<p><strong>ಹುಣಸಗಿ</strong>: ತಾಯಿ ಕೃಷ್ಣೆಯ ಕೃಪೆಯಿಂದ ಸುಮಾರು 5 ಜಿಲ್ಲೆಗಳ ರೈತರ ಜೀವನ ಮಟ್ಟ ಸುಧಾರಿಸುವಂತಾಗಿದೆ ಎಂದು ಗುಳಬಾಳ ಆನಂದಾಶ್ರಮದ ಮರಿ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.</p>.<p>ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯ ಛಾಯಾ ಭಗವತಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಹಮ್ಮಿಕೊಂಡಿದ್ದ ಕೃಷ್ಣೆಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.</p>.<p>‘ಬಸವಸಾಗರ ಜಲಾಶಯ ನಿರ್ಮಾಣಕ್ಕೂ ಮುನ್ನ ಈ ಭಾಗದಲ್ಲಿ ಬಹುತೇಕ ಬೆಳೆ ಇಲ್ಲದೆ ಜಮೀನುಗಳು ಭಣಗುಡುತ್ತಿದ್ದವು. ಜಲಾಶಯ ನಿರ್ಮಾಣದ ಬಳಿಕ ಕಾಲುವೆಯ ಮೂಲಕ ಕೃಷ್ಣೆ ರೈತರ ಜಮೀನು ತಲುಪಿದ್ದರಿಂದ ಈ ಭಾಗದಲ್ಲಿ ಚಿನ್ನದಂತ ಬೆಳೆ ಕೈಗೆ ಬರುತ್ತಿದೆ. ಇದನ್ನು ನಾವೆಲ್ಲರೂ ಸ್ಮರಿಸಿಕೊಳ್ಳುವುದು ಅಗತ್ಯ’ ಎಂದು ಹೇಳಿದರು.</p>.<p>ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ನಗನೂರು ಮಾತನಾಡಿ, ‘ನಾರಾಯಣಪುರ ಹಾಗೂ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಾಣದ ಬಳಿಕ ಅಸಂಖ್ಯಾತ ರೈತರ ಜಮೀನುಗಳು ಮುಳುಗಡೆಯಾಗಿವೆ. ಆದ್ದರಿಂದ ಆ ಎಲ್ಲಾ ರೈತರನ್ನು ನೆನೆಯುತ್ತಾ ಕೃಷ್ಣೆಗೆ ಬಾಗಿನ ಅರ್ಪಿಸುತ್ತಿದ್ದೇವೆ. ಆ ರೈತರ ತ್ಯಾಗದ ಫಲವೇ ಇಂದು ನಾವು ನೆಮ್ಮದಿಯಿಂದ ಊಟ ಮಾಡುವಂತಾಗಿದೆ’ ಎಂದು ಹೇಳಿದರು.</p>.<p>‘ಮುಂದಿನ ದಿನಗಳಲ್ಲಿ ಕೂಡ ಜೀವನಾಡಿಯಾಗಿರುವ ಕೃಷ್ಣೆ ನೀರನ್ನು ಎಲ್ಲ ರೈತರು ಹಿತವಾಗಿ ಮತ್ತು ಮಿತವಾಗಿ ಬಳಸಿಕೊಳ್ಳುವ ಮೂಲಕ ಭೂಮಿಯ ಸತ್ವವನ್ನು ಕಾಪಾಡಿಕೊಳ್ಳೋಣ’ ಎಂದು ಹೇಳಿದರು.</p>.<p>ಈ ಸಂದರ್ಭದಲ್ಲಿ ಕ್ಷೇತ್ರ ಪುರೋಹಿತರಾದ ಚಿದಂಬರ ಭಟ್ ಜೋಶಿ, ಸಂಘದ ಶಂಕರ ನಾಯಕ್ ದೇವೇಂದ್ರ ಗೌಡ ಮಾಲಗತ್ತಿ, ಸಂಗೀತಾ ಶಹಾಪುರ ನಿರ್ಮಲಾ ಶಹಾಪುರ, ಸತೀಶ್ ರಸ್ತಪೂರ, ಈರಸಂಗಪ್ಪ ಕೊಡೆಕಲ್ಲ, ದ್ಯಾಮಣ್ಣ ರಾಯನಪಾಳ್ಯ ಅಮರೀಶ್ ಅರಕೇರಾ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ತಾಯಿ ಕೃಷ್ಣೆಯ ಕೃಪೆಯಿಂದ ಸುಮಾರು 5 ಜಿಲ್ಲೆಗಳ ರೈತರ ಜೀವನ ಮಟ್ಟ ಸುಧಾರಿಸುವಂತಾಗಿದೆ ಎಂದು ಗುಳಬಾಳ ಆನಂದಾಶ್ರಮದ ಮರಿ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.