<p><strong>ಹುಣಸಗಿ:</strong> ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಖಾಸ್ಗತೇಶ್ವರ ಶಾಂತಾಶ್ರಮದ ಖಾಸ್ಗತ ವಿರಕ್ತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಅನೆ ಮೆರವಣಿಗೆ ಹಾಗೂ ಕುಂಭ ಕಳಸ ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನ ಸಂಭ್ರಮದಿಂದ ನಡೆಯಿತು.</p>.<p>ಬೆಳಿಗ್ಗೆ ಖಾಸ್ಗತ ವಿರಕ್ತ ಶಿವಯೋಗಿ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆದವು.</p>.<p>ಕಲ್ಲದೇವನಹಳ್ಳಿ ಗ್ರಾಮದಿಂದ ಅಲಂಕೃತ ಆನೆಯ ಮೇಲೆ ಅಂಬಾರಿಯಲ್ಲಿ ವಿರಕ್ತ ಶಿವಯೊಗಿಗಳ ರಜತ ಮೂರ್ತಿಯನ್ನಿಟ್ಟು ಬೆಳಿಗ್ಗೆ ಗ್ರಾಮದ ಹನುಮಂತದೇವರ ದೇವಸ್ಥಾನದಿಂದ ಮಠದ ವರೆಗೆ ಮೆರವಣಿಗೆ ನಡೆಯಿತು.</p>.<p>ಜೊತೆಗೆ ಮಠದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಅಲಂಕೃತ ಸಾರೋಟದಲ್ಲಿ ಕುಳ್ಳಿರಿಸಿ ಮಹಿಳೆಯರಿಂದ ಪೂರ್ಣ ಕುಂಭ ಹಾಗೂ ಕಳಸ ಜರುಗಿತು.</p>.<p>ವಿವಿಧ ಕಲಾತಂಡಗಳ ಹಲಗೆ ವಾದನ ಕುಣಿತ, ಡೊಳ್ಳು ಕುಣಿತ, ಗಾರುಡಿ ಬೊಂಬೆ ಕುಣಿತ, ಕುದುರೆ ಕುಣಿತ ಗಮನ ಸೆಳೆದವು.</p>.<p>ಕಲ್ಲದೇವನಹಳ್ಳಿ, ಚನ್ನೂರ, ವಜ್ಜಲ, ಹುಣಸಗಿ, ಹೆಬ್ಬಾಳ, ಬೆನಕನಹಳ್ಳಿ, ದೇವತಕಲ್ಲ, ಕಚಕನೂರು, ಬಾಚಿಮಟ್ಟಿ, ಕನ್ನೇಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು.</p>.<p>ಮಹಿಳೆಯರು ಮಾರ್ಗದಲ್ಲಿರುವ ಮನೆಗಳ ಮಾಳಿಗೆ ಮೇಲೆ ನಿಂತು ಜಯಘೋಷ ಕೂಗಿ ನಮಸ್ಕರಿಸಿ ಭಕ್ತಿ ಸಮರ್ಪಿಸಿದರು. ಸ್ಥಳೀಯ ಯುವಕರು ಪೊಲೀಸ್ ಸಿಬ್ಬಂದಿ ಜೊತೆಗೆ ಸೂಕ್ತ ಬಂದೊಬಸ್ತ್ನಲ್ಲಿ ನಿರತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಖಾಸ್ಗತೇಶ್ವರ ಶಾಂತಾಶ್ರಮದ ಖಾಸ್ಗತ ವಿರಕ್ತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಅನೆ ಮೆರವಣಿಗೆ ಹಾಗೂ ಕುಂಭ ಕಳಸ ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನ ಸಂಭ್ರಮದಿಂದ ನಡೆಯಿತು.</p>.<p>ಬೆಳಿಗ್ಗೆ ಖಾಸ್ಗತ ವಿರಕ್ತ ಶಿವಯೋಗಿ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆದವು.</p>.<p>ಕಲ್ಲದೇವನಹಳ್ಳಿ ಗ್ರಾಮದಿಂದ ಅಲಂಕೃತ ಆನೆಯ ಮೇಲೆ ಅಂಬಾರಿಯಲ್ಲಿ ವಿರಕ್ತ ಶಿವಯೊಗಿಗಳ ರಜತ ಮೂರ್ತಿಯನ್ನಿಟ್ಟು ಬೆಳಿಗ್ಗೆ ಗ್ರಾಮದ ಹನುಮಂತದೇವರ ದೇವಸ್ಥಾನದಿಂದ ಮಠದ ವರೆಗೆ ಮೆರವಣಿಗೆ ನಡೆಯಿತು.</p>.<p>ಜೊತೆಗೆ ಮಠದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಅಲಂಕೃತ ಸಾರೋಟದಲ್ಲಿ ಕುಳ್ಳಿರಿಸಿ ಮಹಿಳೆಯರಿಂದ ಪೂರ್ಣ ಕುಂಭ ಹಾಗೂ ಕಳಸ ಜರುಗಿತು.</p>.<p>ವಿವಿಧ ಕಲಾತಂಡಗಳ ಹಲಗೆ ವಾದನ ಕುಣಿತ, ಡೊಳ್ಳು ಕುಣಿತ, ಗಾರುಡಿ ಬೊಂಬೆ ಕುಣಿತ, ಕುದುರೆ ಕುಣಿತ ಗಮನ ಸೆಳೆದವು.</p>.<p>ಕಲ್ಲದೇವನಹಳ್ಳಿ, ಚನ್ನೂರ, ವಜ್ಜಲ, ಹುಣಸಗಿ, ಹೆಬ್ಬಾಳ, ಬೆನಕನಹಳ್ಳಿ, ದೇವತಕಲ್ಲ, ಕಚಕನೂರು, ಬಾಚಿಮಟ್ಟಿ, ಕನ್ನೇಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು.</p>.<p>ಮಹಿಳೆಯರು ಮಾರ್ಗದಲ್ಲಿರುವ ಮನೆಗಳ ಮಾಳಿಗೆ ಮೇಲೆ ನಿಂತು ಜಯಘೋಷ ಕೂಗಿ ನಮಸ್ಕರಿಸಿ ಭಕ್ತಿ ಸಮರ್ಪಿಸಿದರು. ಸ್ಥಳೀಯ ಯುವಕರು ಪೊಲೀಸ್ ಸಿಬ್ಬಂದಿ ಜೊತೆಗೆ ಸೂಕ್ತ ಬಂದೊಬಸ್ತ್ನಲ್ಲಿ ನಿರತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>