<p><strong>ಸುರಪುರ: ‘</strong>ಬೆಂಗಳೂರು ಸಮೀಪದ ನೆಲಮಂಗಲದ ಪ್ರವಾಡ ಬಸವಣ್ಣ ದೇವರ ಮಠದಲ್ಲಿ ಭಾನುವಾರ ಜರುಗಿದ ಶರಣ ಸಂಸ್ಕೃತಿ ಅಭಿಯಾನದಲ್ಲಿ ಕಾಯಕ ಜೀವಿ ಸುರಪುರದ ಗಂಗಾಧರ ಹುಲಕಲ್ಗೆ ಡೋಹರ ಕಕ್ಕಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಮಡಿವಾಳ ಮಾಚಿದೇವ ಮತ್ತು ಡೋಹರ ಕಕ್ಕಯ್ಯ ಜಯಂತಿ ನಿಮಿತ್ತವಾಗಿ ಶರಣ ಸಂಸ್ಕೃತಿ ಅಭಿಯಾನ ಆಯೋಜಿಸಲಾಗಿತ್ತು.</p>.<p>‘50 ವರ್ಷಗಳಿಂದ ಚರ್ಮಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಗಂಗಾಧರ್ ಹುಲಕಲ್ ಅವರು ಶರಣ ಸಂಸ್ಕೃತಿ ಪರಂಪರೆ ಮೈಗೂಡಿಸಿಕೊಂಡಿರುತ್ತಾರೆ. ಚರ್ಮಗಾರಿಕೆ ಕಾಯಕವೇ ಇವರಿಗೆ ಜೀವಾಳವಾಗಿದೆ. ತಂತ್ರಜ್ಞಾನದಿಂದ ಬದಲಾದ ವರ್ತಮಾನಕ್ಕೆ ತಕ್ಕಂತೆಯೇ ಉದ್ಯೋಗ ಮುಂದುವರಿಸಿಕೊಂಡು ಬಂದಿರುವುದು ಪ್ರಶಂಸನೀಯ’ ಎಂದು ಮಠದ ಸಿದ್ದಲಿಂಗಯ್ಯಸ್ವಾಮಿ ಹೇಳಿದರು.</p>.<p>ಸಂಘದ ಅಧ್ಯಕ್ಷ ನಾಗರಾಜು, ಪ್ರಶಸ್ತಿ ದಾನಿಗಳಾದ ಗಂಗಾಧರಯ್ಯ, ಆರ್.ಮಹಾದೇವಯ್ಯ, ಹುಲಕಲ್ ಕುಟುಂಬಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: ‘</strong>ಬೆಂಗಳೂರು ಸಮೀಪದ ನೆಲಮಂಗಲದ ಪ್ರವಾಡ ಬಸವಣ್ಣ ದೇವರ ಮಠದಲ್ಲಿ ಭಾನುವಾರ ಜರುಗಿದ ಶರಣ ಸಂಸ್ಕೃತಿ ಅಭಿಯಾನದಲ್ಲಿ ಕಾಯಕ ಜೀವಿ ಸುರಪುರದ ಗಂಗಾಧರ ಹುಲಕಲ್ಗೆ ಡೋಹರ ಕಕ್ಕಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಮಡಿವಾಳ ಮಾಚಿದೇವ ಮತ್ತು ಡೋಹರ ಕಕ್ಕಯ್ಯ ಜಯಂತಿ ನಿಮಿತ್ತವಾಗಿ ಶರಣ ಸಂಸ್ಕೃತಿ ಅಭಿಯಾನ ಆಯೋಜಿಸಲಾಗಿತ್ತು.</p>.<p>‘50 ವರ್ಷಗಳಿಂದ ಚರ್ಮಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಗಂಗಾಧರ್ ಹುಲಕಲ್ ಅವರು ಶರಣ ಸಂಸ್ಕೃತಿ ಪರಂಪರೆ ಮೈಗೂಡಿಸಿಕೊಂಡಿರುತ್ತಾರೆ. ಚರ್ಮಗಾರಿಕೆ ಕಾಯಕವೇ ಇವರಿಗೆ ಜೀವಾಳವಾಗಿದೆ. ತಂತ್ರಜ್ಞಾನದಿಂದ ಬದಲಾದ ವರ್ತಮಾನಕ್ಕೆ ತಕ್ಕಂತೆಯೇ ಉದ್ಯೋಗ ಮುಂದುವರಿಸಿಕೊಂಡು ಬಂದಿರುವುದು ಪ್ರಶಂಸನೀಯ’ ಎಂದು ಮಠದ ಸಿದ್ದಲಿಂಗಯ್ಯಸ್ವಾಮಿ ಹೇಳಿದರು.</p>.<p>ಸಂಘದ ಅಧ್ಯಕ್ಷ ನಾಗರಾಜು, ಪ್ರಶಸ್ತಿ ದಾನಿಗಳಾದ ಗಂಗಾಧರಯ್ಯ, ಆರ್.ಮಹಾದೇವಯ್ಯ, ಹುಲಕಲ್ ಕುಟುಂಬಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>