<p><strong>ಹುಣಸಗಿ:</strong> ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಧಾರಾಕಾರ ಮಳೆಯಾಗಿದ್ದು, ನದಿಯು ಅಪಾಯದ ಮಟ್ಟ ಮಿರಿ ಹರಿಯುತ್ತಿದೆ. ಒಂದು ವಾರದಿಂದ ಎರಡು ಲಕ್ಷ ಕ್ಯೂಸೆಕ್ಗೂ ಹೆಚ್ಚು ಪ್ರಮಾಣದ ನೀರು ಹರಿಯುತ್ತಿದೆ.</p>.<p>ನಾರಾಯಣಪುರದ ಬಸವಸಾಗರ ಜಲಾಶಯದ ಮಟ್ಟ ಕಾಯ್ದುಕೊಂಡು ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಕ್ರಸ್ಟ್ಗೇಟ್ಗಳ ಮೂಲಕ ಧುಮ್ಮಿಕ್ಕುವ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದರು. ನದಿಯ ಭೋರ್ಗರೆತವನ್ನು ಕಣ್ತುಂಬಿಕೊಳ್ಳಲು ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಗಳ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಪ್ರವಾಸಿಗರು ಪ್ರಮಾಣ ಕಡಿಮೆಯಿದೆ.</p>.<p>ಛಾಯಾ ಜಲಪಾತ ಮತ್ತು ದೇವಸ್ಥಾನದ ಮೇಲ್ಭಾಗದ ಬಳಿಯೂ ಪ್ರವಾಸಿಗರ ಸಂಖ್ಯೆ ಕಡಿಮೆಯಿದೆ. ಪ್ರವಾಹದಿಂದಾಗಿ ಐದು ದಿನಗಳಿಂದ ಛಾಯಾ ದೇವಿ ಉತ್ಸವ ಮೂರ್ತಿಯನ್ನು ಮೇಲ್ಭಾಗದಲ್ಲಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ ಎಂದು ಪುರೋಹಿತ ಚಿದಂಬರಭಟ್ಟ ಜೋಶಿ ಹೇಳಿದರು.</p>.<p>ಕಳೆದ ವರ್ಷ ಸುಮಾರು ಒಂದು ತಿಂಗಳಿಗೂ ಹೆಚ್ಚು ಜಲಾಶಯದ ಎದುರು ಭಜಿ, ಚಹಾ ಅಂಗಡಿ, ಜ್ಯೂಸ್ ಹಾಗೂ ಕುರುಕಲು ತಿನಿಸು ಮತ್ತು ಮೆಕ್ಕೆ ತೆನೆ ಅಂಗಡಿಗಳು ಇದ್ದವು. ವ್ಯಾಪಾರವೂ ಉತ್ತಮವಾಗಿತ್ತು. ಆದರೆ ಈ ಬಾರಿ ಪ್ರವಾಸಿಗರು ಕಡಿಮೆ ಇದ್ದುದರಿಂದಾಗಿ ವ್ಯಾಪಾರ ಹೆಚ್ಚಿಲ್ಲ ಎಂದು ಚಿಕ್ಕಉಪ್ಪೇರಿ ಗ್ರಾಮದ ಬಸವರಾಜ ತಿಳಿಸಿದರು.<br><br> ಜಲಾಶಯದ ಭದ್ರತೆಗೆ ಆದ್ಯತೆ: ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿದ್ದರು. ಆದರೆ ಜಲಾಶಯದ ಭದ್ರತೆ ಹಿನ್ನೆಲೆಯಲ್ಲಿ ಗುಂಪಾಗಿ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರವೇಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>‘ಪ್ರವಾಸಿಗರು ಬಂದು ಮುಖ್ಯ ಸೇತುವೆ ಮೇಲೆ ನಿಂತು ಹೋಗುತ್ತಾರೆ. ಆದರೆ ನೀರಿನ ಹರಿವು, ಅದರ ವೈಭವದ ಕುರಿತು ನೋಡುವ ಮತ್ತು ನಯನ ಮನೋಹರ ದೃಶ್ಯ ಅನುಭವಿಸುವಂತಹ ಸೌಲಭ್ಯ ನಿರ್ಮಿಸಬೇಕು ಎಂದು ಹುಣಸಗಿ ಬಸವರಾಜ ಸಜ್ಜನ, ಮಲ್ಲಣ್ಣ ಡಂಗಿ ಹೇಳಿದರು.</p>.