<p><strong>ಹುಣಸಗಿ</strong>: ‘ಹಿಂದೂಗಳಿಗೆ ಶ್ರಾವಣ ಮಾಸದಷ್ಟೇ ಕಾರ್ತಿಕ ಮಾಸವೂ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಮಾಸದಲ್ಲಿ ವಿಷ್ಣು, ಶಿವನ ಪೂಜೆ ಹಾಗೂ ಧಾತ್ರಿ ಪೂಜೆಯಿಂದ ಎಲ್ಲ ಇಷ್ಟಾರ್ಥಗಳನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ಬಳ್ಳಾರಿಯ ಸಾಯಿರಾಂ ರವಿಚಂದ್ರನ್ ಹೇಳಿದರು.</p>.<p>ಹುಣಸಗಿ ಪಟ್ಟಣದ ಹೊರವಲದಲ್ಲಿರುವ ಮದ್ದಿನಮನಿ ಕ್ಯಾಂಪ್ನಲ್ಲಿ ಭಾನುವಾರ ಕಮ್ಮಾವಾರಿ ಸಂಘದಿಂದ ಹಮ್ಮಿಕೊಂಡಿದ್ದ ಸತ್ಯನಾರಾಯಣ ಪೂಜಾ ಉತ್ಸವ ಹಾಗೂ ವನಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಚನ ನೀಡಿದರು.</p>.<p>‘ದೇವರ ಸ್ಮರಣೆಯೊಂದಿಗೆ ನಿತ್ಯ ಬೆಳಿಗ್ಗೆ ದೀಪಾರಾಧನೆ ಹಾಗೂ ಗಂಗಾರಾಧನೆ ಮಾಡುವದರಿಂದ ಆರೋಗ್ಯ ಸಂಪತ್ತು ಎಲ್ಲವೂ ಲಭಿಸುತ್ತದೆ. ಈ ಮಾಸದಲ್ಲಿ ಬ್ರಾಹ್ಮೀ ಮೂಹೂರ್ತದಲ್ಲಿ ಸಮುದ್ರ, ನದಿ ತೀರ್ಥ ಕ್ಷೇತ್ರಗಳಲ್ಲಿ ಸ್ನಾನ ಮಾಡುವದು ಅತ್ಯಂತ ಶ್ರೇಯಸ್ಸು ಎಂದು ಹೇಳಲಾಗುತ್ತದೆ’ ಎಂದರು.</p>.<p>ಮುರಳೀಧರಶಾಸ್ತ್ರಿ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಎಲ್ಲರಿಗೂ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.</p>.<p>ಕಮ್ಮವಾರಿ ಸಂಘದ ಹುಣಸಗಿ ತಾಲ್ಲೂಕು ಅಧ್ಯಕ್ಷ ಆರ್.ವೆಂಕಟರಾವ್, ಕಾರ್ಯದರ್ಶಿ ವಿ.ಸುರೇಶಬಾಬು, ಕೆ.ಕೇಶವರಾವ್, ಸುಭ್ರಮಣ್ಣೇಶ್ವರ, ಎ.ಜೆ.ನೆಹರು, ಮೋಹನರಾವ್ ಸುರಪುರ, ರಾಘವೇಂದ್ರ ಕೆಂಭಾವಿ, ರವಿ ಬೆನಕನಹಳ್ಳಿ, ಕೆ.ಎಚ್.ರವೀಂದ್ರ, ಸತ್ಯಬಾಬು, ಬಿ. ಶ್ರೀನಿವಾಸ ಅರಕೇರಾ ಕ್ರಾಸ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ‘ಹಿಂದೂಗಳಿಗೆ ಶ್ರಾವಣ ಮಾಸದಷ್ಟೇ ಕಾರ್ತಿಕ ಮಾಸವೂ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಮಾಸದಲ್ಲಿ ವಿಷ್ಣು, ಶಿವನ ಪೂಜೆ ಹಾಗೂ ಧಾತ್ರಿ ಪೂಜೆಯಿಂದ ಎಲ್ಲ ಇಷ್ಟಾರ್ಥಗಳನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ಬಳ್ಳಾರಿಯ ಸಾಯಿರಾಂ ರವಿಚಂದ್ರನ್ ಹೇಳಿದರು.</p>.<p>ಹುಣಸಗಿ ಪಟ್ಟಣದ ಹೊರವಲದಲ್ಲಿರುವ ಮದ್ದಿನಮನಿ ಕ್ಯಾಂಪ್ನಲ್ಲಿ ಭಾನುವಾರ ಕಮ್ಮಾವಾರಿ ಸಂಘದಿಂದ ಹಮ್ಮಿಕೊಂಡಿದ್ದ ಸತ್ಯನಾರಾಯಣ ಪೂಜಾ ಉತ್ಸವ ಹಾಗೂ ವನಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಚನ ನೀಡಿದರು.</p>.<p>‘ದೇವರ ಸ್ಮರಣೆಯೊಂದಿಗೆ ನಿತ್ಯ ಬೆಳಿಗ್ಗೆ ದೀಪಾರಾಧನೆ ಹಾಗೂ ಗಂಗಾರಾಧನೆ ಮಾಡುವದರಿಂದ ಆರೋಗ್ಯ ಸಂಪತ್ತು ಎಲ್ಲವೂ ಲಭಿಸುತ್ತದೆ. ಈ ಮಾಸದಲ್ಲಿ ಬ್ರಾಹ್ಮೀ ಮೂಹೂರ್ತದಲ್ಲಿ ಸಮುದ್ರ, ನದಿ ತೀರ್ಥ ಕ್ಷೇತ್ರಗಳಲ್ಲಿ ಸ್ನಾನ ಮಾಡುವದು ಅತ್ಯಂತ ಶ್ರೇಯಸ್ಸು ಎಂದು ಹೇಳಲಾಗುತ್ತದೆ’ ಎಂದರು.</p>.<p>ಮುರಳೀಧರಶಾಸ್ತ್ರಿ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಎಲ್ಲರಿಗೂ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.</p>.<p>ಕಮ್ಮವಾರಿ ಸಂಘದ ಹುಣಸಗಿ ತಾಲ್ಲೂಕು ಅಧ್ಯಕ್ಷ ಆರ್.ವೆಂಕಟರಾವ್, ಕಾರ್ಯದರ್ಶಿ ವಿ.ಸುರೇಶಬಾಬು, ಕೆ.ಕೇಶವರಾವ್, ಸುಭ್ರಮಣ್ಣೇಶ್ವರ, ಎ.ಜೆ.ನೆಹರು, ಮೋಹನರಾವ್ ಸುರಪುರ, ರಾಘವೇಂದ್ರ ಕೆಂಭಾವಿ, ರವಿ ಬೆನಕನಹಳ್ಳಿ, ಕೆ.ಎಚ್.ರವೀಂದ್ರ, ಸತ್ಯಬಾಬು, ಬಿ. ಶ್ರೀನಿವಾಸ ಅರಕೇರಾ ಕ್ರಾಸ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>