<p><strong>ಯಾದಗಿರಿ:</strong> ‘ಅತಿವೃಷ್ಟಿಯಿಂದ ಅನ್ನದಾತ ನಲುಗಿದ್ದು, ಸರ್ಕಾರ ರೈತರ ಹಿತ ಕಾಯುವ ಬದಲು ಆರ್ಎಸ್ಎಸ್ ನಿರ್ಬಂಧ, ಅಧಿಕಾರ ಹಸ್ತಾಂತರದ ಹಿಂದೆ ಬಿದ್ದಿದೆ’ ಎಂದು ರೈತ ಮುಖಂಡ ಹಣಮೇಗೌಡ ಬೀರನಕಲ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ರೈತರಿಗೆ ನಷ್ಟದ ಪರಿಹಾರವನ್ನು ತ್ವರಿತಗತಿಯಲ್ಲಿ ವಿತರಿಸುವಂತೆ ಆಗ್ರಹಿಸಿ ಅವರು ಮನವಿ ಪತ್ರ ಸಲ್ಲಿಸಿದರು.</p>.<p>‘ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟರ್ ಬೆಳೆಹಾನಿ ಮತ್ತು 500 ಕ್ಕೂ ಹೆಚ್ಚು ಮನೆ ಕುಸಿತವಾಗಿದ್ದು, ರೈತರು ಬೀದಿಪಾಲಾಗಿದ್ದಾರೆ. ತಿಂಗಳಲ್ಲಿ ಪರಿಹಾರ ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ, ಈವರೆಗೂ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ’ ಎಂದು ತಿಳಿಸಿದರು.</p>.<p>‘ಸತತ ನಷ್ಟಕ್ಕೆ ತುತ್ತಾದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಡಿಸೆಂಬರ್ ಆರಂಭದೊಳಗೆ ನಾಲ್ಕು ವಾರಗಳ ಸಮಯಾವಕಾಶದಲ್ಲಿ ರೈತರಿಗೆ ಪರಿಹಾರ ತಲುಪದಿದ್ದರೆ ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.</p>.<p>ರುದ್ರಾಂಬಿಕೆ ಪಾಟೀಲ, ರಾಜಶೇಖರ ಹಾಲಗೇರ, ಹಣಮಂತ್ರಾಯಗೌಡ ತೇಕರಾಳ, ಅಶೋಕ ವಾಟಕರ, ವಿಜಯ ಕುಮಾರ, ಕಾಶೀನಾಥ ನಾಟೆಕಾರ, ವಿಶ್ವನಾಥ ನಾಯಕ, ವಿಜಯಕುಮಾರ, ಸೀಮನ್ ತುಮಕೂರ, ಶರಣು, ನಾಗರಾಜ ರಾಮಸಮುದ್ರ, ವಿಜಯ ಮುಷ್ಟೂರ, ಸೋಯಬ್, ಮಲ್ಲು ತುಮಕೂರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ಅತಿವೃಷ್ಟಿಯಿಂದ ಅನ್ನದಾತ ನಲುಗಿದ್ದು, ಸರ್ಕಾರ ರೈತರ ಹಿತ ಕಾಯುವ ಬದಲು ಆರ್ಎಸ್ಎಸ್ ನಿರ್ಬಂಧ, ಅಧಿಕಾರ ಹಸ್ತಾಂತರದ ಹಿಂದೆ ಬಿದ್ದಿದೆ’ ಎಂದು ರೈತ ಮುಖಂಡ ಹಣಮೇಗೌಡ ಬೀರನಕಲ್ ಆಕ್ರೋಶ ವ್ಯಕ್ತಪಡಿಸಿದರು.</p>.<p>ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ರೈತರಿಗೆ ನಷ್ಟದ ಪರಿಹಾರವನ್ನು ತ್ವರಿತಗತಿಯಲ್ಲಿ ವಿತರಿಸುವಂತೆ ಆಗ್ರಹಿಸಿ ಅವರು ಮನವಿ ಪತ್ರ ಸಲ್ಲಿಸಿದರು.</p>.<p>‘ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟರ್ ಬೆಳೆಹಾನಿ ಮತ್ತು 500 ಕ್ಕೂ ಹೆಚ್ಚು ಮನೆ ಕುಸಿತವಾಗಿದ್ದು, ರೈತರು ಬೀದಿಪಾಲಾಗಿದ್ದಾರೆ. ತಿಂಗಳಲ್ಲಿ ಪರಿಹಾರ ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ, ಈವರೆಗೂ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ’ ಎಂದು ತಿಳಿಸಿದರು.</p>.<p>‘ಸತತ ನಷ್ಟಕ್ಕೆ ತುತ್ತಾದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಡಿಸೆಂಬರ್ ಆರಂಭದೊಳಗೆ ನಾಲ್ಕು ವಾರಗಳ ಸಮಯಾವಕಾಶದಲ್ಲಿ ರೈತರಿಗೆ ಪರಿಹಾರ ತಲುಪದಿದ್ದರೆ ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.</p>.<p>ರುದ್ರಾಂಬಿಕೆ ಪಾಟೀಲ, ರಾಜಶೇಖರ ಹಾಲಗೇರ, ಹಣಮಂತ್ರಾಯಗೌಡ ತೇಕರಾಳ, ಅಶೋಕ ವಾಟಕರ, ವಿಜಯ ಕುಮಾರ, ಕಾಶೀನಾಥ ನಾಟೆಕಾರ, ವಿಶ್ವನಾಥ ನಾಯಕ, ವಿಜಯಕುಮಾರ, ಸೀಮನ್ ತುಮಕೂರ, ಶರಣು, ನಾಗರಾಜ ರಾಮಸಮುದ್ರ, ವಿಜಯ ಮುಷ್ಟೂರ, ಸೋಯಬ್, ಮಲ್ಲು ತುಮಕೂರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>