ಪಡಿಸಿದೆ. ಆದರೆ ಎರಡು ಪಟ್ಟು ಅಂದರೆ ₹ 120 ವಸೂಲಿ ಮಾಡುತ್ತಿರುವುದು ಸುಲಿಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಈ ಬಗ್ಗೆ ಜನರು ಜಾಗ್ರತೆ ವಹಿಸಬೇಕು. ₹120 ತುಂಬಬಾರದು. ನಮ್ಮ ಮೀಟರ್ ಎಷ್ಟು ತೋರಿಸುತ್ತಿದೆ ಅಷ್ಟನ್ನು ಮಾತ್ರ ತುಂಬುತ್ತೇವೆ ಎಂದು ಧೈರ್ಯವಾಗಿ ಹೇಳಬೇಕು ಎಂದು ಸಲಹೆ ನೀಡಿದರು.</p>.<p>‘ಸುರಪುರ– ಹುಣಸಗಿ ಬಸ್ ಸಂಚಾರ ತೆಗೆದು ಹಾಕಿರುವುದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿದ್ಯುತ್ ವ್ಯತ್ಯಯದಿಂದ ರೈತರು ಕಂಗಾಲಾಗಿದ್ದಾರೆ. ಟಿಸಿ ಸುಟ್ಟರೆ ತಿಂಗಳುಗಟ್ಟಲೆ ತಿರುಗಬೇಕಾದ ಪರಿಸ್ಥಿತಿ ಇದೆ. ಕನ್ನೆಳ್ಳಿ ಗ್ರಾಮದಲ್ಲಿ ಕಾಲುವೆಗೆ ನೀರು ಹರಿಸುತ್ತಿಲ್ಲ. ಈ ಬಗ್ಗೆ ಕೇಳಿದರೆ ಸಿಬ್ಬಂದಿ ರೈತರನ್ನು ಹೆದರಿಸುತ್ತಾರೆ. ಕ್ಷೇತ್ರದಲ್ಲಿ ಅರಾಜಕತೆ ಇದೆ’ ಎಂದು ದೂರಿದರು.</p>.<p>‘ವಸತಿ ಯೋಜನೆ ಅಡಿ ಡಿಡಿ ಸಲ್ಲಿಸಿದವರಿಗೆ ಖಂಡಿತವಾಗಿ ಮನೆ ಸಿಗಲಿವೆ. ರದ್ದು ಮಾಡುವ ಅಧಿಕಾರ ಯಾರಿಗೂ ಇಲ್ಲ. ಆಯ್ಕೆಯಾದ ಫಲಾನುಭವಿಗಳಿಗೆ ಶೀಘ್ರವೇ ಮನೆ ಸಿಗಲಿವೆ. ರದ್ದು ಮಾಡಿದರೆ ಫಲಾನುಭವಿಗಳೊಂದಿಗೆ ಧರಣಿ ಹಮ್ಮಿಕೊಳ್ಳುವೆ’ ಎಂದು ಎಚ್ಚರಿಸಿದರು.</p>.<p>ಮುಖಂಡರಾದ ರಾಜಾ ಹನುಮಪ್ಪನಾಯಕ ತಾತಾ, ವೇಣುಗೋಪಾಲ ನಾಯಕ ಜೇವರ್ಗಿ, ರಾಮನಗೌಡ ಸುಬೇದಾರ, ಪ್ರಕಾಶ ಸಜ್ಜನ್, ರಾಜಾ ರಂಗಪ್ಪನಾಯಕ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>