ಕೊಟಗೇರಾ–ಗಾಜರಕೋಟ ಹಳ್ಳದ ಸೇತುವೆ ಜಲಾವೃತ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಟಗೇರಾ–ಗಾಜರಕೋಟ ಹಳ್ಳದ ಸೇತುವೆ ಜಲಾವೃತಗೊಂಡಿದೆ. ಇದರಿಂದ ವಾಹನ ಸವಾರರು ಪರದಾಡಿದರು. ಯಾದಗಿರಿಯಿಂದ ಕೊಟಗೇರಾ, ಹೊಸಹಳ್ಳಿ, ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿಗೆ ತೆರಳುವ ವಾಹನ ಸವಾರರು ಸೇತುವೆ ದಾಟಲು ಪರಿದಾಡಿದರು.
‘ಕೊಟಗೇರಾ ಕೆರೆ ನೀರು ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದರಿಂದ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯಿತು. ಬೈಕ್ ಕೊಚ್ಚಿಕೊಂಡು ಹೋಗಿದ್ದು, ಬೈಕ್ ಸವಾರರನ್ನು ರಕ್ಷಿಸಲಾಗಿದೆ. ಸಂಜೆ ವೇಳೆಗೆ ಸೇತುವೆ ಮೇಲೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ’ ಎಂದು ಗ್ರಾಮಸ್ಥ ಜಾಫರ್ ತಿಳಿಸಿದ್ದಾರೆ.
ಗುರುಮಠಕಲ್ ತಾಲ್ಲೂಕಿನ ಮಿನಸಾಪುರ ಕೆರೆ ಭರ್ತಿಯಾಗಿದೆ. ಕಾಲುವೆ ಮೂಲಕ ಹರಿಯಲು ಜಾಗವಿಲ್ಲದಿದ್ದರಿಂದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.
15 ಎಂಎ ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 15 ಎಂಎಂ ಮಳೆಯಾಗಿದೆ. ಗುರುಮಠಕಲ್ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಗುರುಮಠಕಲ್ 64.1, ಕಾಕಲವಾರ 58, ಕೊಂಕಲ್ 44.06 ಎಂಎಂ, ಚಪೆಟ್ಲಾ 48, ಜೈಗ್ರಾಮ 27, ಚಂಡರಕಿ 31, ಪುಟಪಾಕ 46, ಮಿನಸಾಪುರ 42, ಪಸಪುಲ್ 42, ಗಾಜರಕೋಟ 46, ಎಲ್ಹೇರಿ 26, ಯಲಸತ್ತಿ 29, ಅರಕೇರಾ (ಕೆ) 16, ಮೋಟನಹಳ್ಳಿ 19 ಎಂಎಂ ಮಳೆಯಾಗಿದೆ.
ಸುರಪುರ 14, ಕಕ್ಕೇರಾ 22.2, ಕೋಡೆಕಲ್ 20.2, ನಾರಾಯಣಪುರ 7.6, ಹುಣಸಗಿ 12.2, ಹಗರಟಗಿ 16, ಬರದೇವನಹಾಳ 20, ಮಾರನಾಳ 25, ಜೋಗುಂಡಬಾವಿ 16, ಕೆಂಭಾವಿಯಲ್ಲಿ 7.6 ಎಂಎಂ ಮಳೆಯಾಗಿದೆ.
ಶಹಾಪುರ ತಾಲ್ಲೂಕಿನ ಹತ್ತಿಗೂಡೂರು 15, ರಸ್ತಾಪುರ 16, ಚಾಮನಾಳ 14, ಮೂಡಬೂಳ 14, ನಾಯ್ಕಲ್ 14, ಕರೆಕಲ್ 17, ಅಣಬಿ 18, ಮದ್ರಕಿಯಲ್ಲಿ 13 ಎಂಎಂ ಮಳೆ ಸುರಿದಿದೆ.
ಯಾದಗಿರಿ ತಾಲ್ಲೂಕಿನ ಬಾಡಿಯಾಳ 16, ಕಡೇಚೂರು 12, ಮಲ್ಹಾರ 15, ಕೌಳೂರು 22, ಹಳಿಗೇರಾ 22, ಮುಂಡರಗಿಯಲ್ಲಿ 18, ಸೂಗೂರ (ಬಿ) 16, ಠಾಣಗುಂದಿ 14, ಅರಕೇರಾ (ಬಿ) 16, ಯರಗೋಳ 22, ಅಲ್ಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.