ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ರಾಜುಗೌಡ ಅವರ ‘ಅಮ್ಮ ಆಸ್ಪತ್ರೆ’ಗೆ ಭೂಮಿ ಪೂಜೆ

Last Updated 21 ಆಗಸ್ಟ್ 2022, 11:28 IST
ಅಕ್ಷರ ಗಾತ್ರ

ಹುಣಸಗಿ: ‘ಕ್ಷೇತ್ರದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ, ಅಗತ್ಯ ಚಿಕಿತ್ಸೆ ನೀಡುವುದಕ್ಕೆ ಅಮ್ಮನ ಹೆಸರಿನಲ್ಲಿ ಉತ್ತಮ ದರ್ಜೆಯ ಆಸ್ಪತ್ರೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಶಾಸಕ ರಾಜುಗೌಡ ಹೇಳಿದರು.

ಪಟ್ಟಣದಲ್ಲಿ ಅಮ್ಮ ಆಸ್ಪತ್ರೆಗೆ ಭೂಮಿ ಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಅವರು, ತಾಯಿ ತಿಮ್ಮಮ್ಮ ಗೌಡತಿಯವರ ಸ್ಮರಣಾರ್ಥ 100 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಮಾಡಲಾಗುವುದು. ತುರ್ತು ಸಂದರ್ಭದಲ್ಲಿ ದೂರದ ನಗರಗಳಿಗೆ ತೆರಳುವುದನ್ನು ತಪ್ಪಿಸಲು ನಮ್ಮಲ್ಲೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ದೇವಪುರದ ಶಿವಮೂರ್ತಿ ಶಿವಾಚಾರ್ಯರು, ಪ್ರಭುಲಿಂಗ ಸ್ವಾಮಿಗಳು, ಮರಿಹುಚ್ಚೇಶ್ವರ ಸ್ವಾಮಿಜಿ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶಾಂತಮಯ ಸ್ವಾಮಿಜೀ, ಸಿದ್ಧಮಲ್ಲಿಕಾರ್ಜುನ ಶಿವಾಚಾರ್ಯರು, ಬಂಡೇಪ್ಪನಹಳ್ಳಿ ಶರಣರು, ನಗನೂರು ಶರಣರು ಇದ್ದರು

ಉದ್ಯಮಿ ಎಸ್.ಪಿ ದಯಾನಂದ, ಮುಖಂಡ ಹನುಮಂತನಾಯಕ (ಬಬ್ಲುಗೌಡ), ಬಸವರಾಜಸ್ವಾಮಿ ಸ್ಥಾವರಮಠ, ವಿರೇಶ ಚಿಂಚೋಳಿ, ಎಚ್.ಸಿ ಪಾಟೀಲ್, ಬಸನಗೌಡ ಯಡಿಯಾಪೂರ, ಯಲ್ಲಪ್ಪ ಕುರಕುಂದಿ, ಸುರೇಶ ಸಜ್ಜನ್, ಸಂಗಣ್ಣ ವೈಲಿ, ನಾನಾಗೌಡ ಪಾಟೀಲ್, ಬಿ.ಎಂ ಹಳ್ಳಿಕೋಟಿ, ಎಂ.ಎಸ್ ಚಂದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT