‘ಬಾಬುರಾವ ಚಿಂಚನಸೂರ ಅವರು ಬಿಜೆಪಿ ನನ್ನ ತಾಯಿ ಪಕ್ಷ ಎಂದು ಕಳೆದ 15 - 20 ದಿನಗಳ ಹಿಂದೆ ಹೇಳಿದ್ದರು. ತಾಯಿ ಮಗನ ಸಂಬಂಧವೆಂದು ತಾಯಿಗೆ ದ್ರೋಹ ಮಾಡುವುದು ಪಕ್ಷಕ್ಕೆ ದ್ರೋಹ ಮಾಡುವುದು ಒಂದೇ ಎಂದು ಹೇಳಿದ್ದರು. ಸೋತಿದ್ದರೂ ಬಿಜೆಪಿ ಅವರನ್ನು ಎಂಎಲ್ಸಿ, ನಿಗಮ ಮಂಡಳಿ ಅಧ್ಯಕ್ಷ ಮಾಡಿದೆ. ಅವರ ಶ್ರೀಮತಿಯವರನ್ನು ಕೇಂದ್ರದ ಆಹಾರ ನಿಗಮ ಮಂಡಳಿಗೆ ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಬಿಜೆಪಿಯನ್ನು ತಮ್ಮ ಐಷಾರಾಮಿಗಾಗಿ ಬಳಕೆ ಮಾಡಿ, ದ್ರೋಹ ಮಾಡಿದ್ದಾರೆ.
ಅವರು ಪಕ್ಷಕ್ಕೆ ಮಾತ್ರವಲ್ಲ ಕಬ್ಬಲಿಗ ಸಮುದಾಯಕ್ಕೂ ಮೋಸ ಮಾಡಿದ್ದಾರೆ. ಸ್ವಾಭಿಮಾನ, ದೈರ್ಯಕ್ಕೆ ಹೆಸರಾದ ಕಬ್ಬಲಿಗ ಸಮುದಾಯದ ಹೆಸರನ್ನು ಈ ರೀತಿಯಾಗಿ ಮೋಸ ಮಾಡಿದ್ದಕ್ಕೆ ನನ್ನ ಧಿಕ್ಕಾರವಿದೆ' ಎಂದು ಹೇಳಲಾದ ಆಡಿಯೋ ಸದ್ಯ ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ. ಆಡಿಯೋ ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಗಿರೀಶ ಮಟ್ಟೆಣ್ಣವರ ಅವರದ್ದು ಎನ್ನಲಾಗುತ್ತಿದೆ.