<p><strong>ಸುರಪುರ:</strong> ನಗರದ ಐತಿಹಾಸಿಕ ಪ್ರಸಿದ್ಧ ವೇಣುಗೋಪಾಲಸ್ವಾಮಿ ಹಾಲೋಕುಳಿ ಜಾತ್ರೆ ಸೋಮವಾರ ಸಡಗರ ಸಂಭ್ರಮದೊಂದಿಗೆ ಜರುಗಿತು. ಜಾತ್ರೆ ನಿಮಿತ್ತವಾಗಿ ಸಂಜೆ ನಡೆದ ದೇವರ ಸ್ತಂಭಾರೋಹಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.</p>.<p>ಭಾನುವಾರ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭಗೊಂಡವು. ವೇಣುಗೋಪಾಲಸ್ವಾಮಿಗೆ ವಿಶೇಷ ಅಲಂಕಾರ, ಮಹಾಪೂಜೆ, ತೊಟ್ಟಿಲು ಸೇವೆ, ಕೃಷ್ಣಾರ್ಘ್ಯ ನಡೆದವು. ಭಕ್ತರು ಉಪವಾಸ ವ್ರತ ಕೈಗೊಂಡರು. ಸಂಜೆ ದೇವಸ್ಥಾನಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದರು.</p>.<p>ಸೋಮವಾರ ಜಾತ್ರೆಯ ಮುಖ್ಯ ಆಕರ್ಷಣೆ ದೇವರಗಂಭಾರೋಹಣ ಸಂಭ್ರಮದಿಂದ ನಡೆಯಿತು. ದೇವಸ್ಥಾನದ ಕೆಳಗಿನ ಮೈದಾನದಲ್ಲಿ 5 ಕಂಬಗಳನ್ನು ನಡು ಹಾಕಲಾಗಿತ್ತು. ದೇವಸ್ಥಾನದ ಮೇಲುಗಡೆಯಿಂದ ಸಂಸ್ಥಾನದ ವತನದಾರ ಗಣೇಶ ಜಾಗೀರದಾರ ನಾಣ್ಯ ಚಿಮ್ಮುವ ಮೂಲಕ ಆರೋಹಣಕ್ಕೆ ಚಾಲನೆ ನೀಡಿದರು. ನಿರ್ದಿಷ್ಟ ಪಡಿಸಿದ ಗ್ರಾಮಗಳ ಜನರು ಕಂಬ ಹತ್ತಿದರು. ಸ್ತಂಭಾರೋಹಿಗಳು ಜಾರಿ ಜಾರಿ ಕೆಳಗೆ ಬೀಳುವ ದೃಶ್ಯ ನೋಡುಗರಿಗೆ ಮನರಂಜನೆ ನೀಡಿತು.</p>.<p>ಸ್ತಂಭಾರೋಹಿಗಳು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಅರಮನೆಗೆ ತೆರಳಿದರು. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಅವರಿಂದ ಬಹುಮಾನ ಸ್ವೀಕರಿಸಿದರು.</p>.<p>ಸ್ತಂಭಾರೋಹಣದ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಕ್ಕಳನ್ನು ಆಟಿಕೆಗಳಲ್ಲಿ ಕೂರಿಸಿದರು. ಮಹಿಳೆಯರು ಬಳೆ ಹಾಕಿಸಿಕೊಂಡರು. ಮಿಠಾಯಿ ಖರೀದಿ ಜೋರಾಗಿತ್ತು.</p>.<p>ಪ್ರಮುಖರಾದ ಸುನೀಲ ಪಟ್ಟಣಶೆಟ್ಟಿ, ಉಸ್ತಾದ ವಜಾಹತ್ಹುಸೇನ್, ಅಜೀಂ ಬೆಳ್ಳಿ ಬೆತ್ತ, ಸೈಯದ್ ಅಹ್ಮದ್ ಪಾಲ್ಕಿ ಬಾಬಾ, ಅಹ್ಮದ ಪಾಷಾ, ಮಹ್ಮದ್ ಮುಬೀನ ದಖನಿ ಸೇರಿದಂತೆ ಸಂಸ್ಥಾನದ 14 ಕೇರಿಯ ವತನದಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ನಗರದ ಐತಿಹಾಸಿಕ ಪ್ರಸಿದ್ಧ ವೇಣುಗೋಪಾಲಸ್ವಾಮಿ ಹಾಲೋಕುಳಿ ಜಾತ್ರೆ ಸೋಮವಾರ ಸಡಗರ ಸಂಭ್ರಮದೊಂದಿಗೆ ಜರುಗಿತು. ಜಾತ್ರೆ ನಿಮಿತ್ತವಾಗಿ ಸಂಜೆ ನಡೆದ ದೇವರ ಸ್ತಂಭಾರೋಹಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.</p>.<p>ಭಾನುವಾರ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭಗೊಂಡವು. ವೇಣುಗೋಪಾಲಸ್ವಾಮಿಗೆ ವಿಶೇಷ ಅಲಂಕಾರ, ಮಹಾಪೂಜೆ, ತೊಟ್ಟಿಲು ಸೇವೆ, ಕೃಷ್ಣಾರ್ಘ್ಯ ನಡೆದವು. ಭಕ್ತರು ಉಪವಾಸ ವ್ರತ ಕೈಗೊಂಡರು. ಸಂಜೆ ದೇವಸ್ಥಾನಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದರು.</p>.<p>ಸೋಮವಾರ ಜಾತ್ರೆಯ ಮುಖ್ಯ ಆಕರ್ಷಣೆ ದೇವರಗಂಭಾರೋಹಣ ಸಂಭ್ರಮದಿಂದ ನಡೆಯಿತು. ದೇವಸ್ಥಾನದ ಕೆಳಗಿನ ಮೈದಾನದಲ್ಲಿ 5 ಕಂಬಗಳನ್ನು ನಡು ಹಾಕಲಾಗಿತ್ತು. ದೇವಸ್ಥಾನದ ಮೇಲುಗಡೆಯಿಂದ ಸಂಸ್ಥಾನದ ವತನದಾರ ಗಣೇಶ ಜಾಗೀರದಾರ ನಾಣ್ಯ ಚಿಮ್ಮುವ ಮೂಲಕ ಆರೋಹಣಕ್ಕೆ ಚಾಲನೆ ನೀಡಿದರು. ನಿರ್ದಿಷ್ಟ ಪಡಿಸಿದ ಗ್ರಾಮಗಳ ಜನರು ಕಂಬ ಹತ್ತಿದರು. ಸ್ತಂಭಾರೋಹಿಗಳು ಜಾರಿ ಜಾರಿ ಕೆಳಗೆ ಬೀಳುವ ದೃಶ್ಯ ನೋಡುಗರಿಗೆ ಮನರಂಜನೆ ನೀಡಿತು.</p>.<p>ಸ್ತಂಭಾರೋಹಿಗಳು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಅರಮನೆಗೆ ತೆರಳಿದರು. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಅವರಿಂದ ಬಹುಮಾನ ಸ್ವೀಕರಿಸಿದರು.</p>.<p>ಸ್ತಂಭಾರೋಹಣದ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಕ್ಕಳನ್ನು ಆಟಿಕೆಗಳಲ್ಲಿ ಕೂರಿಸಿದರು. ಮಹಿಳೆಯರು ಬಳೆ ಹಾಕಿಸಿಕೊಂಡರು. ಮಿಠಾಯಿ ಖರೀದಿ ಜೋರಾಗಿತ್ತು.</p>.<p>ಪ್ರಮುಖರಾದ ಸುನೀಲ ಪಟ್ಟಣಶೆಟ್ಟಿ, ಉಸ್ತಾದ ವಜಾಹತ್ಹುಸೇನ್, ಅಜೀಂ ಬೆಳ್ಳಿ ಬೆತ್ತ, ಸೈಯದ್ ಅಹ್ಮದ್ ಪಾಲ್ಕಿ ಬಾಬಾ, ಅಹ್ಮದ ಪಾಷಾ, ಮಹ್ಮದ್ ಮುಬೀನ ದಖನಿ ಸೇರಿದಂತೆ ಸಂಸ್ಥಾನದ 14 ಕೇರಿಯ ವತನದಾರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>