ತಾಲೂಕಿನ ಹವಾಮಾನಕ್ಕೆ ಗಿರ್, ಮುರ್ರಾ ತಳಿಯ ಹಸು ಮತ್ತು ಎಮ್ಮೆ ವಂಶವೃದ್ಧಿಗೆ ಕೇಂದ್ರ ಸರ್ಕಾರದ ಯೋಜನೆಯಡಿ ರಾಷ್ಟ್ರೀಯ ಕೃತಕ ಗರ್ಭಧಾರಣ ಕಾರ್ಯಕ್ರಮವು ಸೆಪ್ಟೆಂಬರ್ 15 ರಿಂದ 2020 ರ ಮಾರ್ಚ್ 15ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಕಲಿಕೆ ಸಂಸ್ಥೆ ಉಪನಿರ್ದೇಶಕ ಪ್ರಕಾಶ ಕಾಮತ್, ಕಾರ್ಯಕ್ರಮ ಅಧಿಕಾರಿಗಳಾದ ಆನಂದ ಬೆಂಗೇರಿ, ಅರುಣಕುಮಾರ ಶಿವರಾಯ, ಸಂದೀಪ ಚವಾಣ್, ಜೀವನೋಪಾಯ ಕಾರ್ಯಕ್ರಮ ಸಂಯೋಜಕರಾದ ಉಮೇಶ ಕಟ್ಟಿಮನಿ, ಮಂಜುನಾಥ ವಿಶ್ವಕರ್ಮ, ಶಾಂತಗೌಡ ಬಿರಾದಾರ, ಶಿವಕುಮಾರ ಇದ್ದರು.