<p>ಶುಕ್ರವಾರ ಸಂಜೆ ಜಲಾಶಯಕ್ಕೆ 2.55 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದು, 490.38 ಮಟ್ಟ ಕಾಯ್ದುಕೊಂಡು 2.61 ಲಕ್ಷ ಕ್ಯೂಸೆಕ್ ನೀರನ್ನು 30 ಕ್ರಸ್ಟ್ ಗೇಟ್ಗಳ ಮುಖಾಂತರ ಕೃಷ್ಣಾ ನದಿಗೆ ಹಾಗೂ 3 ಸಾವಿರ ಕ್ಯೂಸೆಕ್ ಎಡದಂಡೆ ಕಾಲುವೆಗೆ ಹಾಗೂ 1 ಸಾವಿರ ಕ್ಯೂಸೆಕ್ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿದೆ ಎಂದು ಜಲಾಶಯ ವಿಭಾಗೀಯ ಸಹಾಯಕ ಎಂಜಿನಿಯರ್ ವಿಜಯಕುಮಾರ ಅರಳಿ ಮಾಹಿತಿ ನೀಡಿದರು.</p>.<div><blockquote>ಜಲಾಶಯದ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡುತ್ತಿಲ್ಲ. ಆದರೆ ಶಾಲೆ–ಕಾಲೇಜುಗಳ ಮುಖ್ಯಸ್ಥರು ವೀಕ್ಷಣೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದರೆ ಅವಕಾಶ ನೀಡಲಾಗುತ್ತದೆ ಎ</blockquote><span class="attribution">ಚ್.ಬಿ.ಕೊಣ್ಣೂರ ಜಲಾಶಯ ವಿಭಾಗದ ಇಇ</span></div>.<div><blockquote>ಬಸವಸಾಗರ ಜಲಾಶಯವು ಸ್ಕಾಡಾ ತಂತ್ರಜ್ಞಾನದ ಗೇಟ್ ಹೊಂದಿರುವ ಕಾಲುವೆ ಜಾಲ ಹೊಂದಿದೆ. ಜತೆಗೆ ವೀಕ್ಷಣೆಗೆ ವೀವ್ ಪಾಯಿಂಟ್ ನಿರ್ಮಿಸುವ ಅಗತ್ಯವಿದೆ </blockquote><span class="attribution">ಶ್ರೀಕಾಂತ ಕುಲಕರ್ಣಿ ಲಿಂಗಸೂಗೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಧಾರಾಕಾರ ಮಳೆಯಾಗಿದ್ದು, ನದಿಯು ಅಪಾಯದ ಮಟ್ಟ ಮಿರಿ ಹರಿಯುತ್ತಿದೆ. ಒಂದು ವಾರದಿಂದ ಎರಡು ಲಕ್ಷ ಕ್ಯೂಸೆಕ್ಗೂ ಹೆಚ್ಚು ಪ್ರಮಾಣದ ನೀರು ಹರಿಯುತ್ತಿದೆ.</p>.<p>ನಾರಾಯಣಪುರದ ಬಸವಸಾಗರ ಜಲಾಶಯದ ಮಟ್ಟ ಕಾಯ್ದುಕೊಂಡು ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಕ್ರಸ್ಟ್ಗೇಟ್ಗಳ ಮೂಲಕ ಧುಮ್ಮಿಕ್ಕುವ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದರು. ನದಿಯ ಭೋರ್ಗರೆತವನ್ನು ಕಣ್ತುಂಬಿಕೊಳ್ಳಲು ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಗಳ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಪ್ರವಾಸಿಗರು ಪ್ರಮಾಣ ಕಡಿಮೆಯಿದೆ.</p>.<p>ಛಾಯಾ ಜಲಪಾತ ಮತ್ತು ದೇವಸ್ಥಾನದ ಮೇಲ್ಭಾಗದ ಬಳಿಯೂ ಪ್ರವಾಸಿಗರ ಸಂಖ್ಯೆ ಕಡಿಮೆಯಿದೆ. ಪ್ರವಾಹದಿಂದಾಗಿ ಐದು ದಿನಗಳಿಂದ ಛಾಯಾ ದೇವಿ ಉತ್ಸವ ಮೂರ್ತಿಯನ್ನು ಮೇಲ್ಭಾಗದಲ್ಲಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ ಎಂದು ಪುರೋಹಿತ ಚಿದಂಬರಭಟ್ಟ ಜೋಶಿ ಹೇಳಿದರು.</p>.