</p>.<p>ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯ ಛಾಯಾ ಭಗವತಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಹಮ್ಮಿಕೊಂಡಿದ್ದ ಕೃಷ್ಣೆಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.</p>.<p>‘ಬಸವಸಾಗರ ಜಲಾಶಯ ನಿರ್ಮಾಣಕ್ಕೂ ಮುನ್ನ ಈ ಭಾಗದಲ್ಲಿ ಬಹುತೇಕ ಬೆಳೆ ಇಲ್ಲದೆ ಜಮೀನುಗಳು ಭಣಗುಡುತ್ತಿದ್ದವು. ಜಲಾಶಯ ನಿರ್ಮಾಣದ ಬಳಿಕ ಕಾಲುವೆಯ ಮೂಲಕ ಕೃಷ್ಣೆ ರೈತರ ಜಮೀನು ತಲುಪಿದ್ದರಿಂದ ಈ ಭಾಗದಲ್ಲಿ ಚಿನ್ನದಂತ ಬೆಳೆ ಕೈಗೆ ಬರುತ್ತಿದೆ. ಇದನ್ನು ನಾವೆಲ್ಲರೂ ಸ್ಮರಿಸಿಕೊಳ್ಳುವುದು ಅಗತ್ಯ’ ಎಂದು ಹೇಳಿದರು.</p>.<p>ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ನಗನೂರು ಮಾತನಾಡಿ, ‘ನಾರಾಯಣಪುರ ಹಾಗೂ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಾಣದ ಬಳಿಕ ಅಸಂಖ್ಯಾತ ರೈತರ ಜಮೀನುಗಳು ಮುಳುಗಡೆಯಾಗಿವೆ. ಆದ್ದರಿಂದ ಆ ಎಲ್ಲಾ ರೈತರನ್ನು ನೆನೆಯುತ್ತಾ ಕೃಷ್ಣೆಗೆ ಬಾಗಿನ ಅರ್ಪಿಸುತ್ತಿದ್ದೇವೆ. ಆ ರೈತರ ತ್ಯಾಗದ ಫಲವೇ ಇಂದು ನಾವು ನೆಮ್ಮದಿಯಿಂದ ಊಟ ಮಾಡುವಂತಾಗಿದೆ’ ಎಂದು ಹೇಳಿದರು.</p>.<p>‘ಮುಂದಿನ ದಿನಗಳಲ್ಲಿ ಕೂಡ ಜೀವನಾಡಿಯಾಗಿರುವ ಕೃಷ್ಣೆ ನೀರನ್ನು ಎಲ್ಲ ರೈತರು ಹಿತವಾಗಿ ಮತ್ತು ಮಿತವಾಗಿ ಬಳಸಿಕೊಳ್ಳುವ ಮೂಲಕ ಭೂಮಿಯ ಸತ್ವವನ್ನು ಕಾಪಾಡಿಕೊಳ್ಳೋಣ’ ಎಂದು ಹೇಳಿದರು.</p>.<p>ಈ ಸಂದರ್ಭದಲ್ಲಿ ಕ್ಷೇತ್ರ ಪುರೋಹಿತರಾದ ಚಿದಂಬರ ಭಟ್ ಜೋಶಿ, ಸಂಘದ ಶಂಕರ ನಾಯಕ್ ದೇವೇಂದ್ರ ಗೌಡ ಮಾಲಗತ್ತಿ, ಸಂಗೀತಾ ಶಹಾಪುರ ನಿರ್ಮಲಾ ಶಹಾಪುರ, ಸತೀಶ್ ರಸ್ತಪೂರ, ಈರಸಂಗಪ್ಪ ಕೊಡೆಕಲ್ಲ, ದ್ಯಾಮಣ್ಣ ರಾಯನಪಾಳ್ಯ ಅಮರೀಶ್ ಅರಕೇರಾ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>