<p><strong>ಯಾದಗಿರಿ:</strong> ‘ಕೃತಕ ಗರ್ಭಧಾರಣೆ ಮತ್ತು ಹಸಿರು ಮೇವು ಉತ್ಪಾದನೆಯಿಂದ ಕೃಷಿಕರ ಆದಾಯ ವೃದ್ಧಿಯಾಗುತ್ತದೆ’ ಎಂದು ಪಶುವೈದ್ಯ ಡಾ.ಸುಶೃತ್ ಹೇಳಿದರು.</p>.<p>ಕಲಿಕೆ ಸಂಸ್ಥೆ, ಕೆಎಂಎಫ್, ಕೆವಿಕೆ ಮತ್ತು ಪಶು ಸಂಗೋಪನಾ ಇಲಾಖೆ ವತಿಯಿಂದ ತಾಲ್ಲೂಕಿನ ಬೆಳಗೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಸಿರು ಮೇವು ಉತ್ಪಾದನೆ ಮತ್ತು ಪಶು ಆರೋಗ್ಯ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಕಲಿಕಾ ಸಂಸ್ಥೆ ಹಾಗೂ ಕೆಎಂಎಫ್ ಜತೆಗೂಡಿ 2018-19ನೇ ಸಾಲಿನಲ್ಲಿ ಹಾಲು ಉತ್ಪಾದಕರ ಸಂಘ ರಚಿಸಲಾಗಿದೆ. ಕಳೆದ ಒಂದು ವರ್ಷದಿಂದ 50ಕ್ಕೂ ಹೆಚ್ಚು ಕುಟುಂಬಗಳು ಇದರ ಸದುಪಯೋಗ ಪಡೆದುಕೊಂಡಿವೆ’ ಎಂದರು.</p>.<p>‘ಈ ಕುಟುಂಬಗಳು ಪ್ರತಿವಾರ ₹ 800 ರಿಂದ ₹ 2200 ಮತ್ತು ತಿಂಗಳಿಗೆ ಕನಿಷ್ಠ ₹ 4800 ರಿಂದ ₹ 9 ಸಾವಿರ ಆದಾಯವನ್ನು ಕೇವಲ ಹಾಲಿನ ಉತ್ಪಾದನೆಯಿಂದ ಸಂಪಾದಿಸುತ್ತಿದ್ದಾರೆ. ಹೀಗಾಗಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ತಾಲೂಕಿನ ಹವಾಮಾನಕ್ಕೆ ಗಿರ್, ಮುರ್ರಾ ತಳಿಯ ಹಸು ಮತ್ತು ಎಮ್ಮೆ ವಂಶವೃದ್ಧಿಗೆ ಕೇಂದ್ರ ಸರ್ಕಾರದ ಯೋಜನೆಯಡಿ ರಾಷ್ಟ್ರೀಯ ಕೃತಕ ಗರ್ಭಧಾರಣ ಕಾರ್ಯಕ್ರಮವು ಸೆಪ್ಟೆಂಬರ್ 15 ರಿಂದ 2020 ರ ಮಾರ್ಚ್ 15ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.<br />ಕಲಿಕೆ ಸಂಸ್ಥೆ ಉಪನಿರ್ದೇಶಕ ಪ್ರಕಾಶ ಕಾಮತ್, ಕಾರ್ಯಕ್ರಮ ಅಧಿಕಾರಿಗಳಾದ ಆನಂದ ಬೆಂಗೇರಿ, ಅರುಣಕುಮಾರ ಶಿವರಾಯ, ಸಂದೀಪ ಚವಾಣ್, ಜೀವನೋಪಾಯ ಕಾರ್ಯಕ್ರಮ ಸಂಯೋಜಕರಾದ ಉಮೇಶ ಕಟ್ಟಿಮನಿ, ಮಂಜುನಾಥ ವಿಶ್ವಕರ್ಮ, ಶಾಂತಗೌಡ ಬಿರಾದಾರ, ಶಿವಕುಮಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ಕೃತಕ ಗರ್ಭಧಾರಣೆ ಮತ್ತು ಹಸಿರು ಮೇವು ಉತ್ಪಾದನೆಯಿಂದ ಕೃಷಿಕರ ಆದಾಯ ವೃದ್ಧಿಯಾಗುತ್ತದೆ’ ಎಂದು ಪಶುವೈದ್ಯ ಡಾ.