<p>ಕಳೆದ ವರ್ಷ ಸುಮಾರು ಒಂದು ತಿಂಗಳಿಗೂ ಹೆಚ್ಚು ಜಲಾಶಯದ ಎದುರು ಭಜಿ, ಚಹಾ ಅಂಗಡಿ, ಜ್ಯೂಸ್ ಹಾಗೂ ಕುರುಕಲು ತಿನಿಸು ಮತ್ತು ಮೆಕ್ಕೆ ತೆನೆ ಅಂಗಡಿಗಳು ಇದ್ದವು. ವ್ಯಾಪಾರವೂ ಉತ್ತಮವಾಗಿತ್ತು. ಆದರೆ ಈ ಬಾರಿ ಪ್ರವಾಸಿಗರು ಕಡಿಮೆ ಇದ್ದುದರಿಂದಾಗಿ ವ್ಯಾಪಾರ ಹೆಚ್ಚಿಲ್ಲ ಎಂದು ಚಿಕ್ಕಉಪ್ಪೇರಿ ಗ್ರಾಮದ ಬಸವರಾಜ ತಿಳಿಸಿದರು.<br><br> ಜಲಾಶಯದ ಭದ್ರತೆಗೆ ಆದ್ಯತೆ: ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿದ್ದರು. ಆದರೆ ಜಲಾಶಯದ ಭದ್ರತೆ ಹಿನ್ನೆಲೆಯಲ್ಲಿ ಗುಂಪಾಗಿ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರವೇಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>‘ಪ್ರವಾಸಿಗರು ಬಂದು ಮುಖ್ಯ ಸೇತುವೆ ಮೇಲೆ ನಿಂತು ಹೋಗುತ್ತಾರೆ. ಆದರೆ ನೀರಿನ ಹರಿವು, ಅದರ ವೈಭವದ ಕುರಿತು ನೋಡುವ ಮತ್ತು ನಯನ ಮನೋಹರ ದೃಶ್ಯ ಅನುಭವಿಸುವಂತಹ ಸೌಲಭ್ಯ ನಿರ್ಮಿಸಬೇಕು ಎಂದು ಹುಣಸಗಿ ಬಸವರಾಜ ಸಜ್ಜನ, ಮಲ್ಲಣ್ಣ ಡಂಗಿ ಹೇಳಿದರು.</p>.<p>ಶುಕ್ರವಾರ ಸಂಜೆ ಜಲಾಶಯಕ್ಕೆ 2.55 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದು, 490.38 ಮಟ್ಟ ಕಾಯ್ದುಕೊಂಡು 2.61 ಲಕ್ಷ ಕ್ಯೂಸೆಕ್ ನೀರನ್ನು 30 ಕ್ರಸ್ಟ್ ಗೇಟ್ಗಳ ಮುಖಾಂತರ ಕೃಷ್ಣಾ ನದಿಗೆ ಹಾಗೂ 3 ಸಾವಿರ ಕ್ಯೂಸೆಕ್ ಎಡದಂಡೆ ಕಾಲುವೆಗೆ ಹಾಗೂ 1 ಸಾವಿರ ಕ್ಯೂಸೆಕ್ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿದೆ ಎಂದು ಜಲಾಶಯ ವಿಭಾಗೀಯ ಸಹಾಯಕ ಎಂಜಿನಿಯರ್ ವಿಜಯಕುಮಾರ ಅರಳಿ ಮಾಹಿತಿ ನೀಡಿದರು.</p>.<div><blockquote>ಜಲಾಶಯದ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡುತ್ತಿಲ್ಲ. ಆದರೆ ಶಾಲೆ–ಕಾಲೇಜುಗಳ ಮುಖ್ಯಸ್ಥರು ವೀಕ್ಷಣೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದರೆ ಅವಕಾಶ ನೀಡಲಾಗುತ್ತದೆ ಎ</blockquote><span class="attribution">ಚ್.ಬಿ.ಕೊಣ್ಣೂರ ಜಲಾಶಯ ವಿಭಾಗದ ಇಇ</span></div>.<div><blockquote>ಬಸವಸಾಗರ ಜಲಾಶಯವು ಸ್ಕಾಡಾ ತಂತ್ರಜ್ಞಾನದ ಗೇಟ್ ಹೊಂದಿರುವ ಕಾಲುವೆ ಜಾಲ ಹೊಂದಿದೆ. ಜತೆಗೆ ವೀಕ್ಷಣೆಗೆ ವೀವ್ ಪಾಯಿಂಟ್ ನಿರ್ಮಿಸುವ ಅಗತ್ಯವಿದೆ </blockquote><span class="attribution">ಶ್ರೀಕಾಂತ ಕುಲಕರ್ಣಿ ಲಿಂಗಸೂಗೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>