ಸುಶೃತ್ ಹೇಳಿದರು.</p>.<p>ಕಲಿಕೆ ಸಂಸ್ಥೆ, ಕೆಎಂಎಫ್, ಕೆವಿಕೆ ಮತ್ತು ಪಶು ಸಂಗೋಪನಾ ಇಲಾಖೆ ವತಿಯಿಂದ ತಾಲ್ಲೂಕಿನ ಬೆಳಗೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಸಿರು ಮೇವು ಉತ್ಪಾದನೆ ಮತ್ತು ಪಶು ಆರೋಗ್ಯ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಕಲಿಕಾ ಸಂಸ್ಥೆ ಹಾಗೂ ಕೆಎಂಎಫ್ ಜತೆಗೂಡಿ 2018-19ನೇ ಸಾಲಿನಲ್ಲಿ ಹಾಲು ಉತ್ಪಾದಕರ ಸಂಘ ರಚಿಸಲಾಗಿದೆ. ಕಳೆದ ಒಂದು ವರ್ಷದಿಂದ 50ಕ್ಕೂ ಹೆಚ್ಚು ಕುಟುಂಬಗಳು ಇದರ ಸದುಪಯೋಗ ಪಡೆದುಕೊಂಡಿವೆ’ ಎಂದರು.</p>.<p>‘ಈ ಕುಟುಂಬಗಳು ಪ್ರತಿವಾರ ₹ 800 ರಿಂದ ₹ 2200 ಮತ್ತು ತಿಂಗಳಿಗೆ ಕನಿಷ್ಠ ₹ 4800 ರಿಂದ ₹ 9 ಸಾವಿರ ಆದಾಯವನ್ನು ಕೇವಲ ಹಾಲಿನ ಉತ್ಪಾದನೆಯಿಂದ ಸಂಪಾದಿಸುತ್ತಿದ್ದಾರೆ. ಹೀಗಾಗಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ತಾಲೂಕಿನ ಹವಾಮಾನಕ್ಕೆ ಗಿರ್, ಮುರ್ರಾ ತಳಿಯ ಹಸು ಮತ್ತು ಎಮ್ಮೆ ವಂಶವೃದ್ಧಿಗೆ ಕೇಂದ್ರ ಸರ್ಕಾರದ ಯೋಜನೆಯಡಿ ರಾಷ್ಟ್ರೀಯ ಕೃತಕ ಗರ್ಭಧಾರಣ ಕಾರ್ಯಕ್ರಮವು ಸೆಪ್ಟೆಂಬರ್ 15 ರಿಂದ 2020 ರ ಮಾರ್ಚ್ 15ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.<br />ಕಲಿಕೆ ಸಂಸ್ಥೆ ಉಪನಿರ್ದೇಶಕ ಪ್ರಕಾಶ ಕಾಮತ್, ಕಾರ್ಯಕ್ರಮ ಅಧಿಕಾರಿಗಳಾದ ಆನಂದ ಬೆಂಗೇರಿ, ಅರುಣಕುಮಾರ ಶಿವರಾಯ, ಸಂದೀಪ ಚವಾಣ್, ಜೀವನೋಪಾಯ ಕಾರ್ಯಕ್ರಮ ಸಂಯೋಜಕರಾದ ಉಮೇಶ ಕಟ್ಟಿಮನಿ, ಮಂಜುನಾಥ ವಿಶ್ವಕರ್ಮ, ಶಾಂತಗೌಡ ಬಿರಾದಾರ, ಶಿವಕುಮಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>